<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-29152559</id><updated>2011-10-30T02:02:56.871+09:00</updated><category term='ಕಾವ್ಯ'/><category term='ನನ್ನ ಜಪಾನ್ ಪ್ರವಾಸ'/><title type='text'>~ ಕನ್ನಡಪುಟ ~</title><subtitle type='html'>ಪುಟವಿಡಲು ನುಡಿಯೇನು, ನೆಲವೇನು ಹೊಳೆವುದೀ ನಾಡಿನಲಿ ಚಿನ್ನವಾಗಿ.......</subtitle><link rel='http://schemas.google.com/g/2005#feed' type='application/atom+xml' href='http://kannadaputa.blogspot.com/feeds/posts/default'/><link rel='self' type='application/atom+xml' href='http://www.blogger.com/feeds/29152559/posts/default?max-results=100'/><link rel='alternate' type='text/html' href='http://kannadaputa.blogspot.com/'/><link rel='hub' href='http://pubsubhubbub.appspot.com/'/><author><name>Buddha</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><generator version='7.00' uri='http://www.blogger.com'>Blogger</generator><openSearch:totalResults>18</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-29152559.post-1979442636549027567</id><published>2007-03-09T02:56:00.000+09:00</published><updated>2007-03-09T03:16:10.754+09:00</updated><category scheme='http://www.blogger.com/atom/ns#' term='ನನ್ನ ಜಪಾನ್ ಪ್ರವಾಸ'/><title type='text'>೧೨. ನಾ ತಿಂದ 'ನಾನು'!</title><content type='html'>&lt;div align="center"&gt;&lt;br /&gt;&lt;span style="color:#000099;"&gt;&lt;strong&gt;ನನ್ನ ಜಪಾನ್ ಪ್ರವಾಸ : ೧೨. ನಾ ತಿಂದ 'ನಾನು'!&lt;/strong&gt;&lt;br /&gt;&lt;strong&gt;--------------------------------------------&lt;/strong&gt; &lt;/span&gt;&lt;br /&gt;&lt;/div&gt;&lt;br /&gt;"ಲೋ! ನೀನೇನಾದ್ರೂ ಹೀಗೇ ಲೆಕ್ಕ ಹಾಕುತ್ತಿದ್ದರೇ . . ಅಷ್ಟೇ ನೀನೇನೂ ಎಂಜಾಯ್ ಮಾಡಕ್ಕಾಗಲ್ಲವೋ" ಎಂದು ಗೋವರ್ಧನ್ ಗದರಿಕೊಂಡ.&lt;br /&gt;&lt;br /&gt;ನಾನು "ಹಾಗಂತೀಯಾ. . ಸರಿ ಒಪ್ಪಿದೆ ; ನಡಿ ಹೋಗೋಣ" ಎಂದೆ.&lt;br /&gt;&lt;br /&gt;ಈ ಮಾತು ಶುರುವಾಗಿದ್ದು ಭಾರತೀಯ ಉಪಾಹಾರಗೃಹಕ್ಕೆ ಹೋಗೋಣ ಎಂದವನು ರಾಗ ತೆಗೆದಾಗ!! ನನಗೇನೋ ಒಪ್ಪಿಗೆಯೇ. . ಆದರೆ ಒಪ್ಪೊತ್ತಿನ ಊಟಕ್ಕೇ ೧೦೦೦ದಿಂದ ೨೦೦೦ ಯೆನ್ ಖರ್ಚಾಗುತ್ತದೆ ಎಂದಾಗ ಹೌಹಾರಿ ಬೇಡಪ್ಪಾ ಎಂದೆ!&lt;br /&gt;&lt;br /&gt;"ಲೋ ಭಟ್ಟಾ! ನಡಿಯೋ ಸ್ವಲ್ಪ ಒಳ್ಳೇ ಊಟ ಮಾಡೋಣ" ಎಂದು ಎಳೆದುಕೊಂಡು ಹೋದ!! ಜೊತೆಗೆ ವರ್ಣೇಕರನೂ ಬಂದ . ನಾವೆಲ್ಲರೂ ನುಗ್ಗಿದ್ದು ಓಸಾಕಾದ ದೋತೊಂಬೊರಿ( ಕೊತ್ತಂಬರಿ ಅಲ್ಲಾರೀ. . .) ಯಲ್ಲಿದ್ದ ಒರಿಸ್ಸಾ ಮೂಲದ ಖಾನಾವಳಿ "ಸಂತಾನ"ಕ್ಕೆ. ಇದ್ಯಾವ ಸಂತಾನವೋ ಕಾಣೆ ಎಂದುಕೊಂಡು ಒಳನಡೆದೆ. ಮೆನು ಬಂತು; ನಾನು ನೋಡಿದೆ - ಇದ್ದುದರಲ್ಲಿಯೇ ಅತಿಕಡಿಮೆ ಬೆಲೆಯ ಬೆಳಗಿನ ಊಟ ೧೨೫೦ ಯೆನ್. ವಿಧಿಯಿಲ್ಲದೆ ಅದನ್ನೇ ತರಿಸಿದೆವು. ಉತ್ತರ ಭಾರತದ 'ಥಾಲಿ' ಊಟ - ೨ ವಿಧದ 'ಕರಿ', ಗರಿಗರಿ ಪಕೋಡ, ಪುದೀನ ಚಟ್ನಿ, ಒಂದು ಬಟ್ಟಲು ಬಟಾಣಿ-ತರಕಾರಿಯ ಚಿತ್ರಾನ್ನ, ಸ-ಮೋಸ ಮತ್ತೊಂದು ನಾನು!&lt;br /&gt;&lt;br /&gt;"ನಾ ನಾನೆಂದರೆ ನಾನಲ್ಲ! ಈ ಮಾನವ ಜನ್ಮವು ನಾನಲ್ಲ!".....ಶಿಶುನಾಳ ಶರೀಫರ ನೆನಪಾಯಿತೇ? ಅಂಥ ಗಹನಾರ್ಥವೇನಿಲ್ಲ ಬಿಡಿ; ಆ ನಾನು ಈ ನಾನಲ್ಲ; ಇದು ತಿನ್ನುವ 'ನಾನು'. ಅಂದರೆ 'ನಾನ್' ರೊಟ್ಟಿ! ತಿಂಗಳಿನಿಂದ ಸರಿಯಾಗಿ ಊಟ ಮಾಡಿರಲಿಲ್ಲ ನೋಡಿ-ಸರಿಯಾಗಿ ಜಡಿದೆ! ಆಮೇಲೆ ಖಾನಾವಳಿಯ ಯಜಮಾನನಿಂದ ಮಸಾಲೆ ಚಹಾ ಬೇರೆ ಬಂತು! ಭಲಾ ಎಂದುಕೊಂಡೆ. ಅಲ್ಲಿದ್ದವರಿಗೆ ವರ್ಣೇಕರ ಬಹಳ ಪರಿಚಿತನೋ ಏನೋ,ಬಹಳ ಮಾತನಾಡುತ್ತಿದ್ದ! ಕೊನೆಗೆ ನನ್ನ ಪರಿಚಯ ಅಡುಗೆ ಭಟ್ಟರಿಗೆ! ಅವರಿಗಾಗಲೇ 'ಕುಮಾರ್' ಎಂಬ ಹೆಸರು ಕೇಳಿ ಕೇಳಿ ಸಾಕಾಗಿತ್ತೇನೋ,&lt;br /&gt;&lt;br /&gt;"ಇವರೂ ಕುಮಾರ್ ಅಲ್ಲ ತಾನೇ?" ಎಂದರು.&lt;br /&gt;&lt;br /&gt;ಗೋವರ್ಧನನೆಂದ "ನಾವೆಲ್ಲರೂ ಶಾಸ್ತ್ರೀ ಎನ್ನುತ್ತೇವೆ".&lt;br /&gt;&lt;br /&gt;ಈಗ ಅವರಿಗೆ ಸಮಾಧಾನ - ಕರೆಯಲು ಬೇರೆ ಹೆಸರಿದೆಯಲ್ಲಾ ಎಂದು. ಅದುವರೆಗೂ ತಿಂಡಿ ತಿನಿಸು ತಂದಿಟ್ಟು ಜಪಾನೀ ಭಾಷೆಯಲ್ಲಿ ಪಟಪಟನೆ ಮಾತನಾಡುತ್ತಿದ್ದ ಮತ್ತೊಬ್ಬ ಭಾರತೀಯ ಅಲ್ಲಿದ್ದ! ಅವನೇ ಕುನ್ನ - ಕುನ್ನ ದಾಸ್ - ಒರಿಸ್ಸಾದವನು; ಅಂಗಡಿಯ ಮಾಲೀಕ!&lt;br /&gt;&lt;br /&gt;"ನಿಮ್ಮ ಜಪಾನೀ ಭಾಷೆ ಸಿಕ್ಕಾಪಟ್ಟೆ ವೇಗವಾಗಿದೆ" ಎಂದೆ!&lt;br /&gt;&lt;br /&gt;"ಅದೇನಿಲ್ಲ, ೧೦ ವರ್ಷದಿಂದ ಇಲ್ಲಿದ್ದೇನೆ ಅದಕ್ಕೇ ಹೀಗೆ; ನೀವೂ ಇದ್ದರೆ ನೀವೂ ಹಾಗೇ" ಎಂದ.&lt;br /&gt;&lt;br /&gt;ಗೋವರ್ಧನ ಕನ್ನಡದಲ್ಲಿ ಕಿವಿಯೊಳಗೂದಿದ "ಅವನ ಹೆಂಡತಿ ಜಪಾನೀ ಕಣಯ್ಯಾ - ಅವನೇನು ಮಜವಾಗಿದ್ದಾನೆ!!" ನಾನು ಅಚ್ಚರಿಗೊಂಡೆ! ಗೋವರ್ಧನ ಕುನ್ನನಿಗೆ ನನ್ನ ಪೂರ್ವಾಪರಗಳನ್ನೆಲ್ಲ ಅಚ್ಚುಕಟ್ಟಾಗಿ ಹೇಳಿದ.&lt;br /&gt;&lt;br /&gt;ಕುನ್ನನಿಗೆ ಖುಷಿ - "ಶಾಸ್ತ್ರೀಜಿ, ಆಪ್ ಆತೇ ರಹಿಯೇ. . ಆಪ್‍ಕೀ ಶಾಸ್ತ್ರ್‌ಸೇ ಬಹುತ್ ಕುಛ್ ಹೋತಾ ಹೈ" ಎಂದ. ಆಗಲೆಂದೆ.&lt;br /&gt;ಅಷ್ಟರಲ್ಲಿ ಅಡುಗೆ ಮನೆಯಿಂದ ಬಂದ 'ಪರಮಾನಂದ' ಕೈ ಮುಂಚಾಚಿ "ಪಂಡಿತ್‍ಜೀ, ಬೋಲಿಯೇ ಹಮಾರಾ ಭವಿಷ್ಯ್ ಮೇ ಕ್ಯಾ ಹೈ?" ಎಂದ.&lt;br /&gt;ಕುನ್ನನೂ ಬಂದ, ಮತ್ತೊಬ್ಬನೂ ಬಂದ! ಎಲ್ಲ, ಬಹುಕಾಲದ ಮಿತ್ರರಂತೆ ಮಾತನಾಡಿದೆವು. ಎಲ್ಲ ಖುಷಿಯಾದರು. "ಪಂಚಾಂಗ ಹೊರತೆಗೆವ ಕಾಲ ಬಂದಿದೆ" ಎಂದುಕೊಂಡೆ.&lt;br /&gt;&lt;br /&gt;ಕುನ್ನನೆಂದ- "ನೀವು ಜಪಾನೀ ಭಾಷೆಯಲ್ಲಿ ಹೇಳುವಿರಾದರೆ ಇಲ್ಲಿ ಬಹಳವಾಗಿ ಮಿತ್ರರಾಗುವವರಿದ್ದಾರೆ; ನೀವು ಬನ್ನಿ ಪರಿಚಯಿಸುತ್ತೇನೆ".&lt;br /&gt;ಸಾಲದ್ದಕ್ಕೆ "ಮತ್ತೆ ಭಾರತಕ್ಕೆ ಹೋಗಬೇಕಾದಲ್ಲಿ ಹೇಳಿ, ರಿಯಾಯ್ತಿ ದರದಲ್ಲಿ ಟಿಕೆಟ್ ಕೊಡಿಸುತ್ತೇನೆ" ಎಂದ.&lt;br /&gt;&lt;br /&gt;ಭಲಾ ಎಂದುಕೊಂಡೆ! ವಂದನೆ ಹೇಳಿ ೧೨೫೦ ಯೆನ್ ಕೊಟ್ಟು ಹೊರಬಿದ್ದೆವು. ನಾನು ತೆರಿಗೆ ತೆಗೆದುಕೊಳ್ಳುವುದಿಲ್ಲ" ಎಂದ ಕುನ್ನ. ಜಪಾನಿನಲ್ಲಿ ಎಲ್ಲಿ ಏನು ಕೊಂಡರು ೫% ಗ್ರಾಹಕ ತೆರಿಗೆ ಕೊಡಲೇಬೇಕು!! ಇವನು ಬೇಡವೆಂದ!'ಏನೋ ಐತ್ರೀ ಸಮಾಚಾರ' ಎಂದುಕೊಂಡು ಸುಮ್ಮನಾದೆ; ಹೊರಬಿದ್ದ ಮೇಲೆ ಕೇಳಿದರೆ ಗೋವರ್ಧನನೆಂದ-&lt;br /&gt;" ಅವನು ಒಳ್ಳೆಯವ; ಯಾವಾಗಲೂ ಹಾಗೆಯೇ ಏನಾದರೊಂದು 'ಬಿಟ್ಟಿ' ಇದ್ದೇ ಇರುತ್ತದೆ; ಕಳೆದ ಬಾರಿ ಮಾವಿನ ಲಸ್ಸಿ ಸಾಬಿಸು[=ಸರ್ವಿಸ್; ಉಚಿತ]" ಎಂದ.&lt;br /&gt;&lt;br /&gt;"ಪರವಾಗಿಲ್ಲವೇ, ಅಷ್ಟು ಒಳ್ಳೇ ಬುದ್ಧಿಯೇ?" ಎಂದೆ.&lt;br /&gt;&lt;br /&gt;"ಭಾರತೀಯರಿಗೆ ಮಾತ್ರ ಕಣಯ್ಯಾ ಶಾಸ್ತ್ರೀ" ಎಂದ ವರ್ಣೇಕರ್.&lt;br /&gt;&lt;br /&gt;ಅಷ್ಟರಲ್ಲಿ ಬಂತು ತೇಗು!! ನಾ ತಿಂದ 'ನಾನು' ಕೆಲಸ ಶುರು ಮಾಡಿತ್ತು! ಜೊತೆಗೆ ಒಳ್ಳೆಯ ವಿಚಾರವೊಂದು ನನ್ನ ತಲೆಯೊಳಗೇ ಮಥಿಸತೊಡಗಿತ್ತು!! ಮೆಟ್ಟಿಲಿಳಿದು ಬರುತ್ತಾ ತಿರುಗಿ ನೋಡಿ. . "ಸಂತಾನ. . ಹ್ಂ. . ಒಳ್ಳೆಯ ಜಾಗ ನನ್ನ ವಿಚಾರ ವಿನಿಮಯಕ್ಕೆ " ಎಂದುಕೊಂಡೆ.&lt;br /&gt;&lt;br /&gt;&lt;br /&gt;ಅಂದಿನಿಂದ ಶುರುವಾಯಿತು ನನ್ನ 'ಸಂತಾನ'ದ ಸಂಬಂಧ!! ಪ್ರತಿ ಶನಿವಾರ ನಾನು ಹಾಜರ್. ನನಗಾಗಿ ಜಪಾನೀ ಮಿತ್ರರೂ ಹಾಜರ್. ಮಧ್ಯೆ ನಿಂತವ ಕುನ್ನ! ನಿಜವಾಗಿ ನನಗೆ ಬೇಕಾಗಿದ್ದುದು, ಜಪಾನೀ ಭಾಷೆಯಲ್ಲಿ ಸಂಭಾಷಣೆ. ಜಪಾನಿನ ವಿವಿಧ ಕೋನಗಳ ವಿಶ್ಲೇಷಣೆ! ಅದಕ್ಕಾಗಿ ಜಪಾನೀ ಮಿತ್ರರ ಅನ್ವೇಷಣೆ! ನನಗೆ ಬೇಕಿದ್ದುದು ನಾ ಹೇಳಿದ್ದಕ್ಕೆ ತಲೆಯಾಡಿಸುವ, ಹೆದರುವ ಕಕ್ಷಿದಾರರಲ್ಲ!! ನಾ ಹೇಳಿದ ಭವಿಷ್ಯಕ್ಕೆ ಬೆಕ್ಕಸ ಬೆರಗಾಗುವವರೂ ಅಲ್ಲ! ನಿಜವಾಗಿ 'ಸತ್ತುಹೋದ' ಜಪಾನೀಯತೆಯ ಬೇರನ್ನು ಮತ್ತೆ ಚಿಗುರಿಸಬಲ್ಲವರು!! ಅದಕ್ಕೆ ಅವರಿಗರ್ಥವಾಗುವಂತೆ ಮಾಡಲು ನಾ ಬಳಸಿಕೊಂಡ ಅದ್ಭುತ ಅಸ್ತ್ರ ಜ್ಯೋತಿಷಶಾಸ್ತ್ರ! ಇರಲಿ ನಾನೇನೂ ಸುಳ್ಳು ಹೇಳುವುದಿಲ್ಲ ಬಿಡಿ; ಅದು ನನ್ನ ಧರ್ಮಕ್ಕೆ ವಿರುದ್ಧ! ಅವರನ್ನು 'ಅತಿ ಅಮೆರಿಕೀಕರಣ' ದಿಂದ ಜಪಾನೀಯತೆಗೆ ಹಿಂದೆಳೆಯಲು ಒಂದು ಯಕ್ಷಿಣಿಯಂತಹ ವಿದ್ಯೆ ಅವಶ್ಯವೆಂದು ನಾ ಬಲ್ಲೆ! ನನಗೆ ಗೊತ್ತಿದ್ದ ವಿದ್ಯೆಯನ್ನು ಅವರೆಲ್ಲರ ಸಂತೋಷಕ್ಕೆ ಬಳಸಿದೆ!&lt;br /&gt;&lt;br /&gt;ನಾ ಎಡವಲಿಲ್ಲ! ಕಾದಿತ್ತು ಅತ್ಯದ್ಭುತ ಯಶಸ್ಸು! ಜಪಾನೀಯತೆಯ ಚಿಗುರಿಗೆ ಭಾರತದ ನೀರೆರೆದೆ! ಆಗಲೂ, ಈಗಲೂ ಮನಸ್ಸಿನಲ್ಲಿ ಒಂದೇ - "ನೀನೊಲಿದರೆ ಕೊರಡು ಕೊನರುವುದಯ್ಯಾ . . . !"&lt;br /&gt;&lt;br /&gt;(ಮುಂದಿನ ಬಾರಿ: ೧೩. ಸಂತೆಯಲ್ಲಿ ನಾ ಸಂತ!)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/29152559-1979442636549027567?l=kannadaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaputa.blogspot.com/feeds/1979442636549027567/comments/default' title='Post Comments'/><link rel='replies' type='text/html' href='http://www.blogger.com/comment.g?blogID=29152559&amp;postID=1979442636549027567' title='4 Comments'/><link rel='edit' type='application/atom+xml' href='http://www.blogger.com/feeds/29152559/posts/default/1979442636549027567'/><link rel='self' type='application/atom+xml' href='http://www.blogger.com/feeds/29152559/posts/default/1979442636549027567'/><link rel='alternate' type='text/html' href='http://kannadaputa.blogspot.com/2007/03/blog-post.html' title='೧೨. ನಾ ತಿಂದ &apos;ನಾನು&apos;!'/><author><name>Buddha</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>4</thr:total></entry><entry><id>tag:blogger.com,1999:blog-29152559.post-3225111114087686127</id><published>2007-02-17T06:41:00.000+09:00</published><updated>2007-02-17T07:53:21.631+09:00</updated><category scheme='http://www.blogger.com/atom/ns#' term='ನನ್ನ ಜಪಾನ್ ಪ್ರವಾಸ'/><title type='text'>೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ</title><content type='html'>&lt;div align="center"&gt;&lt;strong&gt;&lt;span style="color:#000099;"&gt;ನನ್ನ ಜಪಾನ್ ಪ್ರವಾಸ: ೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ&lt;/span&gt;&lt;/strong&gt;&lt;/div&gt;&lt;br /&gt;&lt;br /&gt;&lt;br /&gt;ಹೆಸರಲ್ಲೇನಿದೆ? ಎನ್ನುವವರಿರಬಹುದು; ಹೆಸರಲ್ಲೇ ಎಲ್ಲವೂ ಅಡಗಿದೆ ಎನ್ನುವವರೂ ಇರಬಹುದು. ಜಪಾನೀಯರ ಹೆಸರಿನಲ್ಲಿ ನನಗೆ ಮಾತ್ರ ನಗುವಿದೆ! ಹೆಸರು ಆಯಾ ಭಾಷೆಯ, ಪ್ರದೇಶದ ವೈಶಿಷ್ಟ್ಯ; ಅದರಲ್ಲಿ ಅಪಹಾಸ್ಯ ಮಾಡುವುದು ಸರಿಯಲ್ಲ ಎನ್ನುವಿರೇನೋ. ಅಪಹಾಸ್ಯಕ್ಕಲ್ಲವಾದರೂ, ಕೆಲವೊಮ್ಮೆ ಕೆಲವು ಹೆಸರುಗಳನ್ನು ಕೇಳಿದೊಡನೆ ಅದರರ್ಥ ಕನ್ನಡದಲ್ಲಿ ಚಕ್ಕನೆ ಹೊಳೆದು ನಾಭಿಯಿಂದ ನಗೆಯುಕ್ಕಿಬರುತ್ತದೆ. ನದಿ ಮೂಲ, ಋಷಿ ಮೂಲ ಕೆದಕಬಾರದು; ಜಪಾನೀ ಹೆಸರಿನ ಅರ್ಥ ಹುಡುಕಬಾರದು ಅನ್ನುವುದು ನನಗೆ ಗೊತ್ತಿತ್ತು. ದಕ್ಷಿಣ-ಉತ್ತರ ಭಾರತದವರಿಗೇ ಪರಸ್ಪರ ನಗೆ ತರಿಸುವ ಭಾರತೀಯ ಹೆಸರುಗಳಿರುವಾಗ, ನನ್ನ ನಗೆಯ ಬಗೆಗೆ ಅಚ್ಚರಿಯೇನಿಲ್ಲ ಬಿಡಿ. ಮೊದಲ ಬಾರಿ ಬಸಪ್ಪ ಉಳ್ಳಾಗಡ್ಡಿ, ಶರಣಪ್ಪ ಮೆಣಸಿನಕಾಯಿ ಎಂದೆಲ್ಲ ಕೇಳಿದಾಗ ಬಿದ್ದು ಬಿದ್ದು ನಕ್ಕಿದ್ದೆ! ತರಕಾರಿಯ ಹೆಸರನ್ನು ಕುಟುಂಬ ನಾಮಧೇಯವಾಗಿ ಬಳಸುವ ಜನವಿದ್ದಾರೆಂದು ನನಗೆ ತಿಳಿದದ್ದೇ ಆಗ! ಆದರೆ ಅದರ ಹಿನ್ನೆಲೆಯನ್ನು ಹುಡುಕುವ ಮನಸ್ಸಾಗಿದ್ದು ಜಪಾನೀ ಹೆಸರುಗಳ ಹಿನ್ನೆಲೆ ತಿಳಿಯಲಾರಂಭಿಸಿದ ನಂತರ. ಏಕೆಂದರೆ ಜಪಾನೀ ಹೆಸರುಗಳೂ ಕನ್ನಡದಲ್ಲಿ 'ಕಲ್ಲುಬಾವಿ', 'ಕರಿಮರ', 'ದೊಡ್ಡಬಯಲು', 'ಎದುರುಗದ್ದೆ' ಇತ್ಯಾದಿ ಬೇಸಾಯ ಸಮುದಾಯದ ಹೆಸರುಗಳೇ!&lt;br /&gt;&lt;br /&gt;&lt;br /&gt;ಜಪಾನೀಯರ ಹೆಸರಿನಲ್ಲಿ ಎರಡು ಭಾಗಗಳಿವೆ: ಕುಟುಂಬನಾಮ ಹಾಗೂ ನಿಜನಾಮ. ಕುಟುಂಬನಾಮ ಬಹುಶಃ ಕೃಷಿಕ ಸಮುದಾಯದ, ನಿಸರ್ಗದ ನಡುವಿನ ಅಥವಾ ಬೆಸ್ತ ಸಮುದಾಯದ ಹಿನ್ನೆಲೆ ಹೊಂದಿದ ಹೆಸರುಗಳು. ನಿಜನಾಮ ಅವರವರ ಸ್ವಂತ ಹೆಸರುಗಳು. ತನಕ, ಯಮದ, ತೊಯೊತ, ಮತ್ಸುದ, ಹೊಂದ, ಕವಸಕಿ ಇವೆಲ್ಲ ಕುಟುಂಬನಾಮಗಳು; ಹರುಒ, ಮಸತೊ, ತತ್ಸುಜಿ ಇತ್ಯಾದಿ ಗಂಡಸರ ಹೆಸರಾದರೆ ನತ್ಸುಎ, ಜುಂಕೊ, ಸೆತ್ಸುಕೊ ಇತ್ಯಾದಿ ಹೆಂಗಸರ ಹೆಸರುಗಳು. ಎವೆರೆಸ್ಟ್ ಶಿಖರವನ್ನೇರಿದ ಮೊದಲ ಮಹಿಳೆ ಜಪಾನಿನ 'ಜುಂಕೊ ತಬಿ' ಯಲ್ಲಿ ಜುಂಕೊ(=ಸುಕನ್ಯಾ) ಆಕೆಯ ಹೆಸರು; 'ತಬಿ'(=ಪ್ರವಾಸ) ಕುಟುಂಬನಾಮ. ಸಾಮಾನ್ಯವಾಗಿ ಎಲ್ಲರೂ ಕುಟುಂಬನಾಮವನ್ನೇ ಇಲ್ಲಿ ಬಳಸುವುದು, ವ್ಯವಹರಿಸುವುದು. ಸ್ಥಳದ ಹೆಸರೂ ಕುಟುಂಬನಾಮದಂತೆಯೇ ಇರುತ್ತದೆಯಾದ್ದರಿಂದ, ಹೆಸರಿಗೆ ಪ್ರಾದೇಶಿಕ ಸೊಗಡೂ ಇದೆ. &lt;strong&gt;ತೊಯೊತ&lt;/strong&gt; ಎಂದರೆ 'ಫಲವತ್ತಾದ ಗದ್ದೆ', &lt;strong&gt;ಮತ್ಸುಶಿತ&lt;/strong&gt; ಎಂದರೆ 'ಪೈನ್‍ಮರದ ಕೆಳಗೆ', &lt;strong&gt;ಕವಸಕಿ&lt;/strong&gt; ಎಂದರೆ 'ನದಿಯ ಮುಂದೆ', &lt;strong&gt;ಸುಝುಕಿ&lt;/strong&gt; ಎಂದರೆ 'ಗಂಟೆಮರ' ಇತ್ಯಾದಿ ಇತ್ಯಾದಿ.&lt;br /&gt;&lt;br /&gt;&lt;br /&gt;ಇವೆಲ್ಲ ನಿಸರ್ಗದೊಸಗೆಯ ಹೆಸರುಗಳಾದ್ದರಿಂದ, ತಮಾಷೆಯೇನೂ ಇಲ್ಲ; ಆದರೆ &lt;strong&gt;'ಓಜಿರಿ'&lt;/strong&gt;(ದೊಡ್ಡಕುಂಡಿ), &lt;strong&gt;'ಓಯ'&lt;/strong&gt;(ದೊಡ್ಡಬಾಣ), &lt;strong&gt;'ನೀಹೊರಿ'&lt;/strong&gt;(ಹೊಸಹಳ್ಳ), &lt;strong&gt;'ಕೊಇಝುಮಿ'&lt;/strong&gt;(ಸಣ್ಣಬುಗ್ಗೆ) ಎಂಬ ಹೆಸರುಗಳ ಅರ್ಥ ಫಕ್ಕನೆ ಹೊಳೆದು, ಆ ವ್ಯಕ್ತಿಗಳ ಮುಖದೊಂದಿಗೆ ಕಲ್ಪಿಸಿಕೊಳ್ಳುತ್ತಲೇ ಅದೇಕೋ ನಗೆ ಕಾರಂಜಿಯಂತೆ ಚಿಮ್ಮಿಬರುತ್ತಿತ್ತು; ಈಗ ಅಭ್ಯಾಸವಾಗಿಹೋಗಿದೆಯೆನ್ನಿ. ಕೆಲವೊಮ್ಮೆ ಕೆಲವು ಹೆಸರುಗಳ ಅರ್ಥ ಹೊಳೆಯುವ ಮೊದಲೇ ಅದರ ಯಮಕ-ಪ್ರಾಸಗಳ ಸದ್ದಿಗೇ ನಗೆಯುಕ್ಕಿಬರುತ್ತಿತ್ತು. &lt;strong&gt;'ಅಸಕುಸ'&lt;/strong&gt;ದ ದೇಗುಲಕ್ಕೋ, &lt;strong&gt;'ಅಕಸಕ'&lt;/strong&gt;ದ ರಾಜಭವನಕ್ಕೋ ಹೋಗಿಬಂದೆವೆಂದು ಮನೆಯವರಿಗೆ ದೂರವಾಣಿ ಕರೆಮಾಡಿದಾಗ ಹೇಳಿದರೆ, ಆ ಹೆಸರು ಕೇಳಿಯೇ ಮನೆಯವರು ಎರಡು ನಿಮಿಷ ನಕ್ಕ ಉದಾಹರಣೆಯೂ ಇಲ್ಲದಿಲ್ಲ. ಎಲ್ಲಕ್ಕಿಂತ ನಗೆ ಬರಿಸಿದ್ದೆಂದರೆ ಜಪಾನ್ ರಾಜಕುಟುಂಬದ ಹೆಸರುಗಳು. ವಿಸ್ಮಯವೆಂದರೆ, ಎಷ್ಟೋ ಜಪಾನೀಯರಿಗೇ ಅವರ ಚಕ್ರವರ್ತಿಯ ಹೆಸರು ತಿಳಿದಿರುವುದಿಲ್ಲ! ನಾನೂ ನಿಮ್ಮಂತೆಯೇ ತಲೆಕೊಡವಿ, ಕುತೂಹಲದಿಂದ ಜಪಾನೀ ಯುವತಿಯೊಬ್ಬಳನ್ನು ಕೇಳಿಯೇಬಿಟ್ಟೆ:&lt;br /&gt;&lt;br /&gt;"ನಿಮ್ಮ ಚಕ್ರವರ್ತಿಯ ಹೆಸರೇನು?"&lt;br /&gt;&lt;br /&gt;"ಹೇಏಏಏಏಏ.... ಚಕ್ರವರ್ತಿಯ ಹೆಸರೇ? ಒಳ್ಳೆ ತಮಾಷೆ ಪ್ರಶ್ನೆ ಕೇಳಿದಿರಿ; ಚಕ್ರವರ್ತಿಗೆ ಹೆಸರೆಲ್ಲಿದೆ?" ಎನ್ನುತ್ತಾ ರಾಗ ತೆಗೆದವಳೇ, "ತೆನ್ನೋ ವ ತೆನ್ನೋ ದಯೊ! [=ಚಕ್ರವರ್ತಿ ಚಕ್ರವರ್ತಿಯೇ ಕಣ್ರೀ!]" ಎನ್ನುತ್ತಾ ತಿಪ್ಪೆ ಸಾರಿಸಿಬಿಟ್ಟಳು.&lt;br /&gt;&lt;br /&gt;&lt;br /&gt;ಅವಳೇನೋ ಬಿಟ್ಟಳು; ನಾನು ಬಿಡಬೇಕಲ್ಲ! ಎಲ್ಲೆಲ್ಲೋ ಅಂತರ್ಜಾಲದಲ್ಲಿ ಹುಡುಕಿ ತೆಗೆದೆ. ಚಕ್ರವರ್ತಿಗೆ ಕುಟುಂಬನಾಮವಿದ್ದರೂ, ಆನುವಂಶಿಕವಾಗಿ ಆ ಕುಟುಂಬದವರೇ ಚಕ್ರವರ್ತಿಗಳಾಗುವುದರಿಂದ ಕುಟುಂಬನಾಮ 'ಚಕ್ರವರ್ತಿ' ಎಂದೇ ಪ್ರಸಿದ್ಧ! ಆದರೆ ಅವರ ನಿಜನಾಮ ಹಾಗೂ ರಾಜನಾಮ ಎರಡೂ ಇವೆ. ಚಕ್ರವರ್ತಿ 'ಹಿರೊಹಿತೊ' ನ ಮಗ 'ಅಕಿಹಿತೊ' ಎನ್ನುವಾಗಲಂತೂ ಗಿರಣಿಯಿಂದ ಅಕ್ಕಿ ಹಿಟ್ಟು ಉದುರುವ ಚಿತ್ರವೇ ಕಣ್ಣ ಮುಂದೆ ಮೂಡುತ್ತದೆ. ರಾಜಪುತ್ರನೂ ಹಿಟ್ಟೇ - 'ನರುಹಿತೊ'! ಎರಡನೇ ಸೊಸೆಯ ಹೆಸರು 'ಕಿಕೊ'; ಅವಳ ಇಬ್ಬರು ಹೆಣ್ಣು ಮಕ್ಕಳು - 'ಕಕೊ' ಮತ್ತು 'ಮಕೊ'! ಬಿದ್ದು ಬಿದ್ದೂ ನಕ್ಕೆ; ನೋಯುತಿದೆ ಪಕ್ಕೆ!&lt;br /&gt;&lt;p&gt;&lt;br /&gt;&lt;img id="BLOGGER_PHOTO_ID_5032264324305782658" style="FLOAT: left; MARGIN: 0px 10px 10px 0px; CURSOR: hand" alt="" src="http://bp3.blogger.com/_X_KkD9WIrIU/RdYxvaoeB4I/AAAAAAAAAAM/8v2JTG9h3RI/s320/Japanese_pedigree.png" border="0" /&gt;&lt;br /&gt;&lt;br /&gt;(ಜಪಾನ್ ಚಕ್ರವರ್ತಿಯ ವಂಶವೃಕ್ಷ - ವಿಕಿಪೀಡಿಯ ಕೃಪೆ)&lt;br /&gt;&lt;/p&gt;&lt;br /&gt;ಸರಿ, ವಿಷಯಕ್ಕೆ ಬರೋಣ. ತಮ್ಮ ಹೆಸರುಗಳು ಹೀಗಿರುವುದು ಜಪಾನೀಯರಿಗೆ ತೊಂದರೆಯೇ ಅಲ್ಲ; ನಮ್ಮಲ್ಲಿ 'ರಾಮಪ್ಪ ದೊಡ್ಡೇರಿ' ಹೇಗೋ ಅಲ್ಲಿ 'ತರೋ ಇಕೆದ' ಹಾಗೆಯೇ. ಅಪ್ಪಿ ತಪ್ಪಿಯೂ ಅವರಿಗೆ 'ಮಧ್ಯನಾಮ' ಇರುವುದಿಲ್ಲ - ಹಣೆಯಲ್ಲಲ್ಲ - ಹೆಸರಲ್ಲಿ! ಆದ್ದರಿಂದ ಮಧ್ಯನಾಮದ ಬಗ್ಗೆ ಅವರಿಗೆ ತಿಳಿಸಿ ಹೇಳಲು ಸಾಕು ಸಾಕಾಯಿತು. 'ಚಿಕ್ಕನಾಯ್ಕನಹಳ್ಳಿ ಶಂಕರ ಬೆನಕ' ಎಂಬುದರಲ್ಲಿ ನನ್ನ ಹೆಸರಾವುದು ಎಂಬುದೇ ಜಪಾನೀಯರಿಗೆ ಸಮಸ್ಯೆ! ನನ್ನ ಮೇಲಧಿಕಾರಿಗೆ ಹೇಳುತ್ತಿದ್ದೆ:&lt;br /&gt;&lt;br /&gt;"ಮೊದಲನೆಯದು ಹುಟ್ಟೂರಿನ ಹೆಸರು, ಎರಡನೆಯದು ತಂದೆಯ ಹೆಸರು, ಕೊನೆಯದು ನನ್ನದು" ಎಂದು ವಿವರಣೆ ನೀಡಿದೆ.&lt;br /&gt;&lt;br /&gt;"ನಿಮ್ಮ ಹುಟ್ಟೂರು... ಚಿಕ್..ಚಿಕ... ಅದು ಯಾವುದಕ್ಕೆ ಪ್ರಸಿದ್ಧಿ?" ಕಣ್ಮುಂದೆ ಕರಟದ ಚಿತ್ರ ಸುಳಿದುಹೋಯಿತು.&lt;br /&gt;&lt;br /&gt;"ಹುಟ್ಟೂರೆಂದರೆ ಹುಟ್ಟೂರಲ್ಲ..ನಮ್ಮ ಪೂರ್ವಿಕರಿದ್ದ ಊರಂತೆ...ಸದ್ಯಕ್ಕದೇ ಕುಟುಂಬನಾಮ" ಎಂದವನೇ " ಆದರೆ ಭಾರತದಲ್ಲೆಲ್ಲಾ ನಿಜನಾಮವನ್ನೇ ಕೂಗುವಾಗ ಬಳಸುವುದು" ಎಂದು ವಿವರಣೆ ಕೊಟ್ಟೆ.&lt;br /&gt;&lt;br /&gt;"ನಮ್ಮಲ್ಲಿ ಒಬ್ಬರಿದ್ದಾರೆ ಆನಂದ ಕುಮಾರು...ಅವರಿಗೆ ಮಧ್ಯನಾಮ ಇಲ್ಲವಲ್ಲ....."&lt;br /&gt;&lt;br /&gt;ತಲೆಕೆರೆದುಕೊಳ್ಳುತ್ತಾ, "ಭಾರತದಲ್ಲಿ ಒಂದು, ಎರಡು, ಮೂರು, ನಾಲ್ಕು..ಇನ್ನೂ ಬೇಕಾದಷ್ಟು ಪದಗಳಿರುವ ಹೆಸರುಗಳೂ ಇವೆ.."&lt;br /&gt;ಅವನಿಗೆ ಅರ್ಥವಾಗಲಿಲ್ಲ; ಮಿಕಿಮಿಕಿ ನೋಡಿದ. ಮುಂದುವರೆಸಿದೆ "..ಅಂದರೆ ನಿಮ್ಮನ್ನು ಏನೆಂದು ಕರೆಯಬೇಕು ಎಂದು ಅವರನ್ನೇ ಕೇಳಿಬಿಡುವುದು ಉತ್ತಮ"&lt;br /&gt;&lt;br /&gt;"ಓ! ಹಾಗೋ! ಸರಿ ಸರಿ.. ನಿಮ್ಮನ್ನು ಬೆನಕ ಎನ್ನಲೇ? ಕುಟುಂಬನಾಮವಿದ್ದರೆ ಚೆನ್ನಿತ್ತು..."&lt;br /&gt;&lt;br /&gt;"ಸದ್ಯ ಅಷ್ಟು ಮಾಡಿ ಪುಣ್ಯ ಕಟ್ಟಿಕೋ ತಂದೇ! ವಿಮಾನದ ಆರೋಹಣಪತ್ರದಲ್ಲಿ ಪ್ರತಿಬಾರಿ ನನ್ನ ಹೆಸರು ಚಿಕ್ನಾಯ್ಕನಹಳ್ಳಿ ಅಂತ ಓದಿ ಓದಿ ಸಾಕಾಗಿದೆ" ಗೊಣಗಿಕೊಂಡೆ.&lt;br /&gt;&lt;br /&gt;&lt;br /&gt;ಅಷ್ಟರಲ್ಲಿ ಅದೆಲ್ಲಿದ್ದನೋ ನನ್ನ ಸಹೋದ್ಯೋಗಿ ವೆರ್ಣೇಕರ ಮುಸಿಮುಸಿ ನಗುತ್ತಾ ಬಂದವನೇ ಮಧ್ಯ ಬಾಯಿ ಹಾಕಿದ:&lt;br /&gt;&lt;br /&gt;"ನೀವು ಇವನ ಕುಟುಂಬನಾಮ ಕೇಳಿದಿರಿ ಅಲ್ಲವೇ - ನಾವೆಲ್ಲ ಶಾಸ್ತ್ರೀ ಎನ್ನುತ್ತೇವೆ" ಎಂದ. ನಾನು ತಲೆದೂಗಿ ನಸುನಕ್ಕೆ.&lt;br /&gt;&lt;br /&gt;"ಶಸು..ತೊರಿ?.." 'ಚಿಕ್ನಾಯ್ಕನಹಳ್ಳಿ'ಗಿಂತ ಚಿಕ್ಕದಾದರೂ ಬಾಯಿ ಹೊರಳಲಿಲ್ಲ. ಕಷ್ಟಪಟ್ಟು ಅಭ್ಯಾಸ ಮಾಡಿಕೊಂಡ! ಅಂತೂ ಧರ್ಮರಹಿತ ನಾಡಿನಲ್ಲಿ ನನ್ನನ್ನು ಎಲ್ಲರೂ 'ಶಾಸ್ತ್ರೀ' ಎನ್ನುವಂತೆ ಮಾಡಿಬಿಟ್ಟ ವೆರ್ಣೇಕರ. ಅವನಿಟ್ಟ ಹೆಸರೇ ಉಳಿದುಕೊಂಡಿತು! ಸಾಲದ್ದಕ್ಕೆ ನಾನು ಜ್ಯೋತಿಷಿಯೆಂದೂ ಎಲ್ಲರಿಗೆ ಹೇಳಿಕೊಂಡೂ ಬಂದ! ಅವನು ಹೇಳಿದ್ದಷ್ಟೇ ಬಂತು! ಧರ್ಮಕ್ಕೇ ಬೆಲೆಯಿಲ್ಲದ ಈ ನವೀನ ನಾಡಿನಲ್ಲಿ ನನ್ನ ಪಂಚಾಂಗಕ್ಕೆ ಕೆಲಸವಿದೆಯೇ? ನಿಟ್ಟುಸಿರಿಟ್ಟೆ.&lt;br /&gt;&lt;br /&gt;&lt;br /&gt;(ಮುಂದಿನ ಬಾರಿ: ೧೨. ನಾ ತಿಂದ ನಾನು)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/29152559-3225111114087686127?l=kannadaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaputa.blogspot.com/feeds/3225111114087686127/comments/default' title='Post Comments'/><link rel='replies' type='text/html' href='http://www.blogger.com/comment.g?blogID=29152559&amp;postID=3225111114087686127' title='0 Comments'/><link rel='edit' type='application/atom+xml' href='http://www.blogger.com/feeds/29152559/posts/default/3225111114087686127'/><link rel='self' type='application/atom+xml' href='http://www.blogger.com/feeds/29152559/posts/default/3225111114087686127'/><link rel='alternate' type='text/html' href='http://kannadaputa.blogspot.com/2007/02/blog-post.html' title='೧೧.ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ'/><author><name>Buddha</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp3.blogger.com/_X_KkD9WIrIU/RdYxvaoeB4I/AAAAAAAAAAM/8v2JTG9h3RI/s72-c/Japanese_pedigree.png' height='72' width='72'/><thr:total>0</thr:total></entry><entry><id>tag:blogger.com,1999:blog-29152559.post-116620821589169955</id><published>2006-12-16T03:39:00.003+09:00</published><updated>2008-04-10T23:29:43.309+09:00</updated><category scheme='http://www.blogger.com/atom/ns#' term='ನನ್ನ ಜಪಾನ್ ಪ್ರವಾಸ'/><title type='text'>೧೦.ರೈಲಿನ ರಾಜ್ಯ</title><content type='html'>&lt;div align="center"&gt;&lt;strong&gt;ನನ್ನ ಜಪಾನ್ ಪ್ರವಾಸ - ೧೦.ರೈಲಿನ ರಾಜ್ಯ&lt;br /&gt;&lt;/strong&gt;------------------------------------------&lt;br /&gt;&lt;/div&gt;&lt;br /&gt;ದೊಂತೊನ್ ಗೊತ್ತೊನ್, ಗಾಂತೊನ್ ಗೊತ್ತೊನ್, ಗತಾಂಗೊತೊನ್ ... ಇದೇನಿದು ಜಪಾನೀಭಾಷೆಯಲ್ಲೇನೋ ಬಡಬಡಿಸುತ್ತಿದ್ದೇನೆ ಎಂದುಕೊಳ್ಳಬೇಡಿ; ಇವೆಲ್ಲ ಇಲ್ಲಿಯ ಜನರು ರೈಲಿನ ಸದ್ದನ್ನು ಅನುಕರಿಸುವ ಬಗೆ ಅಷ್ಟೇ! ನಮ್ಮಲ್ಲಾದರೋ ಈಗಲೂ ಕೂಡ ಮಕ್ಕಳಾಗಲಿ, ದೊಡ್ಡವರಾಗಲಿ, ಹಳಿಬಂಡಿಯ ಸದ್ದನ್ನು ಚುಕುಪುಕು-ಚುಕುಬುಕು-ಚುಕ್‍ಬುಕ್ (ಡುಂಡಿರಾಜರಂತೆ ವಾಣಿಜ್ಯದವರಿಗಾದರೆ ಚೆಕ್‍ಬುಕ್ ಚೆಕ್‍ಬುಕ್)-ಇತ್ಯಾದಿಗಳಿಂದ ಅನುಕರಿಸುವುದನ್ನು ಕೇಳಿದ್ದೇನೆ. ಅದು ಉಗಿಬಂಡಿಯ ಕಾಲ, ಈಗೆಲ್ಲ ಡೀಸೆಲ್ ಗಾಡಿ - ಧಡಕ್ ಧಡಕ್ ಅಲ್ಲವೇನ್ರೀ? ಎನ್ನುವಿರೇನೋ! ನಾನು ಹೇಳಹೊರಟಿದ್ದು ಇನ್ನೂ ಮುಂದುವರೆದ ವಿದ್ಯುತ್ ಹಳಿಬಂಡಿಯ ಬಗ್ಗೆ; ಏನೇ ಆಗಲಿ, ಸದ್ದು "ಗಾಂತೊನ್ ಗೊತ್ತೊನ್" ಎಂದೇನೂ ನನಗೆ ಕೇಳಿಸಲಿಲ್ಲ. ಶಬ್ದ-ಭಾಷೆ ಆಯಾ ಪ್ರದೇಶದ ವೈಶಿಷ್ಟ್ಯ; ರೈಲು ಚುಕುಪುಕು ಎನ್ನುತ್ತದೆ ಎಂದರೆ ಇವರು ಫಕಫಕನೆ ನಕ್ಕಾರು! ಸರಿ, ಶಬ್ದವೇ ಇಲ್ಲದೆ ರೈಲು ಚಲಿಸಿದರೆ? ಬಿದ್ದು ಬಿದ್ದು ನಕ್ಕೀರಿ? ಅದು ರೈಲೇ ಅಲ್ಲ; ನೀನು ಬಿಡ್ತಾ ಇರೋದೇ ರೈಲು ಅಂತ!? ಖಂಡಿತ ಇಲ್ರೀ! ಇಲ್ಲಿ ನಾವು ತಿಳಿಯಬೇಕಿರುವ ಸತ್ಯ ಬಹಳಷ್ಟಿದೆ; ಇದನ್ನೇ ನಾನೀಗ ಹೇಳಹೊರಟಿದ್ದು - ಜಪಾನೆಂದರೆ ರೈಲಿನ ರಾಜ್ಯ!&lt;br /&gt;&lt;p&gt;&lt;img style="float: center; MARGIN: 0px 10px 10px 0px; CURSOR: hand" alt="" src="http://bp2.blogger.com/_X_KkD9WIrIU/R-pVJuNkRdI/AAAAAAAAAAk/zneRCsG1AQo/s320/Densha.jpg" border="1" /&gt;&lt;/p&gt;&lt;br /&gt;ಜಪಾನಿನಲ್ಲಿ ಬಸ್ಸಿಗಿಂತ ಹಳಿಬಂಡಿಯ ಸಾರಿಗೆ ವ್ಯವಸ್ಥೆ ಅತ್ಯುತ್ತಮವಾಗಿದೆ; ಬಸ್ಸೇನೂ ಕಡಿಮೆಯಿಲ್ಲ ಆದರೂ ಶ್ರೀಸಾಮಾನ್ಯ ಮಾತೆತ್ತಿದರೆ &lt;strong&gt;ದೆನ್‍ಶ&lt;/strong&gt;[=ವಿದ್ಯುದ್ರಥ, ಹಳಿಬಂಡಿ], &lt;strong&gt;ಎಕಿ&lt;/strong&gt;[=ನಿಲ್ದಾಣ] ಎನ್ನುವಷ್ಟು ತೀರಾ ನಿಕಟವಾಗಿರುವುದು ರೈಲು ಮಾತ್ರ. ಒಂದೊಂದೂರನ್ನೂ ರೈಲಿನ ಸಂಸ್ಥೆಗಳು ಜಹಗೀರಿ ತೆಗೆದುಕೊಂಡಿರುವಂತೆ ಕಾಣುತ್ತದೆ! ಊರಿನ ಹೆಸರು ಹೇಳಿದರೆ, "ಆ ರೈಲು ಸಂಸ್ಥೆಯ ಊರೇ? ಈ ರೈಲಿನ ಊರೇ?" ಎನ್ನುವಷ್ಟು ಪ್ರಸಿದ್ಧ ಈ ರೈಲುಗಳು! &lt;strong&gt;ಎಕಿ&lt;/strong&gt;ಗಳು ನಗರದಲ್ಲಿ ೧-೨ ಕಿ.ಮೀ. ಅಂತರದಲ್ಲಿದ್ದು, ಹೊರವಲಯದಲ್ಲಿ ೫ ಕಿ.ಮೀ. ಸುಮಾರಿಗೆ ಕಾಣಸಿಗುತ್ತವೆ; &lt;strong&gt;ಎಕಿ&lt;/strong&gt; ಇದ್ದಲ್ಲೆಲ್ಲ ವ್ಯಾಪಾರೀ ಕೇಂದ್ರಗಳೂ, ಊಟೋಪಚಾರ ಕೇಂದ್ರಗಳೂ, ವಸತಿಗಳ ತಾಣಗಳೂ ಬೆಳೆದೂ ಬೆಳೆದೂ, ಇಲ್ಲಿ ' ಹಳ್ಳಿ'ಗಳೇ ಇಲ್ಲವಾಗಿ, ಇಲ್ಲಿನ 'ಹಳ್ಳಿಗಳು' ಭಾರತದ ನಗರಗಳನ್ನು ಹೋಲುತ್ತವೆ! ಅಂದರೆ ಜಪಾನಿನ ಹಳ್ಳಿ ಎಂಬುದು ಮಹಾನಗರದಿಂದ ಅತಿದೂರದಲ್ಲಿದ್ದು, ಬೆಟ್ಟಗುಡ್ಡಗಳ ನಡುವೆ, ತೋಟ-ಗದ್ದೆಗಳಿಂದ ತುಂಬಿದ ಜನನಿಬಿಡವಾಗಿರದ ನಗರವೇ! ಅದೇನೇ ಇರಲಿ, ವಸತಿ ಸೌಕರ್ಯಕ್ಕೆ ಮಾತ್ರ &lt;strong&gt;ಎಕಿ&lt;/strong&gt;ಯಿಂದ ಮನೆ ಎಷ್ಟು ದೂರದಲ್ಲಿರುವುದೋ ಅಷ್ಟು ಬಾಡಿಗೆ ಕಡಿಮೆಯಾಗಿರುತ್ತದೆ; ಸ್ವಾಭಾವಿಕವಲ್ಲವೇ?&lt;br /&gt;&lt;br /&gt;ಆದರೆ '&lt;strong&gt;ಎಕಿ&lt;/strong&gt;ಯಿಂದ ೧೦ ನಿಮಿಷ ನಡಿಗೆ - ೮೫೦೦೦ಯೆನ್ -೨ಎಲ್.ಡಿ.ಕೆ' ಎಂದು ದಪ್ಪಕ್ಷರದಲ್ಲಿ ಬರೆಯಲ್ಪಟ್ಟ ಫಲಕಗಳು ಭಾರತದಲ್ಲಿನ್ನೂ ಇಲ್ಲವೇನೋ! ಬೆಲೆ ಕ್ರಯಕ್ಕಲ್ಲ ಸ್ವಾಮೀ, ತಿಂಗಳ ಬಾಡಿಗೆಗೆ! ಎಚ್ಚರವಿರಲಿ! ೨ ಎಲ್.ಡಿ.ಕೆ ಎಂದರೆ ೨ ಕೋಣೆಗಳೂ, ಎಲ್-ಲಿವಿಂಗ್-ನಡುವಂಗಳವೂ, ಡಿ-ಡೈನಿಂಗ್-ಊಟದಕೋಣೆಯೂ, ಕೆ-ಕಿಚನ್-ಅಡುಗೆಮನೆಯೂ ಇದೆ ಎಂದರ್ಥ. ಅದರ ಇನ್ನೊಂದರ್ಥ ಇವುಗಳಾವುವೂ ಇಲ್ಲದ 'ಮನೆ'ಯೂ ಇದೆ ಎಂದಲ್ಲವೇ? ಖಂಡಿತ ಇದೆ; ನಾನು ವಾಸವಿರುವುದು ಅದರಲ್ಲೇ! ಹೌದು ಸ್ವಾಮೀ, ಕ್ಯೂಶೂವಿನಿಂದ ಮರಳಿದ ನಂತರ ಓಸಾಕಾದ ನನ್ನ ಅದೇ ಕೋಣೆ/ಮನೆಯಲ್ಲಿಯೇ ನನ್ನ ಬಿಡಾರ; ವ್ಯತ್ಯಾಸವೆಂದರೆ - ವೆಂಕಟ ಇರಲಿಲ್ಲ.&lt;br /&gt;&lt;p&gt;&lt;img style="float: center; MARGIN: 0px 10px 10px 0px; CURSOR: hand" alt="" src="http://bp3.blogger.com/_X_KkD9WIrIU/R-pVJ-NkReI/AAAAAAAAAAs/bEsGrpsWM7g/s320/Railway.jpg" border="1" /&gt;&lt;/p&gt;&lt;br /&gt;ಕ್ಯೂಶೂವಿನಿಂದ ಹಿಂದಿರುಗಿದ್ದೂ ಶಿನ್‍ಕಾನ್‍ಸೆನ್ ರೈಲಿನಲ್ಲಿಯೇ - ಶರವೇಗದ ಹಳಿಬಂಡಿ! ನಾ ಮೊದಲೇ ಹೇಳಿದಂತೆ, ಬೆಂಗಳೂರಿನಿಂದ ಅತಿವೇಗದ ಬಸ್ಸು ಮೈಸೂರು ತಲುಪುವುದರೊಳಗೆ, ಶಿನ್‍ಕಾನ್‍ಸೆನ್ ಓಸಾಕಾದಿಂದ ತೋಕ್ಯೋ ತಲುಪಿರುತ್ತದೆ. ನೊಝೊಮಿ, ಹಿಕಾರಿ, ಕೊದಾಮ ಗಳು ಕ್ರಮವಾಗಿ ಗಂಟೆಗೆ ೨೫೦, ೨೦೦, ೧೫೦ ಕಿ.ಮೀ. ವೇಗದಲ್ಲಿ ಓಡುತ್ತವೆ; ಅಲ್ಲಲ್ಲ ಹಾರುತ್ತವೆ! ಶರವೇಗದ ಈ ರೈಲುಗಳು ಇಲ್ಲಿನ ಮುಖ್ಯನಗರಗಳನ್ನು, &lt;strong&gt;ಕೆನ್&lt;/strong&gt;[=ರಾಜ್ಯ]ಗಳ ರಾಜಧಾನಿಗಳನ್ನು ಕ್ಷಣಾರ್ಧದಲ್ಲಿ ಬೆಸೆಯುತ್ತವೆ. ಒಂದು &lt;strong&gt;ಕೆನ್&lt;/strong&gt; ನ ಒಳಗೇ ಚಲಿಸುವ ರೈಲುಗಳ ಸಂಸ್ಥೆಗಳು ಹಲವಾರಿವೆ. ಏನೇ ಆದರೂ ರೈಲುಗಳನ್ನು ನುಗ್ಗಿಬಿಡುವ ಸಂಸ್ಥೆಗಳಲ್ಲಿ ಎದ್ದು ಕಾಣುವುದು - ಜೆ.ಆರ್ - ಜಪಾನ್ ರೈಲ್ವೆ - ಸರ್ಕಾರೀ ಭಾಗೀದಾರ ಸಂಸ್ಥೆ; ಶಿನ್‍ಕಾನ್‍ಸೆನ್ ಗಳ ಜನಕ; ಇಡೀ ಜಪಾನಿನ ನರನಾಡಿಗಳಿಗೆ ಆಮ್ಲಜನಕ! ಸಣ್ಣ-ಪುಟ್ಟ ನಗರ, ಪಟ್ಟಣಗಳನ್ನು ಸೇರಿಸುವ ಇತರ ಸಂಸ್ಥೆಗಳಲ್ಲಿ ಕಿನ್‍ತೆತ್ಸು, ಹಾನ್‍ಕ್ಯೂ, ಹಾನ್‍ಶಿನ್, ಕಿತಕ್ಯೂ, ನಾನ್‍ಕಯ್, ಮೆಯ್‍ತೆತ್ಸು, ಕೇಯೋ, ತೋಬು...ಇತ್ಯಾದಿ ಇತ್ಯಾದಿ. ಒಂದೇ ಎರಡೇ? ನೂರಾರು! ನನಗೇನು, ಇಲ್ಲಿಯವರಿಗೇ ಗೊತ್ತಿಲ್ಲದಿದ್ದರೂ ಅಚ್ಚರಿಯಿಲ್ಲ; ಅಷ್ಟು ಹೇರಳವಾಗಿವೆ. ನಗರದಲ್ಲಿ ಪಾತಾಳಗಾಮಿ ಸುರಂಗರೈಲುಗಳಿದ್ದು, ಭೂತಲಗಾಮೀ ರೈಲುನಿಲ್ದಾಣಗಳನ್ನು ಪಾತಾಳದಲ್ಲಿ ಸಂಧಿಸುತ್ತವೆ! ಹಾಗಾಗಿ, ಒಂದು ಪ್ರಮುಖ ರೈಲು ನಿಲ್ದಾಣ ಒಂದು ಚದರ ಕಿ.ಮೀ. ವಿಸ್ತೀರ್ಣ ಮೀರಿದ್ದರೂ ಹೆಚ್ಚಿಲ್ಲ! ಅಲ್ಲಿ ಬಹು ರೈಲುಗಳು ಸೇರುವುದರಿಂದ ನಿಲ್ದಾಣವೇ ೮-೧೦ ಅಂತಸ್ತುಗಳಿದ್ದು ಸುರಂಗ-ಭೂ-ಸೇತು ಹಳಿಬಂಡಿಗಳ ನಿಲ್ದಾಣಗಳು, ಅವುಗಳ ನಡುವೆ ಕೂಡು ದಾರಿಗಳು, ಪ್ರವೇಶಚೀಟಿ ಮಾರಾಟ-ಪರೀಕ್ಷಾ ಯಂತ್ರಗಳೂ, ಹತ್ತು ಹಲವು ದ್ವಾರಗಳು ಅಲ್ಲೇ ಇರುವುದು ಗೊತ್ತಿರುವುದೇ! ಸಾಲದ್ದಕ್ಕೆ ಆ ಪಾತಾಳದ ಅಂತಸ್ತಿನಿಂದ ಮೇಲುಪ್ಪರಿಗೆಯವರೆಗೂ ಅಂಗಡಿಗಳು, ಭವ್ಯ ಮಾರುಕಟ್ಟೆಗಳೂ, ಊಟೋಪಚಾರ ಮಳಿಗೆಗಳೂ, ಬೃಹತ್ಕಛೇರಿಗಳೂ, ವಸತಿಗೃಹಗಳೂ ಇವೆ!&lt;br /&gt;&lt;br /&gt;ಪಾತಾಳಲೋಕವೆಂದರೆ ಏನೆಂದು ನನಗೆ ತಿಳಿದದ್ದು ಇಲ್ಲಿಯೇ - ಜಪಾನಿನ &lt;strong&gt;ಚಿಕತೆತ್ಸು&lt;/strong&gt;[=ಸುರಂಗರೈಲು] 'ಹತ್ತಲು' ನಿಲ್ದಾಣಕ್ಕೆ 'ಇಳಿ'ದಾಗ! ಇದಾವ ಅಚ್ಚರಿಯ ಪರಿವೆಯಿಲ್ಲದಂತೆ ಜನ ಅವರಪಾಡಿಗೆ ಪ್ರತಿದಿನ ಪಯಣಿಸುತ್ತಾರೆ; ಅವರಿಗೆ ಇವೆಲ್ಲ ರೂಢಿಯಾಗಿಬಿಟ್ಟಿದೆ. ಅಚ್ಚರಿಯೇನಿದ್ದರೂ ನೆಲದೊಳಗೇ ಮೂರಂತಸ್ತು ಕೆಳಗೆ ನಿರಾತಂಕ ಜೀವಿ, ಜೀವನವನ್ನು ಕಂಡ ನನಗೆ! ನಿಜವಾಗಿ ಜಪಾನನ್ನು ಇಲ್ಲಿ ಮೆಚ್ಚಬೇಕು! ೧೫ ನಿಮಿಷಕ್ಕೊಮ್ಮೆ ಶರವೇಗದ ರೈಲು; ೫-೬ ನಿಮಿಷಕ್ಕೊಂದು ಸಾಮಾನ್ಯ ರೈಲು; ೧೫ ನಿಮಿಷಕ್ಕೊಂದು ವೇಗದ ರೈಲು; ೨೦ ನಿಮಿಷಕ್ಕೊಂದು ಅತಿವೇಗದ ರೈಲು; ಅರ್ಧಗಂಟೆಗೊಂದು ಕಾದಿರಿಸಿದ ವಿಶೇಷ ರೈಲು! ಬೆಳಿಗ್ಗೆ ೫:೩೦ ಯಿಂದ ರಾತ್ರಿ ೧೨ ರವರೆಗೆ ನಿರಾಯಾಸವಾಗಿ ಓಡುತ್ತವೆ! ಭಲಾ! ಭೇಷ್! ಸಾರಿಗೆ ವ್ಯವಸ್ಥೆಯೆಂದರೆ ಇದು! ನೀವೆಲ್ಲೇ ಇರಿ; ೧೦ ನಿಮಿಷಕ್ಕಿಂತ ಹೆಚ್ಚು ಕಾಯಬೇಕಿಲ್ಲ! ನಿಗದಿಯಾದ ಸಮಯಕ್ಕೆ ಸರಿಯಾಗಿ ರೈಲು ಬಂದೇ ಬರುತ್ತದೆ; ಶತಸ್ಸಿದ್ಧ! ಇಡೀ ದೇಶವೇ ವಿರಮಿಸುವ ಶನಿ-ಭಾನುವಾರ ವಿಶೇಷ ವೇಳಾಪಟ್ಟಿಯಾದರೂ, ಬೆಳಿಗ್ಗೆ ೬ ರಿಂದ ರಾತ್ರಿ ೧೨ ರವರೆಗೂ ಓಡಾಟಕ್ಕೆ ಯಾವ ತೊಂದರೆಯೂ ಆಗದು. ಜನದಟ್ಟಣೆಯ ಸಮಯದಲ್ಲಿ ೨ ನಿಮಿಷಕ್ಕೊಂದು ರೈಲಿದೆ! ನಿಲ್ದಾಣದಲ್ಲಿ ರೈಲು ನಿಲ್ಲುವುದು ಅರ್ಧ ನಿಮಿಷ ಮಾತ್ರ!&lt;br /&gt;&lt;p&gt;&lt;img style="float: center; MARGIN: 0px 10px 10px 0px; CURSOR: hand" alt="" src="http://bp0.blogger.com/_X_KkD9WIrIU/R-pVKONkRfI/AAAAAAAAAA0/9NZiQviC1Bg/s320/Untenshu.jpg" border="1" /&gt;&lt;/p&gt;&lt;br /&gt;ಅತ್ಯದ್ಭುತ! ವೇಗದ ವಿಸ್ಮಯ! ಸಮಯಪಾಲನೆಯ ಅತ್ಯುತ್ತಮ ಉದಾಹರಣೆ! ಸುರಕ್ಷತೆಯ ಮೆರಗು! ಜಪಾನ್ ಹಳಿಬಂಡಿಯಷ್ಟೇ ಅಲ್ಲ; ಇಡೀ ಭೂಸಾರಿಗೆ ವ್ಯವಸ್ಥೆಯ ಅತ್ಯುತ್ತಮ ದೇಶ! ರೈಲಿನ ಕಥೆ ಮುಗಿಯುವುದೇ ಇಲ್ಲ ಬಿಡಿ! ಇಲ್ಲಿನ 'ಮೊನೊರೈಲ್' ಒಂದೇ ಹಳಿಯ ಮೇಲೆ ವಿದ್ಯುತ್ಕಾಂತೀಯ ಬಲದಿಂದೋಡುವ ಗಿನ್ನೆಸ್ ದಾಖಲೆಯ ಹಳಿಬಂಡಿ! ಇದು ಚಲಿಸುವಾಗ ಸದ್ದೇ ಕೇಳಿಸದು! ಕೇಬಲ್ ರೈಲಿನಲ್ಲಿ ಚಾಲಕನೇ ಇರುವುದಿಲ್ಲ; ಸಂಪೂರ್ಣ ಗಣಕೀಕೃತ! ಆದರೆ ಇಲ್ಲಿನ ಜೀವನ ಹಾಗಾಗಬಾರದು ಅಷ್ಟೇ! ಅಸಂಖ್ಯ ಹಳಿಗಳೇ ಧಮನಿಗಳಾಗಿ, ರೈಲು ನೆತ್ತರಾದಾಗ, ದೇಶ ನಿಜವಾಗಿಯೂ ಉಸಿರಾಡುತ್ತದೆ ಎಂದು ನನಗೆ ಈಗ ಚೆನ್ನಾಗಿ ಅರ್ಥವಾಯಿತು!&lt;br /&gt;&lt;br /&gt;(ಮುಂದಿನಬಾರಿ: ೧೧. ಧರ್ಮರಹಿತ ನಾಡಿನಲ್ಲಿ ಶಾಸ್ತ್ರೀ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/29152559-116620821589169955?l=kannadaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaputa.blogspot.com/feeds/116620821589169955/comments/default' title='Post Comments'/><link rel='replies' type='text/html' href='http://www.blogger.com/comment.g?blogID=29152559&amp;postID=116620821589169955' title='0 Comments'/><link rel='edit' type='application/atom+xml' href='http://www.blogger.com/feeds/29152559/posts/default/116620821589169955'/><link rel='self' type='application/atom+xml' href='http://www.blogger.com/feeds/29152559/posts/default/116620821589169955'/><link rel='alternate' type='text/html' href='http://kannadaputa.blogspot.com/2006/12/blog-post.html' title='೧೦.ರೈಲಿನ ರಾಜ್ಯ'/><author><name>Buddha</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><media:thumbnail xmlns:media='http://search.yahoo.com/mrss/' url='http://bp2.blogger.com/_X_KkD9WIrIU/R-pVJuNkRdI/AAAAAAAAAAk/zneRCsG1AQo/s72-c/Densha.jpg' height='72' width='72'/><thr:total>0</thr:total></entry><entry><id>tag:blogger.com,1999:blog-29152559.post-116266959330992576</id><published>2006-11-05T04:38:00.000+09:00</published><updated>2006-11-05T04:46:33.310+09:00</updated><category scheme='http://www.blogger.com/atom/ns#' term='ನನ್ನ ಜಪಾನ್ ಪ್ರವಾಸ'/><title type='text'>೯. 'ಕ್ಯೂಶೂ'ನಲ್ಲಿ ಕನ್ನಡ!</title><content type='html'>&lt;div align="center"&gt;&lt;span style="color:#000099;"&gt;&lt;strong&gt;ನನ್ನ ಜಪಾನ್ ಪ್ರವಾಸ - ೯. 'ಕ್ಯೂಶೂ'ನಲ್ಲಿ ಕನ್ನಡ!&lt;/strong&gt;&lt;br /&gt;&lt;strong&gt;------------------------------------------&lt;/strong&gt;&lt;/span&gt;&lt;/div&gt;&lt;br /&gt;ಸರಿ, ಹೊಸ ಜಪಾನಿನ ಜೀವನ ಶೈಲಿ ನನಗರ್ಥವಾಯಿತು! ಜೊತೆಗೆ ಬಾಬಾ ಭಕ್ತ ಅಸಾಮಿಯೂ ಇದ್ದುದರಿಂದ ಹೇಗೋ ಕಾಲ ತಳ್ಳುತ್ತಿದ್ದೆ. ಆದರೂ ಒಂದು ತಿಂಗಳ ಕಾಲ ಕನ್ನಡ-ಇಂಗ್ಲಿಷ್-ಹಿಂದೀ ಗಳ ಸಹವಾಸವೇ ಇಲ್ಲದೆ ಜಪಾನೀ ಭಾಷೆಯಲ್ಲಿ ಮಾತ್ರ ಮಾತುಕತೆ ನಡೆಯಿತು. ಅಬ್ಬ! ಅಂತಹ ಕಷ್ಟ ಅನುಭವಿಸಿದವನಿಗೇ ಗೊತ್ತು! ಏಕೆಂದರೆ ಜಪಾನೀಭಾಷೆಯಲ್ಲಿ ನನಗೆ ತಿಳಿದದ್ದು ಅಲ್ಪ-ಸ್ವಲ್ಪ ಮಾತ್ರ; ಅದೂ ತೋಕಿಯೋದ 'ಶುದ್ಧ' ಭಾಷೆ. ಇಲ್ಲಿಯೋ, ಅಸಾಮಿಯ &lt;strong&gt;'ಓಸಾಕಾಬೆನ್'&lt;/strong&gt; ಹಾಗೂ ಇತರರ &lt;strong&gt;'ಕ್ಯೂಶೂಬೆನ್'&lt;/strong&gt; ನುಡಿಭೇದಗಳನ್ನೇ ಕೇಳಿ ಕೇಳಿ ನನಗೆ ಜಪಾನೀಭಾಷೆ ಬರುತ್ತದೆಯೇ ಎಂದೇ ಸಂದೇಹವಾಗುತ್ತಿತ್ತು! ಬಹುಶಃ ಬೆಂಗಳೂರಿನಲ್ಲಿ ಕನ್ನಡ ಕಲಿತ ವಿದೇಶೀಯನೊಬ್ಬ ಮಂಗಳೂರಿಗೆ ಹೋಗಿ ಹುಬ್ಬಳ್ಳಿಯ ಕನ್ನಡಿಗರೊಂದಿಗೆ ಮಾತನಾಡಿದಂತಾಗಿತ್ತು ನನ್ನ ಸ್ಥಿತಿ! ಮಂಗಳೂರು ಎಂದಾಗ ನೆನಪಿಗೆ ಬಂತು ನೋಡಿ; ಇಲ್ಲಿ ನಾನು ಪ್ರತಿದಿನ ಅನ್ನ ಕೊಳ್ಳುತ್ತಿದ್ದ &lt;strong&gt;'ಕೊಂಬಿನಿ'&lt;/strong&gt;ಯಲ್ಲೊಮ್ಮೆ ಎಂದಿನಂತೆ ಅನ್ನ, ಸಿಹಿಮೊಸರು ಕೊಂಡು ಅಸಾಮಿಯೊಡನೆ ಹೊರಬರಲು ತಿರುಗಿದಂತೆಯೇ, ಮೀಸೆ ಬಿಟ್ಟ ಕೆಂಗೂದಲ ಜಪಾನೀಯನೊಬ್ಬ ಕಣ್ಣಿಗೆ ಬಿದ್ದ. ನಮ್ಮಪ್ಪ ಹೇಳುತ್ತಿದ್ದ ರಾಗಿ ಮುದ್ದೆ ಬಗೆಗಿನ ನಾಣ್ಣುಡಿ ನೆನಪಾಗಿ ಅದು ಆಶು-ಅಣಕವಿತೆಯಾಗಿ ಆಗಲೇ ನನಗೆ ನಗೆಬುಗ್ಗೆಯುಕ್ಕಿಬಂತು!&lt;br /&gt;&lt;br /&gt;ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ ! ಹಿಟ್ಟಂ ಬಿಟ್ಟಂ ಕೆಟ್ಟಂ! ಇದು ಹಳೇ ಮೈಸೂರಿನ ಬಾಯಿಪಾಠಂ!&lt;br /&gt;ಆದರೆ ಜಪಾನಿನಲ್ಲಿ ಮೀಸೆ ಬಿಟ್ಟಂ, ಕೆಟ್ಟಂ! ಇದು ನನಗೆ ಜಪಾನೀ ಗುರುಗಳ ಪಾಠಂ!&lt;br /&gt;&lt;br /&gt;ಮೀಸೆ ಬಿಟ್ಟವರೆಲ್ಲ ಕಳ್ಳಕಾಕರೆಂದುಕೊಳ್ಳುವ ಜಪಾನಿನಲ್ಲಿ ಇವನಾವನೋ ಮೀಸೆ ಬಿಟ್ಟಿದ್ದಾನಲ್ಲಪ್ಪ! ಎಂದು ಅಚ್ಚರಿಗೊಂಡು ಹಲಸಿಗೆ ಹಬ್ಬಿದ ಹುಲುಸಾದ ಕಸ್ಕ್ಯೂಟ ಕಳ್ಳಿ-ಬಳ್ಳಿಯಂತಿದ್ದ ಅವನ ಮೀಸೆಯನ್ನೇ ನೋಡುತ್ತಾ, ಬೋಳಿಸುವ ಮೊದಲು ಬೆಳೆದಿದ್ದ ನನ್ನ ಮೀಸೆಯ ನೆನಪಾಯಿತು. ಅವನನ್ನೇ ವಿಚಿತ್ರವಾಗಿ ನೋಡುತ್ತಾ ಮುನ್ನಡೆದಂತೆ, ಅವನ ಕೈಲಿದ್ದ ಒಂದಷ್ಟು ಕಾಗದಗಳತ್ತ ಕಣ್ಣು ಹರಿಯಿತು. ದಪ್ಪ ಅಕ್ಷರಗಳ ಕೈಬರಹದಲ್ಲಿ ಬರೆದಿದ್ದುದು ಕನ್ನಡ! ಪಂಪನ "ಆರಂಕುಶಮಿಟ್ಟೊಡಂ...", ನಾರಣಪ್ಪನ "ಜವನ ಮೀಸೆಯ ಮುರಿದನೋ..", ನೃಪತುಂಗನ "ಕಾವ್ಯಪ್ರಯೋಗಪರಿಣತಮತಿಗಳ್.." ಎಲ್ಲವೂ ಒಮ್ಮೆಲೇ ಕಿವಿಯಲ್ಲಿ ಮೊರೆದಂತೆ, ಕಣ್ಮುಂದೆ ಕನ್ನಡತಾಯಿ ಭುವನೇಶ್ವರಿಯೇ ಬಂದಂತಾಗಿ, ಕರ್ನಾಟಕ ಹೃದಯಶಿವನ ಮೂರ್ತಿ ಕನ್ನಡಡಿಂಡಿಮವನ್ನೇ ಬಾರಿಸುತ್ತಿರುವಂತೆ ಭಾಸವಾಗಿ ಅರೆಕ್ಷಣ, ಕಣ್ಕತ್ತಲಿಟ್ಟಿತು!&lt;br /&gt;&lt;br /&gt;&lt;br /&gt;ನಾನೆಲ್ಲಿದ್ದೇನೆಂಬುದನ್ನೇ ಮರೆತುಹೋಗಿ, ಜೋರಾಗಿ "ಕನ್ನಡ! ಕನ್ನಡ! ಇದು ನನ್ನ ಭಾಷೆ ಕನ್ನಡ!" ಎಂದು ಕೂಗಿದೆ! ಮೀಸೆಯವನು ಬೆಚ್ಚಿ ತಿರುಗಿನೋಡಿದ; ಅಸಾಮಿ ಗಾಬರಿಯಿಂದ ಏನಾಯ್ತು ಎಂದ!&lt;br /&gt;&lt;br /&gt;ನಾನು "ಅಸಾಮಿ ಸಾನ್! ಕೊರೆವ ವತಾಶಿನೊ ಬೊಕೊಕುಗೊನೊ ಕನ್ನದಗೊ ದೇಸುಯೋ!" [ಅಸಾಮಿಯವರೇ, ಇದು ನನ್ನ ತಾಯ್ನುಡಿ ಕನ್ನಡಭಾಷೆ ಕಣ್ರೀ!] ಎಂದೆ!&lt;br /&gt;&lt;br /&gt;ಅಲ್ಲಿದ್ದವರೆಲ್ಲ ನನ್ನ ಮಾತಿಗೆ ಅಚ್ಚರಿಗೊಂಡು ಅವನ ಕೈಲಿದ್ದ ಕಾಗದವನ್ನು ಬಗ್ಗಿ ಬಗ್ಗಿ ನೋಡಲಾರಂಭಿಸಿದರು! ಆ ಮೀಸೆಯವನು ಆ ಕಾಗದದ ಪ್ರತಿಯೊಂದನ್ನು ನನ್ನ ಕೈಲಿಟ್ಟು ಓದಿ ನೋಡಿ ಎಂದ. ಶುದ್ಧ ಕನ್ನಡದಲ್ಲಿ ಕೈಬರಹದಲ್ಲಿ ಬರೆದಿದ್ದುದು ಇಷ್ಟೇ : &lt;strong&gt;'ರುಚಿಯಾದ ಆಹಾರ'&lt;/strong&gt;! ಮಿಕ್ಕೆಲ್ಲವೂ ಜಪಾನೀ ಭಾಷೆಯಲ್ಲಿತ್ತು! ಅದು 'ಗಣೇಶ' ಎಂಬ ಉಪಾಹಾರಮಂದಿರದ ಮೆನು ಅಥವಾ ತಿಂಡಿಪಟ್ಟಿ! ಇದು ನಿಮಗೆಲ್ಲಿ ಸಿಕ್ಕಿತೆಂದು ಕೇಳಿದೆ; ಅವನು ಆ 'ಗಣೇಶಭವನ'ದಲ್ಲಿ ಕೆಲಸ ಮಾಡುವವನಂತೆ! ತಿಂಡಿಪಟ್ಟಿಯ ನೆರಳಚ್ಚು ತೆಗೆಸಲು ಕೊಂಬಿನಿಗೆ ಬಂದವನಂತೆ. ಅದರ ಯಜಮಾನ ಮಂಗಳೂರಿನವನಂತೆ! ನಾನು ಕನ್ನಡಿಗನೆಂದ ಮೇಲೆ ಕಾಗುಣಿತ ಸರಿಯಿದೆಯೇ ನೋಡಿ ಎಂದ! ಕನ್ನಡ ಕಂಡ ಆನಂದದಲ್ಲಿ ಸರಿಯೆಂದುಬಿಟ್ಟೆ! ನಿಜವಾಗಿ 'ಯ'ಕಾರದ ಇಳಿ ಇರಬೇಕಿತ್ತು; ಇದ್ದದ್ದು &lt;strong&gt;'ರುಚಿಯದ ಆಹಾರ'&lt;/strong&gt; ಎಂದು! ಆ ಗಣೇಶಮಂದಿರದ ವಿಳಾಸ ಅದರಲ್ಲೇ ಇದ್ದುದರಿಂದ ಸಮಯವಾದರೆ ಬನ್ನಿ ಎಂದು ಹೊರಟ! ಕನ್ನಡದ ಕಂಪು ಜಪಾನಿನಲ್ಲಿಯೂ ಪಸರಿಸಿದೆಯೆಂದು ತಿಳಿದು ನನಗೆ ಕಣ್ಣು ತುಂಬಿ ಬಂತು!&lt;br /&gt;&lt;br /&gt;"ಶಾರದೆ! ನಾನು ನಿನ್ನ ನಾಡನ್ನು ಬಿಟ್ಟೆ; ನೀನು ನನ್ನನ್ನು ಬಿಡಲಾರದೆ ಹುಡುಕಿಕೊಂಡು ಬಂದೆಯೇನು?! ಧನ್ಯನಾದೆ!" ಎಂದುಕೊಂಡೆ.&lt;br /&gt;&lt;br /&gt;ಕ್ಯೂಶೂದ್ವೀಪದ ಕೊಕುರಾದಲ್ಲಿನ ಆ 'ಗಣೇಶಭವನ'ಕ್ಕೆ ನಾನು ಹೋಗಲಾಗಲಿಲ್ಲ. ಅದು ಮಾಂಸಾಹಾರಿ ಉಪಾಹಾರಗೃಹವೆಂಬುದು ಒಂದು ಕಾರಣ; ಜೊತೆಗೆ ಸಮಯವೂ ಇರಲಿಲ್ಲ; ಅಸಾಮಿಗೆ ಬೇಕಿರಲಿಲ್ಲ -&lt;br /&gt;&lt;br /&gt;"ನೀನು ತಿನ್ನುವುದು ಅಲ್ಲೇನೂ ಇಲ್ಲವೆನಿಸುತ್ತದೆ - ಸಮೋಸ ಒಂದು ಬಿಟ್ಟು" ಎಂದ.&lt;br /&gt;&lt;br /&gt;ನಾನು ತಿಂಡಿಪಟ್ಟಿಯನ್ನೋದಿದೆ; ಹೌದೆನಿಸಿತು. ಸಮೋಸ ಒಂದಕ್ಕೆ ೬೦೦ ಯೆನ್ ಎಂದು ಓದುತ್ತಲೇ, ನಿಡುಸುಯ್ದು, ಜೋಪಾನವಾಗಿ ತಿಂಡಿಪಟ್ಟಿಯನ್ನು ಮಡಚಿ ಒಳಗಿಟ್ಟುಕೊಂಡು, ಕೋಣೆಗೆ ಹೆಜ್ಜೆ ಹಾಕಿದೆ. ಮರುದಿನವೇ ಕ್ಯೂಶೂನಲ್ಲಿನ ಕೆಲಸ ಮುಗಿಸಿ ಓಸಾಕಾಗೆ ಮರಳಬೇಕಿತ್ತು - ನನ್ನ ಕೋಣೆಗೆ! ಸಂತಸಗೊಂಡೆ! ರಾತ್ರಿಯೆಲ್ಲ ಕನ್ನಡದ ಕನಸು! ಮುದ್ದಾದ ಸಿರಿಗನ್ನಡದ ಅಕ್ಷರಗಳನ್ನು ನೋಡಿಯೇ ಇಷ್ಟು ಆನಂದವಾಗಬೇಕಾದರೆ, ಎಂಥ ಶಕ್ತಿಯಿರಬೇಕು ಈ ಭಾಷೆಗೆ! ಮಂಪರಿನಲ್ಲೂ ಕನ್ನಡದ ಗುನುಗು! ಮುದ್ದಣ ಮನೋರಮೆಯರ ರಸಮಯ ಸಂಭಾಷಣೆಯಿಂದ ಹಿಡಿದು ಕೈಲಾಸಂ ಕಂಗ್ಲಿಷ್ ನಾಟಕಗಳವರೆಗೆ ಏನೇನೋ ನೆನಪಾಯಿತು! ಹಿಂದಿನವರ ಸಂತಸಮಯ ಬದುಕೂ ನಮ್ಮ ಈಗಿನ ಯಾಂತ್ರಿಕ ಬದುಕೂ ಎಷ್ಟು ವ್ಯತ್ಯಸ್ತವೆನಿಸಿತು.&lt;br /&gt;ಅದಕ್ಕಲ್ಲವೇ ಗುಂಡಪ್ಪನವರು ಹೇಳಿದ್ದು ...ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳೈಸೆ ಸೊಗಸು ಜೀವನವು ಮಂಕುತಿಮ್ಮ....! ಹೌದು; ಆದರೆ ಈಗ ಇಲ್ಲಿ ಅದು ನಡೆಯದೋ ತಮ್ಮ! ಮುಸುಕೆಳೆದು ಮಲಗಿದೆ; ಕನಸಲಿ ಬಂದುದು ಅಮ್ಮ!&lt;br /&gt;&lt;strong&gt;* * *&lt;br /&gt;&lt;/strong&gt;(ಮುಂದಿನ ಬಾರಿ: ರೈಲಿನ ರಾಜ್ಯ!)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/29152559-116266959330992576?l=kannadaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaputa.blogspot.com/feeds/116266959330992576/comments/default' title='Post Comments'/><link rel='replies' type='text/html' href='http://www.blogger.com/comment.g?blogID=29152559&amp;postID=116266959330992576' title='0 Comments'/><link rel='edit' type='application/atom+xml' href='http://www.blogger.com/feeds/29152559/posts/default/116266959330992576'/><link rel='self' type='application/atom+xml' href='http://www.blogger.com/feeds/29152559/posts/default/116266959330992576'/><link rel='alternate' type='text/html' href='http://kannadaputa.blogspot.com/2006/11/blog-post.html' title='೯. &apos;ಕ್ಯೂಶೂ&apos;ನಲ್ಲಿ ಕನ್ನಡ!'/><author><name>Buddha</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-29152559.post-116107455451133172</id><published>2006-10-17T17:58:00.000+09:00</published><updated>2006-10-17T18:05:27.163+09:00</updated><category scheme='http://www.blogger.com/atom/ns#' term='ಕಾವ್ಯ'/><title type='text'>ನೋವಿನ ಹಾಡು!</title><content type='html'>&lt;div align=center&gt;&lt;strong&gt;ನೋವಿನ ಹಾಡು!&lt;/strong&gt;&lt;br /&gt;&lt;strong&gt;--------------&lt;/strong&gt;&lt;/div&gt;&lt;p style="MARGIN-LEFT: 100px"&gt;&lt;br /&gt;&lt;span style="color:#3333ff;"&gt;ಧರಣಿಮಂಡಲ ಮಧ್ಯದೊಳಗೆ&lt;/span&gt;&lt;br /&gt;&lt;span style="color:#3333ff;"&gt;ಮೆರೆಯುತಿಹ ಕರ್ನಾಟದೇಶದೊ&lt;/span&gt;&lt;br /&gt;&lt;span style="color:#3333ff;"&gt;ಳಿರುವ ಬಣ್ಣದ ಬೆಂಗಳೂರಿನ ಕತೆಯ ನಾನಿಂದು ಪೇಳ್ವೆನು!&lt;/span&gt;&lt;br /&gt;&lt;br /&gt;&lt;span style="color:#3333ff;"&gt;ಕಾಲುಚೆಂಡನು ಆಡಲೋಸುಗ&lt;/span&gt;&lt;br /&gt;&lt;span style="color:#3333ff;"&gt;ಕಾಲು ಹಿಡಿದು ಬೇಡಿ ಕಾಡಿ&lt;/span&gt;&lt;br /&gt;&lt;span style="color:#3333ff;"&gt;ಸೋಲುಬುರುಕರ ತಂಡಕಟ್ಟುವ ಮಂದಿಯಿರುವುದು ಇಲ್ಲಿಯೇ!&lt;/span&gt;&lt;br /&gt;&lt;br /&gt;&lt;span style="color:#3333ff;"&gt;ಹಿಂದೆ ಬಂದರೆ ತಡೆಯಲಾರರು&lt;/span&gt;&lt;br /&gt;&lt;span style="color:#3333ff;"&gt;ಮುಂದೆ ಬಂದರೆ ಒದೆಯಲಾರರು&lt;/span&gt;&lt;br /&gt;&lt;span style="color:#3333ff;"&gt;ಕೊಂದರೂ ಒಂದು ಗೋಲು ಹೊಡೆಯರು ಚೆಂಡು ಇವರಿಗೆ ಏತಕೆ?&lt;/span&gt;&lt;br /&gt;&lt;br /&gt;&lt;span style="color:#3333ff;"&gt;ಇಂತಿರುಪ ಕುಂತಲದ ಸುತರು&lt;/span&gt;&lt;br /&gt;&lt;span style="color:#3333ff;"&gt;ಕುಂತಿರಲು ಆಕಳಿಸಿ ಸುಮ್ಮನೆ&lt;/span&gt;&lt;br /&gt;&lt;span style="color:#3333ff;"&gt;ಬಂತಿದೋ ಆಹ್ವಾನ ನೋಡೈ ಜಪಾನಿನೊಡನೆ ಆಟಕೆ!&lt;/span&gt;&lt;br /&gt;&lt;br /&gt;&lt;span style="color:#3333ff;"&gt;ತಟ್ಟಿದರು ತೊಡೆ ರಟ್ಟೆಗಳನು&lt;/span&gt;&lt;br /&gt;&lt;span style="color:#3333ff;"&gt;ಕಟ್ಟಿದರು ತಮ್ಮ ಟೊಂಕಕರಿವೆಯ&lt;/span&gt;&lt;br /&gt;&lt;span style="color:#3333ff;"&gt;ಜಟ್ಟಿಗಳು ನಾವೆನುತ ಬಾಯಲಿ ಬಿಟ್ಟ ಜುಟ್ಟನು ಕಟ್ಟುತಾ!&lt;/span&gt;&lt;br /&gt;&lt;br /&gt;&lt;span style="color:#3333ff;"&gt;ಕಿರಿಯ ಕಣ್ಣಿನ ಹಿರಿಯ ಪಟುಗಳು&lt;/span&gt;&lt;br /&gt;&lt;span style="color:#3333ff;"&gt;ಬರಿಯದೇತಕೆ ಮಾತು ಎನ್ನುತ&lt;/span&gt;&lt;br /&gt;&lt;span style="color:#3333ff;"&gt;ಭಾರತದ ಈ ಪೆರ್ಮೆ ನೆಲಕೆ ತಮ್ಮ ಪಾದವನಿಟ್ಟರು!&lt;/span&gt;&lt;br /&gt;&lt;br /&gt;&lt;span style="color:#3333ff;"&gt;ಬೆಂಗಳೂರಿನ ಗೊಡವೆ ತಿಳಿಯದೆ&lt;/span&gt;&lt;br /&gt;&lt;span style="color:#3333ff;"&gt;ಅಂಗಳದಿ ಬಂದಿಳಿದು ನೋಡೆ&lt;/span&gt;&lt;br /&gt;&lt;span style="color:#3333ff;"&gt;ಕಂಗಳನೆ ತಾವ್ ನಂಬದಾದರು ಶಿಥಿಲ ಕ್ರೀಡಾಂಗಣದಲಿ!&lt;/span&gt;&lt;br /&gt;&lt;br /&gt;&lt;span style="color:#3333ff;"&gt;ಹುಲ್ಲ ಕಾಣದ ಧೂಳು ನೆಲದಲಿ&lt;/span&gt;&lt;br /&gt;&lt;span style="color:#3333ff;"&gt;ಎಲ್ಲ ಪಟುಗಳು ಬಂದು ನಿಂತು&lt;/span&gt;&lt;br /&gt;&lt;span style="color:#3333ff;"&gt;ಮೆಲ್ಲ ಮೆಲ್ಲನೆ ನಿಜವನರಿಯಲು ಅಲ್ಲಿ ಮೊಳಗಿತು ಗೀತೆಯು!&lt;/span&gt;&lt;br /&gt;&lt;br /&gt;&lt;span style="color:#3333ff;"&gt;ಕಣ್ಣ ಹರಿಸಲು ಬರಿಯ ಅಂಗಳ&lt;/span&gt;&lt;br /&gt;&lt;span style="color:#3333ff;"&gt;ಬಣ್ಣವರಿಯದ ಬಿರುಕು ತಂಗಳ&lt;/span&gt;&lt;br /&gt;&lt;span style="color:#3333ff;"&gt;ಮಣ್ಣ ಹೊದ್ದ ಗೋಡೆ ಮೆಟ್ಟಲ ಮೇಲೆ ಕಾಣ ನರಪಿಳ್ಳೆಯೂ!&lt;/span&gt;&lt;br /&gt;&lt;br /&gt;&lt;span style="color:#3333ff;"&gt;ಲೆಕ್ಕಿಸದೆ ಚೆಂಡಾಟಕಿಳಿದು&lt;/span&gt;&lt;br /&gt;&lt;span style="color:#3333ff;"&gt;ಮುಕ್ಕಿಸುತ ಭಾರತಕೆ ಚಳ್ಳೆಯ&lt;/span&gt;&lt;br /&gt;&lt;span style="color:#3333ff;"&gt;ಮಕ್ಕಳಾಟವ ಹೋಲುವಂದದಿ ನುಗ್ಗಿ ಹೊಡೆದರು ಗೋಲ್ಗಳ!&lt;/span&gt;&lt;br /&gt;&lt;br /&gt;&lt;span style="color:#3333ff;"&gt;ಕನಲಿ ಸಂಜೆ ಮಬ್ಬಡರಿ ಪೋಗಿ&lt;/span&gt;&lt;br /&gt;&lt;span style="color:#3333ff;"&gt;ಹೊನಲ ಬೆಳಕಿನ ಪಂಜು ಬೆಳಗಲು&lt;/span&gt;&lt;br /&gt;&lt;span style="color:#3333ff;"&gt;ಜನಗಳೋ ಒಬ್ಬೊಬ್ಬರಾಗಿ ಬಂದು ಸೇರಿದರಲ್ಲಿಯೇ!&lt;/span&gt;&lt;br /&gt;&lt;br /&gt;&lt;span style="color:#3333ff;"&gt;ಮೇಲೆ ಎರಗುವ ದಾಳಿಕೋರರ&lt;/span&gt;&lt;br /&gt;&lt;span style="color:#3333ff;"&gt;ಕಾಲ ಒದೆತಕೆ ಬೆಬ್ಬಳಿಸುತಲಿ&lt;/span&gt;&lt;br /&gt;&lt;span style="color:#3333ff;"&gt;ಗೋಲ ರಕ್ಷಕ ನಂದಿಕೇಶ್ವರ ಕುಸಿದು ಬಿದ್ದನು ಅಲ್ಲಿಯೇ!&lt;/span&gt;&lt;br /&gt;&lt;br /&gt;&lt;span style="color:#3333ff;"&gt;ಎಲ್ಲ ಚೆನ್ನಿರೆ ಎಲ್ಲ ಕಾದಿರೆ&lt;/span&gt;&lt;br /&gt;&lt;span style="color:#3333ff;"&gt;ಎಲ್ಲ ನೋಡಲು ತವಕದಿಂದಿರೆ&lt;/span&gt;&lt;br /&gt;&lt;span style="color:#3333ff;"&gt;ಅಲ್ಲಿ ಆರಿತು ಹೊನಲ ಬೆಳಕು ಬೆಂಗಳೂರಿನ ಮಹಿಮೆಗೆ!&lt;/span&gt;&lt;br /&gt;&lt;br /&gt;&lt;span style="color:#3333ff;"&gt;ಒಂಟಿ ಪಂಜಲಿ ಮಬ್ಬು ಬೆಳಕಲಿ&lt;/span&gt;&lt;br /&gt;&lt;span style="color:#3333ff;"&gt;ಸೊಂಟ ಕಾಲನು ಒತ್ತಿ ಹಿಡಿಯುತ&lt;/span&gt;&lt;br /&gt;&lt;span style="color:#3333ff;"&gt;ಭಂಟರೆಲ್ಲರು ಮುಂದುವರಿಯಲು ಝಗ್ಗನೆ ಬೆಳಕಾಯಿತು!&lt;/span&gt;&lt;br /&gt;&lt;br /&gt;&lt;span style="color:#3333ff;"&gt;ಸುಯ್ದರೋ ನಿಡಿದಾಗಿ ಜನರು&lt;/span&gt;&lt;br /&gt;&lt;span style="color:#3333ff;"&gt;ಕಾಯ್ದರವರಾರಕ್ಷ ಭಟರು&lt;/span&gt;&lt;br /&gt;&lt;span style="color:#3333ff;"&gt;ಬಯ್ದರೋ ಹೊರನಾಡ ಜನರು, ನಕ್ಕರೋ ಆತಿಥೇಯರು!&lt;/span&gt;&lt;br /&gt;&lt;br /&gt;&lt;span style="color:#3333ff;"&gt;ಮೂರು ಗೋಲ್ಗಳ ಹೊಡೆಸಿಕೊಂಡು&lt;/span&gt;&lt;br /&gt;&lt;span style="color:#3333ff;"&gt;ಮಾರು ದೂರಕೆ ಚೆಂಡನೊದೆಯುವ&lt;/span&gt;&lt;br /&gt;&lt;span style="color:#3333ff;"&gt;ಹಾರಿ ತಡೆಯದೆ ಸೋತ ಭಾರತ ಜೋಲುಮೋರೆಯ ಹಾಕಿತು!&lt;/span&gt;&lt;br /&gt;&lt;br /&gt;&lt;span style="color:#3333ff;"&gt;ಆಡಿ ಮುಗಿಸಲು ಚಣಗಳಿರಲು&lt;/span&gt;&lt;br /&gt;&lt;span style="color:#3333ff;"&gt;ನಾಡ ಭಕುತ ಬೀದಿ ನಾಯಿ&lt;/span&gt;&lt;br /&gt;&lt;span style="color:#3333ff;"&gt;ಓಡುತಾ ತಾನಾಡಲೆಂದು ಹಾರಿತು ಮೈದಾನಕೆ!&lt;/span&gt;&lt;br /&gt;&lt;br /&gt;&lt;span style="color:#3333ff;"&gt;ಅಮ್ಮಗಳಿರಾ! ಅಪ್ಪಗಳಿರಾ!&lt;/span&gt;&lt;br /&gt;&lt;span style="color:#3333ff;"&gt;ಎಮ್ಮ ಅನ್ನದಾತಗಳಿರಾ!&lt;/span&gt;&lt;br /&gt;&lt;span style="color:#3333ff;"&gt;ಸುಮ್ಮನೆ ಸೋಲುವಿರಿ ಏಕೆ? ನಾನು ಆಡುವೆ ಎಂದಿತು!&lt;/span&gt;&lt;br /&gt;&lt;br /&gt;&lt;span style="color:#3333ff;"&gt;ಆರ ಚೆಂಡನು ಒದೆಯಲಮ್ಮಾ!&lt;/span&gt;&lt;br /&gt;&lt;span style="color:#3333ff;"&gt;ಆರ ಕಾಲನು ಕಚ್ಚಲಮ್ಮಾ!&lt;/span&gt;&lt;br /&gt;&lt;span style="color:#3333ff;"&gt;ಆರ ಮೇಲೆ ಎರಗಲಮ್ಮಾ! ಆರು ನಮ್ಮನು ಗೆಲುವರು?&lt;/span&gt;&lt;br /&gt;&lt;br /&gt;&lt;span style="color:#3333ff;"&gt;ಕಟ್ಟೆಯೊಡೆಯಿತು ನಗೆಯ ಹೊನಲು!&lt;/span&gt;&lt;br /&gt;&lt;span style="color:#3333ff;"&gt;ಚಟ್ಟವೇರಿತು ನಗರ ಕೀರುತಿ!&lt;/span&gt;&lt;br /&gt;&lt;span style="color:#3333ff;"&gt;ನಟ್ಟ ನಡುವಲಿ ಆಟ ನಿಲ್ಲಲು ತಲೆಯ ಬಾಗಿದರೆಲ್ಲರೂ!&lt;/span&gt;&lt;br /&gt;&lt;br /&gt;&lt;span style="color:#3333ff;"&gt;ಸಾಲದೆನ್ನಲು ಮತ್ತೆ ಆರಿತು&lt;/span&gt;&lt;br /&gt;&lt;span style="color:#3333ff;"&gt;ಕಾಲಕಾಲಕೆ ಹೊನಲ ಬೆಳಕು&lt;/span&gt;&lt;br /&gt;&lt;span style="color:#3333ff;"&gt;ಕಾಲವಾಯಿತು ಬೆಂಗಳೂರಿನ ಸಾಲಮಾಡಿದ ಪೆರ್ಮೆಯು!&lt;/span&gt;&lt;br /&gt;&lt;br /&gt;&lt;span style="color:#3333ff;"&gt;ಪಕ್ಕೆಹಿಡಿದು ನಗುತ ಹೊರಳುವ&lt;/span&gt;&lt;br /&gt;&lt;span style="color:#3333ff;"&gt;ಪಕ್ಕದಲಿಹ ಜಪಾನಿ ಜನರ&lt;/span&gt;&lt;br /&gt;&lt;span style="color:#3333ff;"&gt;ಮಿಕ್ಕ ಮಾತಿಗೆ ಸಿಲುಕದೆಯೆ ನಾ ಮೂಕನಾದೆನು ಇಲ್ಲಿಯೇ!&lt;/span&gt;&lt;br /&gt;&lt;br /&gt;&lt;span style="color:#3333ff;"&gt;ನಿತ್ಯವೂ ಅಪಮಾನಗೊಳುವ ಭಾರತೀಯನ ಕಥೆಯಿದು!&lt;/span&gt;&lt;br /&gt;&lt;/p&gt;&lt;br /&gt;&lt;div align=right&gt;&lt;br /&gt;&lt;strong&gt;- ಬೆನಕ&lt;/strong&gt;&lt;/div&gt;&lt;br /&gt;&lt;br /&gt;&lt;strong&gt;(೨೦೦೬.೧೦.೧೧ ರಂದು ಬೆಂಗಳೂರಿನಲ್ಲಿ ನಡೆದ ಭಾರತ-ಜಪಾನ್ ಹೊನಲು ಬೆಳಕಾರಿದ ಪಂದ್ಯವನ್ನೂ, ಮೈದಾನಕ್ಕೆ ನುಗ್ಗಿದ ಬೀದಿನಾಯಿಯನ್ನೂ ಜಗಜ್ಜಾಹೀರು ಮಾಡಿ ಬೆಂಗಳೂರಿನ ನೈಜತೆಯನ್ನು ತೋರಿಸಿದ ಜಪಾನ್ ದೂ.ದ ನೇರಪ್ರಸಾರದಿಂದ ನೊಂದ ಬಳಿಕ ಬರೆದದ್ದು)&lt;/strong&gt;&lt;br /&gt;&lt;img style="float:left; margin:0 10px 10px 0;cursor:pointer; cursor:hand;" src="http://photos1.blogger.com/blogger/550/1446/320/Dog1.jpg" border="0" alt="" /&gt;&lt;br /&gt;&lt;img style="float:right; margin:0 10px 10px 0;cursor:pointer; cursor:hand;" src="http://photos1.blogger.com/blogger/550/1446/320/Dog2.jpg" border="0" alt="" /&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/29152559-116107455451133172?l=kannadaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaputa.blogspot.com/feeds/116107455451133172/comments/default' title='Post Comments'/><link rel='replies' type='text/html' href='http://www.blogger.com/comment.g?blogID=29152559&amp;postID=116107455451133172' title='3 Comments'/><link rel='edit' type='application/atom+xml' href='http://www.blogger.com/feeds/29152559/posts/default/116107455451133172'/><link rel='self' type='application/atom+xml' href='http://www.blogger.com/feeds/29152559/posts/default/116107455451133172'/><link rel='alternate' type='text/html' href='http://kannadaputa.blogspot.com/2006/10/blog-post_17.html' title='ನೋವಿನ ಹಾಡು!'/><author><name>Buddha</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-29152559.post-116046078710738895</id><published>2006-10-10T15:07:00.000+09:00</published><updated>2006-10-10T16:05:16.560+09:00</updated><category scheme='http://www.blogger.com/atom/ns#' term='ನನ್ನ ಜಪಾನ್ ಪ್ರವಾಸ'/><title type='text'>೮. ಹಳೆಯ ರಾಜ್ಯ ಇನ್ನಿಲ್ಲ!</title><content type='html'>&lt;div align="center"&gt;&lt;strong&gt;&lt;span style="color:#3333ff;"&gt;ನನ್ನ ಜಪಾನ್ ಪ್ರವಾಸ: ೮. ಹಳೆಯ ರಾಜ್ಯ ಇನ್ನಿಲ್ಲ!&lt;/span&gt;&lt;/strong&gt;&lt;/div&gt;&lt;br /&gt;&lt;br /&gt;ಸರಿ, ಯಥಾಪ್ರಕಾರ ಕ್ಯೂಶೂದ್ವೀಪದ ಕೆಲಸ ಮುಂದುವರೆಯಿತು. ಕೆಲಸಕ್ಕೆ ಸ್ವಲ್ಪ ಹೊಂದಿಕೊಂಡದ್ದರಿಂದ ಈಗ ಕೆಲಸದ ಜೊತೆಗೆ ಜಪಾನಿನ ಸಮಾಜ - ಜೀವನವನ್ನು ನೋಡಲು ಶುರುಮಾಡಿದೆ. "....ಜಪಾನ್ ದೇಶ ಕಷ್ಟಜೀವಿಗಳ ಶ್ರಮಜೀವಿಗಳ ತಾಣ; ಆದ್ದರಿಂದಲೇ ಅದು ಇಂದು ಮುಂದುವರೆದ ದೇಶವಾಗಿದೆ...." ಐದನೇ ತರಗತಿಯ ಸಮಾಜಪರಿಚಯದ ಭೂಗೋಳದ ಪಾಠದ ವಾಕ್ಯ ನೆನಪಾಯಿತು. ನೂರಕ್ಕೆ ನೂರು ಸತ್ಯ; ಆದರೆ ಈಗಲ್ಲ! ಮೂವತ್ತು ನಲವತ್ತು ವರ್ಷಗಳ ಹಿಂದೆ ನಿಜವಾಗಿದ್ದ ಸಂಗತಿಯಿದು! ಈಗ ಆ ವಾಕ್ಯವನ್ನು "ಜಪಾನ್ ದೇಶ, ಸೋಮಾರಿ ಯುವಜನರ ತಂಗುದಾಣ" ಎಂದು ಬದಲಿಸುತ್ತಿದ್ದೆ. ಈಗ ಬೆಳಿಗ್ಗೆ ಎಬ್ಬಿಸುವುದರಿಂದ ಹಿಡಿದು, ಮಲಗಿಸುವವರೆಗೆ ಎಲ್ಲಾ ಕೆಲಸ ಮಾಡಲು ಯಂತ್ರಗಳೇ ಬಂದಿವೆಯಾದ್ದರಿಂದ ಮನುಷ್ಯನಿಗೆ ಕೇವಲ ಉಸಿರಾಡುವುದಷ್ಟೇ ಕೆಲಸ. ದೇವರಾಣೆ ಸತ್ಯ ಸ್ವಾಮೀ; ಇವರಷ್ಟು ಸುಖದಿಂದ ಬೆಳೆದಿರುವ ಇಂದಿನ ಯುವಕರನ್ನು ನಾ ಕಾಣೆ! ಶ್ರಮಜೀವಿಗಳಾಗಿದ್ದವರು ಈಗ ವಯಸ್ಸಾಗಿ ನಿವೃತ್ತಿಯ ಅಕ್ಕ-ಪಕ್ಕದಲ್ಲಿರುವವರು; ಸುಖಾರ್ಥಿ ಧೋರಣೆಯ ಈಗಿನ ಯುವಜನರಲ್ಲ. ಈಗಿನ ಶ್ರಮ(?)ಜೀವಿಗಳು ಕೆಲಸವನ್ನು ಹಿಂದಿನವರಂತೆ ದೇಶಕ್ಕಾಗಿ, ಅಭಿವೃದ್ಧಿಗಾಗಿ ಮಾಡುವವರಲ್ಲ; ಕೇವಲ ದುಡ್ಡಿಗಾಗಿ ಮಾಡುವವರು. ಇಲ್ಲಿನ &lt;strong&gt;ಸರರೀಮನ್&lt;/strong&gt;[=ಸ್ಯಾಲರೀಮನ್ ಅಂದರೆ ಸಂಬಳದ ಶ್ರೀಸಾಮಾನ್ಯ] ಪ್ರತಿದಿನ ಮನೆಗೆ ಮರಳುವುದು ಕೆಲಸದ ವೇಳೆ ಮುಗಿದು ಮೂರುಗಂಟೆಗಳಾದಮೇಲೆಯೇ. ಈ &lt;strong&gt;ಝಾಂಗ್ಯೋ&lt;/strong&gt;[=ಅಧಿಕಾವಧಿ ಕಾರ್ಯ = ಓವರ್‌ಟೈಮ್] ಕೆಲವರಿಗೆ ಅನಿವಾರ್ಯ ಹಾಗೂ ಅವಿಭಾಜ್ಯ ಅಂಗ! ನಿಜವಾಗಿಯೂ ಅಷ್ಟು ಕೆಲಸವಿರುವವರು ಕಡಿಮೆಯೇ ಆದರೂ, ಮೇಲಧಿಕಾರಿಯನ್ನು ಮೆಚ್ಚಿಸಲು, ಕೆಲಸ ಅಂಥದ್ದೇನೂ ಇಲ್ಲದಿದ್ದರೂ ತಾವೂ ಸುಮ್ಮನೆ ಕುಳಿತಿರುವವರೇ ಹೆಚ್ಚು! ಇನ್ನು ಕೆಲವರಿಗೆ ಕೆಲಸ ಶುರುವಾಗುವುದೇ ಕಛೇರಿಯ ನಿತ್ಯಾವಧಿ ಮುಗಿದ ಬಳಿಕ; &lt;strong&gt;ಝಾಂಗ್ಯೋ&lt;/strong&gt; ದುಡ್ಡು ಬಂದರೆ ಬಿಡುವ ಮೂರ್ಖರುಂಟೇ? ಅಂಥದ್ದೇನೂ ಗಿಟ್ಟದೆಂದು ತಿಳಿದರೆ, ಅಥವಾ ಕೆಲಸದಲ್ಲಿ ಅಷ್ಟೇನೂ ಮನಸ್ಸಿಲ್ಲದವರಾದರೆ, ಸಂಜೆ ೫ : ೪೫ ಕ್ಕೆ ಗಂಟೆ ಢಣ್ಣೆನ್ನುತ್ತಿದ್ದಂತೆ ಎದ್ದೆನೋ ಬಿದ್ದೆನೋ ಎಂದು ಎಲ್ಲಾ ಪರಾರಿ! ಅವರ ಗಣಕ ಕೆಲವೊಮ್ಮೆ ಆರುವುದು ಎರಡು ನಿಮಿಷ ತಡವಾದರೆ ಅವರು ಪಡುವ ಸಂಕಟ ನೋಡಬೇಕು ನೀವು!&lt;br /&gt;&lt;br /&gt;ಇಂಥವರ ಕೈಲಿ ಹೇಗಾದರೂ ಕೆಲಸ ಮಾಡಿಸಲೇಬೇಕೆಂದು ಹಠಹಿಡಿದು ತಲೆಯಲ್ಲಿನ ಕೂದಲುಗಳನ್ನೆಲ್ಲಾ ಕಳೆದುಕೊಳ್ಳುತ್ತಿರುವ ಹಿರಿಯ ಅಧಿಕಾರಿಗಳು, ಬೇಕೆಂದೇ ಸಂಜೆ ೫: ೪೦ ಕ್ಕೆ ಅವರಿಗೆ ಹೊಸಕೆಲಸ ವಹಿಸಿ ಬೆಳಿಗ್ಗೆಯೊಳಗೆ ಮುಗಿಸೆನ್ನುವುದೂ ಇದೆ! ಇಂಥ ಸಂದಿಗ್ಧಗಳಲ್ಲೇ ಸಿಲುಕಿ ಜೀವನವನ್ನೆಲ್ಲಾ ಅವರು ಕಳೆದಿದ್ದಾರೆ; ಆದರೆ ಯುವಜನ ಅದಕ್ಕೆಲ್ಲ ಸೊಪ್ಪುಹಾಕುವ ಮಂದಿಯಲ್ಲ; "ನನ್ನಿಂದಾಗದು!" ಎಂದು ಸೀದಾ ಕಳಚಿಕೊಂಡವರೂ ಇದ್ದಾರೆ! ಆಜೀವ ಉದ್ಯೋಗ ವ್ಯವಸ್ಥೆಯೇ ಹೆಚ್ಚಿರುವ ಜಪಾನಿನಲ್ಲಿ ಕೆಲಸ ಕಳೆದುಕೊಳ್ಳುವ ಭಯ ಅವರಿಗೂ ಇಲ್ಲ; ತೆಗೆಯುವ ದುಸ್ಸಾಹಸದ ಧೈರ್ಯ ಅಧಿಕಾರಿಗಳಿಗೂ ಇಲ್ಲ. ಅಪ್ಪಿ ತಪ್ಪಿ ಹೊರಬಿದ್ದರೆ, ಇದ್ದೇ ಇದೆ ಎಂಥದೋ ಒಂದು ಅಲ್ಪಕಾಲದ ಕೆಲಸ; ದುಡ್ಡಿಗಂತೂ ಯಾವ ತೊಂದರೆಯೂ ಇಲ್ಲ! ನಷ್ಟ ಯುವಜನರನ್ನು ಕಳೆದುಕೊಳ್ಳುವ ಕಛೇರಿಯದೇ! ಯುವಕರಿಗಲ್ಲ! &lt;strong&gt;ಝಾಂಗ್ಯೋ&lt;/strong&gt; ಮಾಡುವ &lt;strong&gt;ಸರರೀಮನ್&lt;/strong&gt; ಗಳು ರಾತ್ರಿ ಮನೆಗೆ ಹೋಗುವಷ್ಟರಲ್ಲಿ ೧೨ ಆಗಿರುವುದೂ ಉಂಟು. ಮಾರ್ಗಮಧ್ಯೇ, ದಿನದ ಎಲ್ಲ ಒತ್ತಡಗಳನ್ನು ಕಳೆದುಕೊಳ್ಳಲು ಜೂಜಿಗೋ, ಪಾನೀಯಕ್ಕೋ, ಅಂಗಮರ್ದನಕ್ಕೋ ಮುಗಿಬಿದ್ದು ತೂರಾಡುತ್ತಾ ಮನೆ ಸೇರಿದಾಗ ಮಕ್ಕಳೆಲ್ಲ ಮಲಗಿರುವುದೂ ಉಂಟು! ಬೆಳಿಗ್ಗೆ ಅವು ಏಳುವ ಮೊದಲೇ ಮನೆ ಬಿಡುವ ಅಪ್ಪನ ಮುಖ ಕಾಣುವುದು ವಾರಕ್ಕೊಮ್ಮೆಯೇನೋ! ಅಂಥವರನ್ನು "ಅಪ್ಪನ ಬೆನ್ನು ನೋಡಿ ಬೆಳೆದವರು" ಎನ್ನುವ ಜಪಾನೀ ನಾಣ್ಣುಡಿಯಿಂದ ಗುರುತಿಸುವುದು ಇಲ್ಲಿ ಜನಜನಿತ!&lt;br /&gt;&lt;br /&gt;ಎಲ್ಲರೂ ಮಾಡುವುದು ಓ. ಟಿ. ಗಾಗಿ; ನೋಟಿಗಾಗಿ! ಖಂಡಿತ ಹೊಟ್ಟೆ-ಬಟ್ಟೆಗಾಗಿ ಅಲ್ಲ! ಏಕೆಂದರೆ ಇವರು ಹೆಚ್ಚಿಗೆ ಇವೆರಡಕ್ಕೂ ವೆಚ್ಚಮಾಡುವುದೇ ಇಲ್ಲ! ಮಧ್ಯಾಹ್ನದ ಊಟಕ್ಕಾಗಿ ಕಡಿಮೆಬೆಲೆಯ ಅಂಗಡಿಯ ಮುಂದೆ ಸಾಲುಗಟ್ಟಿ ನಿಲ್ಲುವವರನ್ನೋ, ಅಥವಾ &lt;strong&gt;ಒಬೆಂತೋ&lt;/strong&gt;[ಬುತ್ತಿ]ಯನ್ನು ಮಾರುವವನ ಕಡೆಗೆ ನುಗ್ಗಿ ಹೋಗುವವರನ್ನೋ ನೋಡುವುದು ಇಲ್ಲಿ ಸಾಮಾನ್ಯ ದೃಶ್ಯ. ಬಟ್ಟೆಯ ಬಗ್ಗೆ ನೀವು ಕೇಳದಿರುವುದೇ ಕ್ಷೇಮ! ಪ್ರತಿದಿನ ಅದೇ ಅಂಗಿ; ಅದೇ ಷರಾಯಿ! ಬದಲಿಸಿದರೆ &lt;strong&gt;ನೆಕುತೈ&lt;/strong&gt;[ನೆಕ್ ಟೈ] ಮಾತ್ರ! ಎಂಥ ದೊಡ್ಡ ಕಛೇರಿಯಲ್ಲಿದ್ದರೂ 'ಈ ಬುದ್ಧಿ'ಯನ್ನು ಬಹಳಷ್ಟು ಜನ ಬಿಡುವುದೇ ಇಲ್ಲ! ಒಂದೇ ಅಂಗಿ - ಅದೂ ವರ್ಷಗಟ್ಟಲೆ?! ಒಗೆಯುತ್ತಾರೆಂದುಕೊಂಡಿದ್ದೇನೆ; ಯಾವಾಗ ಎಂದು ಕೇಳಬೇಡಿ! ಒಂದೇ ಅಂಗಿಯೇ? ಇರಲಾರದು ಎಂದು ನಾನೂ ನಿಮ್ಮಂತೆ ಅನುಮಾನಪಟ್ಟಿದ್ದಿದೆ. ಅಬ್ಬಬ್ಬ ಎಂದರೆ ೨-೩ ಅಂಗಿ... ಮುಗಿಯಿತು ಅಷ್ಟೇ! ಒಂದೇ ಬಣ್ಣದ ಬಟ್ಟೆಯಾದರೆ, ನನಗೇನು ಎಲ್ಲರಿಗೂ ತಿಳಿಯುತ್ತದೆ ಬಿಡಿ! ಅದಕ್ಕೆ ಇವರೊಂದು ಉಪಾಯ ಕಂಡುಹಿಡಿದುಕೊಂಡಿದ್ದಾರೆ - ಎಲ್ಲರೂ ಬಿಳಿಯ ಅಂಗಿಯನ್ನೇ ಧರಿಸಿಬಿಡುವುದು! ಪ್ರತಿದಿನ! ವರ್ಷದ ಪ್ರತಿದಿನವೂ! ಹೇಗಿದೆ ತಂತ್ರ? ಬೇರೆಯವರಿಗೆ ಕಣ್ಣು ಕೈಕೊಡಬಹುದು; ನಾನು ಇವರ ಪಕ್ಕದಲ್ಲೇ ಪ್ರತಿದಿನ ಕೂಡುವವನು ಸ್ವಾಮೀ!&lt;br /&gt;&lt;br /&gt;ಇವನಿಗೇನು ತಲೆಕೆಟ್ಟಿದೆಯೇ ಎಂದುಕೊಳ್ಳಬೇಡಿ! ನಾನು ಹೇಳುತ್ತಿರುವುದೆಲ್ಲ ಸತ್ಯ! ಆದರೆ ಕಾರಣವಿದೆ; ಜಪಾನೀ ಶ್ರೀಸಾಮಾನ್ಯ ಸರರೀಮನ್ ಹೀಗೆ ಮಾಡಲು ಕಾರಣವಿದೆ! ಜಪಾನಿನಲ್ಲಿ ಆಹಾರ-ಬಟ್ಟೆ-ವಸತಿ ಸಿಕ್ಕಾಪಟ್ಟೆ ದುಬಾರಿ - ಇಲ್ಲಿದ್ದು ನೋಡದವರ ಊಹೆಗೂ ನಿಲುಕದಷ್ಟು! ಹೀಗಿರುವಾಗ ಕಡಿಮೆ ಬೆಲೆಯ ಊಟ-ಬಟ್ಟೆ ಕೊಂಡರೆ ತಪ್ಪೇನು? ಆದರೆ, 'ಉಳ್ಳವರೂ' ಇದೇ ಬುದ್ಧಿ ತೋರುವುದು ಸ್ವಲ್ಪ ಅರ್ಥವಾಗದು; ಅರ್ಥವಾಗದ್ದೇನಲ್ಲ - ಹೀಗೆ ಉಳಿಸಿದ ಹಣವನ್ನು ಜೂಜು - ಮೋಜು - ವಿನೋದ - ಮೇಜುವಾನಿಗಳಿಗೆ ಸುರಿಯುತ್ತಾರೆ! ಏನೇ ಹೇಳಿ, ಎರಡು ಅಂಗಿ ಕೊಳ್ಳಬಹುದು; ಅದರಲ್ಲಿ ಜುಗ್ಗತನ ನೋಡಿದ್ದು ಇದೇ ಮೊದಲು. ಬಿಳಿಯ ಬಟ್ಟೆಯಾದರೆ ಎರಡೋ ಮೂರೋ ಇರಬಹುದು ಎಂದುಕೊಂಡೀರಿ; ಪ್ರತಿದಿನ ಹಳದಿಯೋ ನೀಲಿಯೋ ಆದಲ್ಲಿ ಅಂಗಿ ಒಂದೇ ಎಂದು ಅಲ್ಲಿ ಕುಳಿತಿರುವ ನಿಮಗೂ ತಿಳಿಯುತ್ತದೆ. ಆದರೆ ಎಲ್ಲರೂ ಹಾಗೇ ಏನಲ್ಲ; ಎಲ್ಲ ನಿಯಮಕ್ಕೂ ಅಪವಾದವಿದೆಯಲ್ಲವೇ! ೫-೬ ಅಂಗಿ, ಷರಾಯಿಯವರೂ, ಸಾಲ ಮಾಡಿ ಪ್ರತಿವಾರ ಹೊಸ ನೆಕುತೈ ಕೊಳ್ಳುವವರೂ ಇದ್ದಾರೆ. ಒಳ್ಳೆಯ ಅಂದರೆ ದುಬಾರಿ ಊಟ ಕೊಳ್ಳುವವರೂ ಇದ್ದಾರೆ; ತಾವು ಠೀವಿಯಿಂದ ನಡೆದಾಡಿ ಕಂಡವರೆಲ್ಲಾ ತಮ್ಮನ್ನು ನಖಶಿಖಾಂತ ನೋಡಿ ಬಾಯ್ಬಿಡಲೆಂದು ಬಯಸುವವರೂ ಇದ್ದಾರೆ; ಪ್ರತಿದಿನ ಹೊಸ ಅಥವಾ ಬೇರೆ ಬಟ್ಟೆ ಹಾಕಿಕೊಂಡು ಮೇಲೆ ಸೂಟು ಎಂಬ ಸರರೀಮನ್ನರ ಪತಾಕೆಯನ್ನು ಹೊದ್ದು ಪ್ರತಿನಿತ್ಯದ ರೈಲಿನಲ್ಲಿ ಉಜ್ಜಾಡಿಕೊಂಡು ಕಛೇರಿಗೆ ಬಂದವರೇ ಎಂದಿನಂತೆ 'ಸಮವಸ್ತ್ರ' - ಅದೇ ಹಳೆಯ ಅಂಗಿ-ಷರಾಯಿಗೆ ಬದಲಿಸಿಕೊಂಡು ಪ್ರತ್ಯಕ್ಷವಾಗುತ್ತಾರೆ! ಕಛೇರಿಯಲ್ಲಿ ಮನುಷ್ಯನ ಮುಖಕ್ಕಿಂತ, ಅವನ ಬಟ್ಟೆಯನ್ನು ನೋಡಿಯೇ ಹೇಳಬಹುದು ಅವನಾರೆಂದು! ಎಂದಿಗೂ ಈ ತರ್ಕ ತಪ್ಪದು!&lt;br /&gt;&lt;br /&gt;ಇನ್ನು ಪಾದರಕ್ಷೆ! ಬೂಟು, ಷೂ ರೈಲಿನಲ್ಲಿ ಬರುವಾಗ ಮಾತ್ರ! ಕಛೇರಿಯೊಳಗೆ ನಡೆದಾಡಲು ಹವಾಯಿ ಚಪ್ಪಲಿಯಂಥಾ ಪಾದುಕೆ! ಆದ್ರೆ ಪ್ರತಿದಿನ ಕಾಲುಚೀಲ ಮಾತ್ರ ಬದಲಿಸುವ ಒಳ್ಳೆಯ ಬುದ್ಧಿ ಇಲ್ಲಿ ಎಲ್ಲರಿಗೂ ಇದೆ. ಕಛೇರಿಯಲ್ಲಿ ಈ ಎಲ್ಲ ಬಟ್ಟೆ-ಬರೆಗಳನ್ನಿಡಲು, ಸೂಟಿನ ಕೋಟು ನೇತುಹಾಕಲು ಒಂದು &lt;strong&gt;ರೊಕ್ಕಾ&lt;/strong&gt;[=ಲಾಕರ್] ಇರುತ್ತದೆ. ಅದು ಇದ್ದುದಕ್ಕೆ ಬದುಕಿದೆವು; ಇಲ್ಲವಾದರೆ, ವರ್ಷಕ್ಕೊಮ್ಮೆ(?) ಅಗಸನ ಕೈಸೇರುವ ಸೂಟಿನ ಕೋಟಿನ ನಾತ ಕುಡಿಯುವುದು ನಮಗ್ಯಾವ ಕರ್ಮ! ತಮಾಷೆ ಸಾಕೆನ್ನುವಿರಾ? ನಿಜವಾದ ತಮಾಷೆ ಇನ್ನು ಮುಂದೆ! ಜಪಾನೀಯರಿಗೆ ಬೆಳಿಗ್ಗೆ ಹಲ್ಲುಜ್ಜುವ ಅಭ್ಯಾಸವಿಲ್ಲ; ಎದ್ದ ಮೇಲೆ ಸ್ನಾನ ಮಾಡುವುದಿಲ್ಲ! ಶೌಚದಲ್ಲಿ ತೊಳೆಯುವುದು ಇವರಿಗೆ ಗೊತ್ತಿಲ್ಲ; ಸದ್ಯ ಈ ಚಳಿಯಲ್ಲಿ ನೀರು ಸೋಕಿದರೆ ನಖಶಿಖಾಂತ ಸೆಟೆದುಕೊಳ್ಳುವ ಭಯಕ್ಕೇ ಅರ್ಧ ಮೈ ತಣ್ಣಗಾಗುತ್ತದೆ. ಈಗ ಹೇಳಿ ಸ್ವಾಮಿ ನಾತದ ವಿಚಾರ!&lt;br /&gt;&lt;br /&gt;&lt;img style="FLOAT: left" src="http://photos1.blogger.com/blogger/550/1446/320/scatterhair.jpg" /&gt;&lt;/img&gt;&lt;br /&gt;&lt;img style="FLOAT: right" src="http://photos1.blogger.com/blogger/550/1446/320/bluetuft.jpg" /&gt;&lt;/img&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;ತಲೆಗೂದಲು ಬಾಚಲು ಗೊತ್ತಿರುವುದು ಐವತ್ತರ ಮೇಲಿನ 'ಯುವ'ಜನರಿಗೆ ಮಾತ್ರ; ಅರ್ಥಾತ್ ಎರಡನೇ ವಿಶ್ವಯುದ್ಧದ ಆಚೀಚಿನ ವರ್ಷಗಳಲ್ಲಿ ಹುಟ್ಟಿದವರಿಗೆ ಮಾತ್ರ. ಮಿಕ್ಕ 'ಕೇಶ'ವರಾಯರುಗಳನ್ನು ನೋಡಿ ಬೈ-ತಲೆಯಿರಲಿ ತಲೆಯೇ ಕೆಟ್ಟಿದೆ ಎಂದುಕೊಂಡದ್ದಿದೆ! ಹುಡುಗಿಯರಂತೂ, ನವಿಲನ್ನು ನೋಡಿ ಕೆಂಬೂತ ಪುಕ್ಕ ತೆರೆದುಕೊಂಡಂತೆ, ಸಿಕ್ಕಾಪಟ್ಟೆ ಬಣ್ಣ ಬಳಿದು ಕೆಂಪಾಗಿಸಿಕೊಂಡ ತಮ್ಮ ಕೂದಲಿನಿಂದ ತಾವೂ ಅಮೆರಿಕನ್ನರು ಎಂದು ಬೀಗುತ್ತಾರೆ! ತಮಾಷೆಯೆಂದರೆ ಸ್ವಲ್ಪ ದಿನಗಳ ನಂತರ ಕೂದಲಿನ ಬುಡದಿಂದ ಕಪ್ಪು ನೈಸರ್ಗಿಕ ಕೂದಲು ಬೆಳೆಯತೊಡಗಿ, ಮೊದಲು ಬಳಿದುಕೊಂಡ ಬಂಗಾರದ ಬಣ್ಣದೊಡನೆ ಸೇರಿ 'ಕಲರ್-ಕಲರ್' ಎಂದು ಎದ್ದು ಕುಣಿಯುತ್ತಿರುತ್ತವೆ! ಅಮೆರಿಕನ್ನರಾಗಲು ತಲೆಗೆ ಬಣ್ಣ ಬಳಿದುಕೊಂಡವರಲ್ಲಿ ಹುಡುಗರೇನೂ ಕಡಿಮೆಯಿಲ್ಲ; ಅವರೂ 'ಕಲರ್-ಕಲರ್' ಶೈಲಿಯ ಕೋಳಿಪುಕ್ಕದಂತೆ ಬಾಚಿ - ಅಲ್ಲಲ್ಲ - ಚಾಚಿಕೊಂಡ ಕೂದಲಿನವರೇ! ಇನ್ನೂ ಹೆಚ್ಚೆಂದರೆ, ಹುಂಜದ ಹುಟ್ಟಿನ ಜುಟ್ಟಿನವರೂ, ಘಮಲದೆಣ್ಣೆಯ ಸುರುವಿ ಚೂಪಾಗಿ ತಿರುವಿ ನಿಂತ ಮುಳ್ಹಂದಿ ತಲೆಯವರೂ, ಅಯ್ಯಯ್ಯಪ್ಪ.... ಊದಾ ಬಣ್ಣದ, ನೀಲಿ ಬಣ್ಣದ ಕೂದಲಿನ ಅಜ್ಜಿಗಳೂ, ಮುಖದ ತುಂಬಾ ಬರಿಯ ಹಲ್ಲೇ ಕಾಣುವಂತಿರುವ ಇಪ್ಪತ್ತು ಮಿಲಿಮೀಟರ್ ಮೀರಿದ ದಪ್ಪ ತುಟಿಬಣ್ಣದವರೂ ಇದ್ದಾರೆ! ನಗೆಯು ಬರುತಿದೆ ಎನಗೆ ನಗೆಯು ಬರುತಿದೆ! ಎಂಥ ಜನ! ಬರಿಯ ಅಮೆರಿಕದ ಮೂಢ ಹಿಂಬಾಲಕರು! ಕುವೆಂಪುರವರ ಕ್ಷಮೆ ಕೋರಿ ಹೀಗೆನ್ನಬೇಕೆನಿಸುತ್ತಿದೆ:&lt;br /&gt;&lt;br /&gt;&lt;img style="FLOAT: left" src="http://photos1.blogger.com/blogger/550/1446/320/cutpant.jpg" /&gt;&lt;/img&gt;&lt;br /&gt;&lt;img style="FLOAT: right" src="http://photos1.blogger.com/blogger/550/1446/320/openbelly.jpg" /&gt;&lt;/img&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;span style="color:#3333ff;"&gt;ಅವ್ವಿಲಿ, ಅಪ್ಪಿಲಿ, ಅಣ್ಣಿಲಿ, ತಂಗಿಲಿ, ಮಾವಿಲಿ, ಬಾವಿಲಿ&lt;br /&gt;ಹರುಕಲು ಬಟ್ಟೆಲಿ, ಕೆದರಿದ ಜುಟ್ಟಲಿ, ಎತ್ತರ ಮೆಟ್ಟಲಿ&lt;br /&gt;ಬಣ್ಣದ ಪಟ್ಟೆಲಿ, ತೆರೆದಾ ಹೊಟ್ಟೆಲಿ - ಎಲ್ಲಾ ಬಂದವು ಓಡೋಡಿ!&lt;br /&gt;'ಜೋಗಿಯು' ಬಾರಿಸೆ ಕಿಂದರಿಯ!&lt;br /&gt;&lt;br /&gt;ರೋಗದ ತಂದೆಯ ಬಿಟ್ಟೋಡಿದವು! ಕೈಲಾಗದ ತಾಯಿಯ ಮರೆತೋಡಿದವು!&lt;br /&gt;ವಿಗ್ರಹಬುದ್ಧನ ಒದ್ದೋಡಿದವು! ನಿಗ್ರಹವಿಲ್ಲದೆ ಕುಣಿದಾಡಿದವು!&lt;br /&gt;ಹೆದರಿಕೆಯಿಲ್ಲದೆ ಬೆದರಿಕೆಯಿಲ್ಲದೆ ಕುಡಿದಾಡಿದವು! ಬಡಿದಾಡಿದವು!&lt;br /&gt;ನುಗ್ಗುತ ಹಿಗ್ಗುತ ಕನಸಲಿ ಹಾರುತ ಎಲ್ಲಾ ಬಂದವು ಓಡೋಡಿ!&lt;br /&gt;'ಜೋಗಿ'ಯು ಬಾರಿಸೆ ಕಿಂದರಿಯ!&lt;br /&gt;&lt;/span&gt;&lt;br /&gt;&lt;img src="http://photos1.blogger.com/blogger/550/1446/320/ganguro.jpg" /&gt;&lt;/img&gt;&lt;br /&gt;&lt;br /&gt;ನಿಜ! ಪಾಶ್ಚಾತ್ಯ ಜೋಗಿಯ ಕಿಂದರಿಗೆ ಬಲಿಬಿದ್ದವರಿವರು! ಇಡೀ 'ಕಿಂದರಿಜೋಗಿ' ಪದ್ಯರೂಪಕವನ್ನೇ ಇಂದಿನ ಜಪಾನಿನ ಜನಜೀವನಕ್ಕೆ ಹೋಲಿಸಿದರೆ, ಭವಿಷ್ಯ ಇತ್ಯರ್ಥವಾದಂತೆಯೇ! ಅಬ್ಬಾ.. ಜೋಗೀ! ಎಂತಹ ಕಿಂದರಿ ನಿನ್ನದು! ಇಡೀ ಜಪಾನೀ ಸಮಾಜ ನಿನ್ನ ಕಿಂದರಿಗೆ ಕುಣಿಯುವುದೆಂದರೆ...! ನಾನು-ನೀವು ಕೇಳಿ ತಿಳಿದ ಹಳೆಯ ಜಪಾನ್ ಇನ್ನಿಲ್ಲ; ಇನ್ನಿಲ್ಲ! ಥೂ! ಬರಿಯ ನಿರಾಶಾವಾದ, ಪೆಸಿಮಿಸ್ಮ್ ಎನ್ನಬೇಡಿ; ಏಕೆಂದರೆ ಇದು ಕಹಿ ಸತ್ಯ! ಜಪಾನನ್ನು ನಾನು ಕಾಮಾಲೆ ಕಣ್ಣುಗಳಿಂದ ನೋಡುತ್ತಿಲ್ಲ; ಇಲ್ಲಿ ಯಾವ ಪೂರ್ವಾಗ್ರಹವೂ ಇಲ್ಲ. ಎಲ್ಲವನ್ನು ಕಣ್ಣಾರೆ ಕಂಡು, ವಿಚಾರಿಸಿ, ಕೆಲವನ್ನು ಅವರೇ 'ಹೌದು' ಎಂದ ಮೇಲೆ ಬರೆದ ಸತ್ಯ ವಾಕ್ಯ! ನಾನು ಮೊದಲೇ ಹೇಳಿದಂತೆ ಇವರ ಈ ಎಲ್ಲ 'ರೀತಿ-ನೀತಿ'ಗಳಿಗೂ ಕಾರಣವಿದೆ - ಎರಡನೇ ವಿಶ್ವಯುದ್ಧದ ಹೀನಾಯ ಸೋಲು! ಎರಡೇ ಅಣುಬಾಂಬ್ ಸ್ಫೋಟ - ಜಪಾನ್ ನಿರ್ನಾಮವಾಗದಿದ್ದರೂ, ಜಪಾನೀಯತೆ ನಿರ್ಮೂಲವಾಗಿಹೋಗಿದೆ! ಕಿಂದರಿಜೋಗಿಯ ಪದ್ಯ ಮತ್ತೆ ನೆನಪಾಗಿ ಯಾಕೋ ಕಿವಿಯಲ್ಲಿ ಮೊರೆಯತೊಡಗಿತು:&lt;br /&gt;"ಅಯ್ಯೋ ಹೋಯಿತೇ ಆ ನಾಕ! ಅಯ್ಯೋ ಬಂದಿತೇ ಈ ಲೋಕ!...."&lt;br /&gt;&lt;br /&gt;(ಮುಂದಿನ ಬಾರಿ: ಕ್ಯೂಶೂನಲ್ಲಿ ಕನ್ನಡ!)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/29152559-116046078710738895?l=kannadaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaputa.blogspot.com/feeds/116046078710738895/comments/default' title='Post Comments'/><link rel='replies' type='text/html' href='http://www.blogger.com/comment.g?blogID=29152559&amp;postID=116046078710738895' title='0 Comments'/><link rel='edit' type='application/atom+xml' href='http://www.blogger.com/feeds/29152559/posts/default/116046078710738895'/><link rel='self' type='application/atom+xml' href='http://www.blogger.com/feeds/29152559/posts/default/116046078710738895'/><link rel='alternate' type='text/html' href='http://kannadaputa.blogspot.com/2006/10/blog-post.html' title='೮. ಹಳೆಯ ರಾಜ್ಯ ಇನ್ನಿಲ್ಲ!'/><author><name>Buddha</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-29152559.post-115891009567648300</id><published>2006-09-22T16:25:00.000+09:00</published><updated>2006-09-24T13:56:41.550+09:00</updated><category scheme='http://www.blogger.com/atom/ns#' term='ನನ್ನ ಜಪಾನ್ ಪ್ರವಾಸ'/><title type='text'>೭.ವೆಂಕಟನ ನಿರ್ಗಮನ.....?</title><content type='html'>&lt;div align="center"&gt;&lt;strong&gt;&lt;span style="color:#3333ff;"&gt;ನನ್ನ ಜಪಾನ್ ಪ್ರವಾಸ: ೭.ವೆಂಕಟನ ನಿರ್ಗಮನ.....?&lt;/span&gt;&lt;/strong&gt;&lt;/div&gt;&lt;br /&gt;&lt;br /&gt;"ಏನೋ ಇದು! ಎರಡೇ ದಿನ ನಾವಿಬ್ಬರೂ ಜೊತೆಯಲ್ಲಿದ್ದುದು!......" ನನಗೆ ಆಗಲೇ ಹಿಂದಿರುಗಿ ಹೋಗಬೇಕೆನಿಸಿಬಿಟ್ಟಿತ್ತು.&lt;br /&gt;"ಯಾಕೋ, ಏನಾಯ್ತೋ!?" ಎಂದೆ.&lt;br /&gt;&lt;br /&gt;"ಫೋ.ನಿನಲ್ಲಿ ಬೇಡ; ನೀನು ಬೇಗ ಬಾ, ನಾನು ಬಹುಶಃ ಮುಂದಿನ ಸೋಮವಾರ ಭಾರತಕ್ಕೆ ಹೊರಡುತ್ತೇನೆ" ಎಂದ!&lt;br /&gt;&lt;br /&gt;೬೦೦ ಕಿ.ಮೀ. ದೂರದಿಂದ 'ಬಾ' ಎಂದುಬಿಟ್ಟರೆ ಬರುವುದು ಹೇಗೆ? ನನಗೆ ತಳಮಳ ಶುರುವಾಯಿತು. ಸಾಲದ್ದಕ್ಕೆ ಕ್ಯೂಶೂಗೆ ಬರುವಾಗ ವೆಂಕಟನ ಕೈಚೀಲವೊಂದನ್ನು ಬೇರೆ ತೆಗೆದುಕೊಂಡು ಬಂದಿದ್ದೆ; ಈಗವನು ಹಿಂದಿರುಗುವುದಾದರೆ ಅದನ್ನು ನಾನು ಹಿಂದಿರುಗಿಸಲೇಬೇಕಿತ್ತು! ವಾರಾಂತ್ಯವೇನೋ ಹೋಗಬಹುದಿತ್ತಾದರೂ ಅಸಾಮಿ ಹೊರಡುವ ಮಾತೇ ಎತ್ತಿರಲಿಲ್ಲ; ಹೋಗಿಬರುವುದಕ್ಕೆ ಕೊಡುವ ಪ್ರಯಾಣದರವನ್ನೂ, ಒಂದು ದಿನದ ಉಚಿತ ವಸತಿ ಸೌಲಭ್ಯವನ್ನೂ ಬಳಸಿದರೆ ಅಲ್ಲೇ ತಂಗಿರಬಹುದಿತ್ತು. ಅಲ್ಲದೆ ಎರಡು ದಿನಕ್ಕೆ ಅಷ್ಟುದೂರ ಹೋಗಿ ಬರುವುದೂ ಸ್ವಲ್ಪ ಶ್ರಮದಾಯಕವೇ ಆಗಿದ್ದರಿಂದ ಅವನ ತರ್ಕದಲ್ಲಿ ತಪ್ಪಿರಲಿಲ್ಲ. ಈ ಬಾರಿ ಹೋಗದೆ ಅಲ್ಲೇ ಉಳಿದೆವು; ಆದರೆ ಮುಂದಿನ ವಾರ ವೆಂಕಟನನ್ನು ಕಡೆಯ ಬಾರಿ ಭೇಟಿಯಾಗಲಾದರೂ ನಾನು ಹೋಗಲೇ ಬೇಕಿತ್ತು. ನನ್ನ ಪುಣ್ಯಕ್ಕೆ, ಅಸಾಮಿ ಕೂಡ ಬರುವ ಭಾನುವಾರ ಯಾವುದೋ ಪರೀಕ್ಷೆಗಾಗಿ ಓಸಾಕಾಗೆ ಹೋಗಬೇಕಿತ್ತು! ಜೊತೆಗೆ ನಾನೂ ಹೋಗಬಹುದೆಂದು ನಿಟ್ಟುಸಿರಿಟ್ಟೆ. ಆದರೆ ಕೆಲಸ ನಿಧಾನಗತಿಯಲ್ಲಿದೆಯೆಂದು ಆ ವಾರಾಂತ್ಯವೂ ಕೆಲಸಮಾಡಬೇಕಾಗುತ್ತದೆಂದು ನಮ್ಮೊಡನೆ ಬಂದ ಇತರರು ಹೇಳತೊಡಗಿದಾಗ ಅಸಾಮಿಯೆಂದ:&lt;br /&gt;&lt;br /&gt;"ನಾನು ಭಾನುವಾರ ಪರೀಕ್ಷೆಗೆ ಹೋಗಲೇಬೇಕು; ಶನಿವಾರ ಓದಿಕೊಳ್ಳಬೇಕು......ಈ ವಾರಾಂತ್ಯ ನೀನು ಇಲ್ಲೇ ಇದ್ದು ಎಲ್ಲಾ ಸರಿಯಾಗಿ ನೋಡಿಕೋ; ನಾನು ಓಸಾಕಾಗೆ ಹೋಗಿ ಬರುತ್ತೇನೆ"&lt;br /&gt;&lt;br /&gt;ನನಗೆ ಅಳುವೋ! ಕೋಪವೋ! ಹೆದರಿಕೆಯೋ! ಏನಾಗುತ್ತಿದೆಯೆಂದೇ ತಿಳಿಯಲಿಲ್ಲ! ಸಣ್ಣನೆ ಬೆನ್ನಹುರಿಯಲ್ಲಿ ತಣ್ಣನೆ ಏನೋ ಹರಿದಂತಾಯಿತು! ವೆಂಕಟನನ್ನು ಎರಡೇ ದಿನ ನಾನು ನೋಡಿದ್ದು; ಅಲ್ಲಿಗೇ ಮುಗಿಯಿತೇ ನಮ್ಮ ಸಹವಾಸ? ದೇವರೇ ಏನಪ್ಪಾ ನನ್ನ ಸ್ಥಿತಿ ಎಂದು ಕಳವಳಗೊಂಡೆ. ಸೋಮವಾರ, ಮಂಗಳವಾರ, ಬುಧವಾರ...ಊಹ್ಞೂಂ...ಬೇರಾವ ಸುದ್ದಿಯೂ ಇಲ್ಲ; ಕೆಲಸ ಜೋರಾಗಿ ಮುಂದುವರೆದಿತ್ತು. ಗುರುವಾರವೂ ಬಂತು, ಬಹುಶಃ ನಾನು ಶನಿವಾರವೂ ಕೆಲಸಕ್ಕೆ ಬರುವಂತಾಗುತ್ತದೆ ಎಂದೆನಿಸತೊಡಗಿತ್ತು. ಅದೇನು ಆಯಿತೋ ಕಾಣೆ, ಗುರುವಾರ ಮಧ್ಯಾಹ್ನ ಯಂತ್ರ ಕೆಟ್ಟು ಕುಳಿತಿತು! ಇನ್ನಿಲ್ಲದಂತೆ ಒದ್ದಾಡಿ ಸರಿಪಡಿಸಲು ಯತ್ನಿಸಿದರು ಆ ಮಂದಿ! ಊಹ್ಞೂಂ! ಯಂತ್ರ ಅಲ್ಲಾಡಲೇ ಇಲ್ಲ; ಶುಕ್ರವಾರವೂ ಬಂತು; ಯಂತ್ರ ನಿದ್ದೆ ಬಿಟ್ಟೇಳಲಿಲ್ಲ! ಸರಿ ಓಸಾಕಾದಿಂದಲೋ, ಕ್ಯೋತೋದಿಂದಲೋ ತಜ್ಞರನ್ನು ಕರೆಸುತ್ತೇವೆ ಎಂದರು! ಅಸಾಮಿಯೆಂದ&lt;br /&gt;&lt;br /&gt;"ನೀನೂ ಗಂಟುಮೂಟೆ ಕಟ್ಟು; ಇನ್ನು ಸೋಮವಾರವೇ ಇದರ ರಿಪೇರಿ!"&lt;br /&gt;&lt;br /&gt;ಕುಣಿದಾಡುವಂತಾಯಿತು! ಜಪಾನಿನಲ್ಲಿ ಶುಕ್ರವಾರ ರಾತ್ರಿಯಾದರೆ ಸಾಕು, ಊರಿಗೆ ಊರೇ - ಅಲ್ಲಲ್ಲ - ದೇಶವೇ ಮಲಗಿಬಿಡುತ್ತದೆ! ಇನ್ನೆರಡು ದಿನ ವಿಶ್ರಾಂತಿಯ ನಂತರವೇ ಉಳಿದ ಚಟುವಟಿಕೆ! ಶನಿ-ಭಾನುವಾರಗಳಂದು ರೈಲಿಗೂ ವಿಶೇಷ ವೇಳಾಪಟ್ಟಿ! ನಾವು ಹೊರಡುವುದಂತೂ ಆಯಿತು ಗಟ್ಟಿ!&lt;br /&gt;&lt;p&gt;&lt;br /&gt;ಶುಕ್ರವಾರ ರಾತ್ರಿ ಶಿನ್‍ಕಾನ್‍ಸೆನ್ ಹತ್ತಿ ಓಸಾಕಾಗೆ ಬಂದಿಳಿದೆವು; ವೆಂಕಟ ರೈಲು ನಿಲ್ದಾಣದಲ್ಲಿ ಕಾಯುತ್ತಿದ್ದ; ನನ್ನನ್ನು ಕಂಡವನೇ,&lt;br /&gt;&lt;br /&gt;"ಶಾಸ್ತ್ರಿಗಳೇ, ನಿಮ್ಮಿಂದ ಒಂದು ಸಹಾಯ ಬೇಕಾಗಿದೆ; ಬೇಗ ಬನ್ನಿ"&lt;br /&gt;&lt;br /&gt;ಎನ್ನುತ್ತಾ ರೂಮಿಗೆ ಕರೆದೊಯ್ದ. ಊಟವಾಯಿತು; ಏನು ಸಮಾಚಾರವೆಂದು ವಿಚಾರಿಸಿದೆ. ಅಂಗೈ ಮುಂಚಾಚಿದವನೇ,&lt;br /&gt;&lt;br /&gt;"ನಾನೇನು ಹೇಳಲಿ, ನೀನು ಹೇಳಯ್ಯಾ ನನ್ನ ಭವಿಷ್ಯ ಏನೂಂತ....."&lt;br /&gt;&lt;br /&gt;"ಏ! ತಮಾಷೆ ಸಾಕು; ಏನಾಯ್ತು ಹೇಳೋ ಸರಿಯಾಗಿ" ಎಂದೆ.&lt;br /&gt;&lt;br /&gt;ಅವನು ಕಛೇರಿಯಲ್ಲಿ ಅವನ ಹಾಗೂ ಮೇಲಧಿಕಾರಿಯ ನಡುವಿನ ಘರ್ಷಣೆಯ ಕತೆಯನ್ನೆಲ್ಲಾ ಹೇಳಿದ; ಒಟ್ಟಿನಲ್ಲಿ ಭಾರತದ ಮೂಲ ಕಛೇರಿಗೇ ಇವನನ್ನು ಸಾಗಹಾಕುವುದೆಂದು ತೀರ್ಮಾನವಾಗಿತ್ತು. ನಾಳಿದ್ದು ಬೆಳಿಗ್ಗೆಯೇ ಪ್ರಯಾಣವೆಂದ. ಇನ್ನೂ ಕಛೇರಿಯ ಹಿಂದು-ಮುಂದು ತಿಳಿಯದ ನಾನೇನೂ ಹೇಳದಾದೆ!&lt;br /&gt;&lt;br /&gt;"ಅದಕ್ಕೇ ಕೇಳಿದ್ದು.. ಮುಂದೆ ನನ್ನ ಭವಿಷ್ಯ ಏನೆಂದು ಹೇಳಯ್ಯಾ...ಅಲ್ಲಿ ಇನ್ನೇನು ತರಲೆಗಳು ಕಾದಿದೆಯೋ.." ಕೈಚಾಚಿದ.&lt;br /&gt;&lt;br /&gt;ನಾನು ಹಸ್ತಸಾಮುದ್ರಿಕದಿಂದ ಇಂತಹ ಪರಿಸ್ಥಿತಿಯಲ್ಲಿ ಅವನಿಗೆ ಪರಿಪೂರ್ಣ ಉತ್ತರ ನೀಡುವುದು ಕಷ್ಟವಾದರೂ ನೋಡಿದೆ - ಅಂತಹ ತರಲೆ ಗೆರೆಗಳಾವುದೂ ಕಾಣಲಿಲ್ಲ! ಅಷ್ಟರಲ್ಲಿ ಬಂತು ಪ್ರಶ್ನೆ -&lt;br /&gt;&lt;br /&gt;"ನಾನು ಅಲ್ಲಿಗೆ ಹೋದರೂ, ಆಕೆಲಸ ಬಿಟ್ಟು ಬೇರೆ ಕಡೆ ಕೆಲಸ ಹುಡುಕೋಣವೆಂದಿದ್ದೇನೆ; ಏನೆನ್ನುತ್ತೀಯೆ?"&lt;br /&gt;&lt;br /&gt;ಅವನ ಅಂಗೈಯಲ್ಲಿ ಅಂಥ ಯಾವ ಕುರುಹೂ ಕಾಣಲಿಲ್ಲ; ನನಗೆ ಉತ್ತರವೂ ಹೊಳೆಯಲಿಲ್ಲ! ನಾನು ಉತ್ತರಿಸಬೇಕಿದ್ದುದು ಒಬ್ಬನ ಭವಿಷ್ಯ ನಿರ್ಧರಿಸುವ ಪ್ರಶ್ನೆಯಾದ್ದರಿಂದ ತಮಾಷೆಗೆ ಕೇಳಿದ ಸ್ನೇಹಿತರಿಗೆ ಹೇಳುವಂತೆ ಹಾರಿಕೆಯ ಉತ್ತರ ಕೊಡಲಾರದಾದೆ. ಏನನ್ನೋ ಯೋಚಿಸಿದವನೇ, "ಒಂದು ನಿಮಿಷ ಇರು" ಎಂದು ಪೆಟ್ಟಿಗೆಯಿಂದ ಪಂಚಾಂಗ ಹೊರತೆಗೆದೆ! ಯಾರು ನಂಬುವರೋ ಬಿಡುವರೋ, ಇಲ್ಲಿಯವರೆಗೂ ನನಗೆ ಮಾರ್ಗದರ್ಶನ ಮಾಡಿಕೊಂಡು ಬಂದ ಜ್ಯೋತಿಷಶಾಸ್ತ್ರಕ್ಕೆ, ನವಗ್ರಹಗಳಿಗೆ, ನನ್ನ ಆರಾಧ್ಯ ದೈವ ಮಹಾಗಣಪತಿಗೆ ನಮಸ್ಕರಿಸಿ, ಏಕಾಗ್ರತೆಯಿಂದ ಕುಳಿತು ವೆಂಕಟನನ್ನು ನೋಡಿ,&lt;br /&gt;&lt;br /&gt;"ಏನು ನಿನ್ನ ಪ್ರಶ್ನೆ?" ಎಂದೆ.&lt;br /&gt;&lt;br /&gt;"ನಾನು ಈಗಿನ ಕೆಲಸ ಬಿಡಲೋ ಅಥವಾ ಮುಂದುವರೆಯಲೋ? ಭವಿಷ್ಯದಲ್ಲಿ ಯಾವುದು ಒಳ್ಳೆಯದು?"&lt;br /&gt;&lt;br /&gt;ನಾನು ಪ್ರಶ್ನಕುಂಡಲಿ ಬರೆದು "ನಿನ್ನ ನಕ್ಷತ್ರವೇನು?" ಎಂದೆ.&lt;br /&gt;&lt;br /&gt;"ಸ್ವಾತಿ"&lt;br /&gt;&lt;br /&gt;ಕುಂಡಲಿ ಅಷ್ಟಮಶನಿಯನ್ನು ತೋರಿಸುತ್ತಿತ್ತು; ಇಂಥಹ ತರಲೆಗಳು ಈ ಸಮಯದಲ್ಲಿ ಸರ್ವೇ ಸಾಮಾನ್ಯ! ಸರಿ ಶನಿಯ ಸ್ಥಿತಿ ಉತ್ತಮವಾಗುವವರೆಗೂ ಕೆಲಸ ಬದಲಿಸದಿರುವುದೇ ಒಳ್ಳೆಯದು ಎಂದು ನಿರ್ಧರಿಸಿದೆ; ಇಲ್ಲದಿದ್ದರೆ ಕೆಲಸವೇ ಇಲ್ಲವಾಗುವ ಸಾಧ್ಯತೆಯೂ ತೋರಿತು.&lt;br /&gt;&lt;br /&gt;"ಜುಲೈ ೮ ನೇ ತಾರೀಖಿನವರೆಗೂ ಸುಮ್ಮನಿರು; ಕಛೇರಿ ಬಿಡುವುದಿದ್ದರೆ, ಆಮೇಲೆ ಯೋಚಿಸಿನೋಡು" ಎಂದೆ.&lt;br /&gt;&lt;br /&gt;"ಸರಿ, ಗುರುಗಳೇ!" ಎಂದ. ನಾನು ನಿಧಾನವಾಗಿ ಸಮಾಧಾನ ಹೇಳಿದೆ. ಬೇಗ ಬೇಗ ಗಂಟು ಮೂಟೆ ಕಟ್ಟಿದ; ಇಬ್ಬರೂ ಮಲಗಿದಾಗ ರಾತ್ರಿ ೨ ಗಂಟೆ!&lt;br /&gt;&lt;/p&gt;&lt;p&gt;&lt;br /&gt;&lt;img style="FLOAT: left; MARGIN: 0px 10px 10px 0px; CURSOR: hand" alt="" src="http://photos1.blogger.com/blogger/550/1446/320/displace.jpg" border="0" /&gt;&lt;br /&gt;&lt;/p&gt;&lt;p&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br /&gt;ಬೆಳಿಗ್ಗೆ ವೆಂಕಟ ಎದ್ದು ಅಡುಗೆ ಮಾಡಿದ; ರೂಮಿನಲ್ಲಿದ್ದ ಅಡುಗೆ ಸಲಕರಣೆ, ಪಾತ್ರೆ, ಸಾಂಬಾರು ಪದಾರ್ಥಗಳನ್ನೆಲ್ಲಾ ನನಗೇ ಬಿಟ್ಟ! ಇದ್ದಕ್ಕಿದ್ದಂತೆ ಮೌನ ಆವರಿಸಿತು.&lt;br /&gt;&lt;br /&gt;"ನಾನೊಬ್ಬ ಇಲ್ಲಿಂದ ವಾಪಸ್ ಹೋಗುವಂತಾಯ್ತಲ್ಲೋ!" ಎಂದ. ಪಾಪ! ಅವನಿಗೆ ಹೀಗೆ ಹಿಂದಿರುಗಲು ಇಷ್ಟವಿರಲಿಲ್ಲ!&lt;br /&gt;&lt;br /&gt;ನಾನೆಂದೆ "ಲೋ! ಸಂತೋಷಪಡು! ಅಮ್ಮನ ಕೈಯಡುಗೆ, ಮಸಾಲೆದೋಸೆ, ನಿನ್ನ ಪ್ರಿಯಾಹಾರ ಗೋಬಿ ಮಂಚೂರಿಯನ್ ಎಲ್ಲ ತಿನ್ನಬಹುದು ಅಂತ ಖುಷಿಪಡೋ! ಇಲ್ಲೇನಿದೆ - ಸೆರೆಮನೆ!"&lt;br /&gt;&lt;br /&gt;ನಕ್ಕ; ನಗುವಿರಲಿಲ್ಲ! ಸರಿ, ಭಾನುವಾರದವರೆಗೆ ಅವನೊಡನೆ ಕಾಲ ಕಳೆದೆ. ರಾತ್ರಿ ನಾನು ಕ್ಯೂಶೂದ್ವೀಪಕ್ಕೆ ಹೊರಡಬೇಕಿತ್ತು. ವೆಂಕಟ ಪಕ್ಕದ ರೂಮಿನ ಸಹೋದ್ಯೋಗಿಗೆ ಕೀಲಿಕೈ ಕೊಟ್ಟು ಹೋಗುತ್ತೇನೆಂದ. ಕಡೆಯ ಬಾರಿ ಧೈರ್ಯ ಹೇಳಿ, ಕೈಕುಲುಕಿದೆ.&lt;br /&gt;&lt;br /&gt;"ನಾಳೆ ಬೆಳಿಗ್ಗೆ ವಿಮಾನ ಹತ್ತುತ್ತೇನೆ; ಮತ್ತೆ ಭಾರತದಲ್ಲೇ ಏನೋ ನಮ್ಮ ಭೇಟಿ!"&lt;br /&gt;&lt;br /&gt;"ಆದರೆ, ನಮ್ಮ ಮನೆಗೆ ಹೋಗಿ ಬಾ"&lt;br /&gt;&lt;br /&gt;ತಲೆಯಾಡಿಸಿದ. ಗೋವರ್ಧನ ಬಂದವನೇ ಅವನ ಬೆನ್ನುತಟ್ಟಿದ. ವೆಂಕಟನಿಗೆ ಕೈಬೀಸಿ ಭಾರಹೃದಯದಿಂದ ಬೀಳ್ಕೊಂಡೆ ಅಲ್ಲ ಬೀಳ್ಕೊಟ್ಟೆ! ನಾನು ಶಿನ್‍ಓಸಾಕಾ &lt;strong&gt;ಎಕಿ&lt;/strong&gt;[=ನಿಲ್ದಾಣ] ತಲುಪಿದಾಗ ಅಸಾಮಿ ಸಿಕ್ಕಿದ. ಯಥಾಪ್ರಕಾರ 'ಹಿಕಾರಿ' ಹತ್ತಿ ಹೊರಟೆವು. ನನ್ನ ಮನದ ತುಂಬಾ ಭವಿಷ್ಯದ್ದೇ ಚಿಂತೆ ತುಂಬಿತ್ತು. ನನ್ನನ್ನೇನಾದರೂ ಹಿಂದಿರುಗಿ ಹೋಗೆಂದರೆ ಈಗಲೇ ಸಿದ್ಧ ಎಂದುಕೊಂಡೆ!&lt;br /&gt;&lt;/p&gt;&lt;p style="MARGIN-LEFT: 50px"&gt;&lt;br /&gt;&lt;span style="color:#3333ff;"&gt;ಜಪಾನೆಂಬುದು ತಾಂತ್ರಿಕ ಜೈಲು!&lt;br /&gt;ಜೈಲಿನೊಳಗೆ ವೇಗದ ರೈಲು!&lt;br /&gt;ರೈಲಿನೊಳಗೆ ಇವನೊಬ್ಬ ಐಲು!&lt;br /&gt;ಜೈಲು-ರೈಲು-ಐಲು-ಜೀವನವೆಲ್ಲಾ ಫೇ.ಲು!&lt;br /&gt;&lt;/span&gt;&lt;/p&gt;&lt;br /&gt;ಪೆದ್ದು ಪೆದ್ದಾಗಿ ನಾನೇ ಆಶುಕವಿತೆ ಬಡಬಡಿಸಿಕೊಂಡೆ. ಅಷ್ಟರಲ್ಲಿ ಅಸಾಮಿ&lt;br /&gt;&lt;br /&gt;"ಫೇಲಾಗಬಹುದು!" ಎಂದ.ನಾನು ಗಾಬರಿಯಾದೆ! ಇವನಿಗೆ ಕನ್ನಡ ಬರುತ್ತದೆಯೇ ಎಂದುಕೊಳ್ಳುತ್ತಿರುವಂತೆಯೇ,&lt;br /&gt;&lt;br /&gt;"ನಾನಿವತ್ತು ಬರೆದ ಪರೀಕ್ಷೆಯಲ್ಲಿ ಫೇ.ಲಾಗಬಹುದು" ಎಂದ.&lt;br /&gt;&lt;br /&gt;ಸದ್ಯ, ಇಷ್ಟೇನೇ! ನಾನೆಲ್ಲೋ ಆಶುಕವಿತೆ ಇವನಿಗೆಲ್ಲಿ ಅರ್ಥವಾಯಿತೋ ಎಂದುಕೊಂಡಿದ್ದೆ!&lt;br /&gt;&lt;br /&gt;"ಜಾ.ನ್ನೆನ್ ದೇಸ್‍ನೇ" [= ಅಯ್ಯೋ! ಹೌದೇ, ಪಾಪ!] ಎಂದು ಕಿತ್ತಲೆರಸಕ್ಕೆ ಕೈಹಾಕಿದೆ. ನನ್ನ ಮನದಾಳದ ಮೂಲೆಯಲ್ಲಿ ವೆಂಕಟನ ನಿರ್ಗಮನ ಅಚ್ಚೊತ್ತಿದ್ದರೂ, ಮತ್ತೊಮ್ಮೆ ಅವನು ಬರುವನೆಂದು ಏಕೋ ಎನಿಸತೊಡಗಿತ್ತು. ಎಂದಿರಬಹುದು......?&lt;br /&gt;&lt;br /&gt;* * * * *&lt;br /&gt;(ಮುಂದಿನ ಬಾರಿ: ಹಳೆಯ ರಾಜ್ಯ ಇನ್ನಿಲ್ಲ...)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/29152559-115891009567648300?l=kannadaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaputa.blogspot.com/feeds/115891009567648300/comments/default' title='Post Comments'/><link rel='replies' type='text/html' href='http://www.blogger.com/comment.g?blogID=29152559&amp;postID=115891009567648300' title='0 Comments'/><link rel='edit' type='application/atom+xml' href='http://www.blogger.com/feeds/29152559/posts/default/115891009567648300'/><link rel='self' type='application/atom+xml' href='http://www.blogger.com/feeds/29152559/posts/default/115891009567648300'/><link rel='alternate' type='text/html' href='http://kannadaputa.blogspot.com/2006/09/blog-post_22.html' title='೭.ವೆಂಕಟನ ನಿರ್ಗಮನ.....?'/><author><name>Buddha</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-29152559.post-115729940149853508</id><published>2006-09-04T00:55:00.000+09:00</published><updated>2006-09-20T23:24:14.076+09:00</updated><category scheme='http://www.blogger.com/atom/ns#' term='ನನ್ನ ಜಪಾನ್ ಪ್ರವಾಸ'/><title type='text'>೬. ಹೀಗೊಬ್ಬ ಬಾಬಾ ಭಕ್ತ!</title><content type='html'>&lt;div align="center"&gt;&lt;span style="color:#000099;"&gt;&lt;strong&gt;ನನ್ನ ಜಪಾನ್ ಪ್ರವಾಸ : ೬. ಹೀಗೊಬ್ಬ ಬಾಬಾ ಭಕ್ತ!&lt;/strong&gt;&lt;/span&gt;&lt;/div&gt;&lt;br /&gt;&lt;br /&gt;ಕ್ಯೂಶೂನಲ್ಲಿ ಇದ್ದಷ್ಟು ದಿನವೂ ನಾನು ಅಡುಗೆ ಮಾಡಿಕೊಳ್ಳಲು ಸಾಧ್ಯವೇ ಇರಲಿಲ್ಲ. ಕೆಲಸದ ಸ್ಥಳದ ಕಾರ್ಖಾನೆಯಲ್ಲಿ ಸಿಗುತ್ತಿದ್ದುದು ಮಾಂಸಾಹಾರವಾದ್ದರಿಂದ ನಾನು ತಿನ್ನಲಾಗುತ್ತಿರಲಿಲ್ಲ. ಬೆಳಿಗ್ಗೆ ಕಾರ್ಖಾನೆಯೊಳಗೆ ಹೋಗುವ ಮೊದಲೇ ಮಧ್ಯಾಹ್ನದ ಊಟ ಕೊಳ್ಳಬೇಕಿತ್ತು; ಏಕೆಂದರೆ ಒಮ್ಮೆ ಒಳಹೊಕ್ಕರೆ ಹತ್ತಿರದ ಕೊಂಬಿನಿಗೆ ಹಿಂದಿರುಗಲು ೩೦ ನಿಮಿಷ - ಅದೂ ಕಾರಿನಲ್ಲಿ! ಹತ್ತಿರದಲ್ಲೆಲ್ಲೂ ಯಾವ ಅಂಗಡಿಯೂ ಇರಲಿಲ್ಲ! ಇನ್ನು ರಾತ್ರಿಯೂಟಕ್ಕೆ ಹಿಂದಿರುಗುವಾಗ ಕೊಳ್ಳುತ್ತಿದ್ದ ಅನ್ನ, ಮೊಸರು ಗೊತ್ತಿದ್ದದ್ದೇ. ಮಧ್ಯೇ ಮಧ್ಯೇ ಪಾನೀಯಂ ಸಮರ್ಪಯಾಮಿ ಎಂದು ಕಿತ್ತಲೆ ರಸ! ಆದರೆ ಒಂದು ವಿಚಾರ ಮಾತ್ರ ಗಮನ ಸೆಳೆದಿತ್ತು: ನನ್ನ ಜೊತೆ ಅಸಾಮಿಯೂ ಬೆಳಿಗ್ಗೆ ಹಾಗೂ ರಾತ್ರಿಯ ಊಟ ಕೊಳ್ಳುತ್ತಿದ್ದ! ಮಧ್ಯಾಹ್ನ ಅವನು ಕಾರ್ಖಾನೆಯ ಊಟ ತಿನ್ನುವುದಿಲ್ಲವೇನೋ ಎಂದುಕೊಂಡೆ; ಆದರೆ ರಾತ್ರಿಯೂ ನನ್ನಂತೆ ಅನ್ನ ಕೊಳ್ಳುತ್ತಿದ್ದ! ಒಂದು ದಿನವೂ ಮಾಂಸಾಹಾರ ಕೊಂಡಿರಲಿಲ್ಲ! ಒಮ್ಮೆ &lt;strong&gt;ಹಿರು-ಗೊಹಾನ್&lt;/strong&gt;[ಮಧ್ಯಾಹ್ನದ ಊಟ]ದ ಸಮಯದಲ್ಲಿ ಕೇಳಿದೆ:&lt;br /&gt;&lt;br /&gt;"ತಾವು ಇಲ್ಲಿನ ಮಾಂಸಾಹಾರ ತಿನ್ನುವುದಿಲ್ಲವೇ? ನನ್ನಂತೆ ಬನ್ನು ಕೊಂಡಿದ್ದೀರಲ್ಲಾ?"&lt;br /&gt;&lt;br /&gt;ಅಸಾಮಿಯೆಂದ "ಇಲ್ಲ ಕಣಯ್ಯಾ! ನಾನು ಸಸ್ಯಾಹಾರಿ; ಆದರೆ ನಿನ್ನಷ್ಟು ನಿಯಮ-ನಿಷ್ಠೆಯಿಲ್ಲ. ಒಮ್ಮೊಮ್ಮೆ ಮೀನು, ಮೊಟ್ಟೆ ತಿನ್ನುತ್ತೇನೆ; ದನದ ಮಾಂಸ ಮಾತ್ರ ತಿನ್ನುವುದಿಲ್ಲ ಅಷ್ಟೇ!"&lt;br /&gt;&lt;br /&gt;ನಾನು ಅಚ್ಚರಿಯಿಂದ "ಜಪಾನೀಯರು ಮೊದಲಿಂದಲೂ ಬೌದ್ಧಧರ್ಮಿಗಳೆಂದೇ ನಾವೆಲ್ಲರೂ ಓದಿ ತಿಳಿದುಕೊಂಡಿದ್ದು; ಬೌದ್ಧರು ಸಸ್ಯಾಹಾರಿಗಳಲ್ಲವೇ? ಈಗ ಮೀನು, ಮಾಂಸಗಳನ್ನು ಎಲ್ಲರೂ ತಿನ್ನುತ್ತಿರುವುದು ಆಶ್ಚರ್ಯ" ಎಂದೆ.&lt;br /&gt;&lt;br /&gt;"ಬೌದ್ಧಧರ್ಮವೇನೋ ಇದೆ; ಯುದ್ಧದ ನಂತರ ಬಹಳ ವ್ಯತ್ಯಾಸಗಳಾದವು. ಈಗೆಲ್ಲ ಎಲ್ಲವನ್ನೂ ತಿನ್ನುತ್ತಾರೆ."&lt;br /&gt;&lt;br /&gt;"ಮತ್ತೆ, ತಾವು ಸಸ್ಯಾಹಾರಿ ಎಂದಿರಿ...."&lt;br /&gt;&lt;br /&gt;"ಇಲ್ಲಯ್ಯಾ! ಜಪಾನೀಯರಿಗೆ ಸಸ್ಯಾಹಾರವೆಂದರೆ 'ದನದ ಮಾಂಸ ಇಲ್ಲದ' ಎಂದರ್ಥ. ನಾನು ಭಾರತಕ್ಕೆ ಬಂದು ಸಾಯಿಬಾಬಾ ಭಕ್ತನಾದ ಮೇಲೆ ಮಾಂಸಾಹಾರ ಬಿಟ್ಟೆ " ಎಂದ!&lt;br /&gt;&lt;br /&gt;"ನೀವು ಭಾರತಕ್ಕೆ ಬಂದಿದ್ದಿರೇ? ಯಾವಾಗ? ಎಲ್ಲಿ?" ಎಂದೆ ಅಚ್ಚರಿಯಿಂದ!&lt;br /&gt;&lt;br /&gt;"ನಿನ್ನ ಬೆಂಗಳೂರಿನ ವೈಟ್‍ಫೀಲ್ಡ್, ಆಂಧ್ರದ ಪುಟ್ಟಪರ್ತಿ... ಹೀಗೆಯೇ.." ಎಂದ.&lt;br /&gt;&lt;br /&gt;ಓಹೋ! ಸರಿ ಸರಿ! ಇವನು ಸತ್ಯಸಾಯಿಬಾಬಾ ಭಕ್ತನೋ! ಎಂದುಕೊಳ್ಳುತ್ತಿದ್ದಂತೆ, ಅವನು ಬಾಬಾರಿಂದ ಪಡೆದ ಉಂಗುರವೊಂದನ್ನು ತೋರಿಸಿ, ಸದಾ ಧರಿಸಿಕೊಂಡಿರುತ್ತೇನೆಂದ! ನಾನು ನನ್ನ ಕಿಸೆಯಲ್ಲಿದ್ದ ಶಿರಡಿ ಸಾಯಿಬಾಬಾರ ಭಾವಚಿತ್ರ ತೋರಿಸಿದೆ. ಅವನಿಗೆ ಅಚ್ಚರಿ!&lt;br /&gt;"ಇವರು ನಿಜವಾದ ಹಳೆಯ ಸಾಯಿಬಾಬಾ ಅಲ್ಲವೇ? ನೀನು ಅವರ ಭಕ್ತನೋ?" ಎಂದ.&lt;br /&gt;&lt;br /&gt;"ಹೌದು ಸ್ವಾಮಿ; ನನ್ನ ಮನೆಯವರೆಲ್ಲ ಶಿರಡಿ ಬಾಬಾ ಭಕ್ತರು; ನನ್ನ ಅಜ್ಜ ದೂರದ ಊರೊಂದರಲ್ಲಿ ಸಾಯಿಬಾಬಾ ಮಂದಿರದಲ್ಲಿ ಅರ್ಚಕರಾಗಿದ್ದರು; ಬಾಬಾ ಶಾಸ್ತ್ರಿಗಳು ಎಂದೇ ಹೆಸರಾಗಿದ್ದವರು" ಎಂದೆ.&lt;br /&gt;&lt;br /&gt;&lt;br /&gt;&lt;img style="FLOAT: right; MARGIN: 0px 10px 10px 0px; CURSOR: hand" alt="" src="http://photos1.blogger.com/blogger/550/1446/320/sai2222.png" border="0" /&gt;&lt;br /&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br /&gt;ಅಂದಿನಿಂದ ಪ್ರತಿ ಮಧ್ಯಾಹ್ನ ಭಾರತ-ಜಪಾನಿನ ಆಧ್ಯಾತ್ಮಿಕ ವಿಚಾರ ವಿನಿಮಯ ಶುರುವಾಯಿತು. ಅವನು ನಾನೆಣಿಸಿದ್ದಕ್ಕಿಂತ ಚೆನ್ನಾಗಿಯೇ ತಿಳಿದವನಾಗಿದ್ದ. ಈ ಮೊದಲು ಪುಟ್ಟಪರ್ತಿ ಬಾಬಾರ ಸಂದೇಶಗಳನ್ನು ಭಾಷಾಂತರಮಾಡುತ್ತಿದ್ದನಂತೆ; &lt;strong&gt;SSOJ&lt;/strong&gt;[ಸತ್ಯ ಸಾಯಿ ಆರ್ಗನೈಜೇಷನ್ ಜಪಾನ್] ಸಮೂಹದ ಪತ್ರಿಕೆಯ ಸಂಪಾದಕನೂ ಆಗಿದ್ದನಂತೆ. ನಾನಿಲ್ಲಿ ಒಬ್ಬೊಂಟಿಯಲ್ಲ ಎಂಬ ಧೈರ್ಯ ಬಂದುಬಿಟ್ಟಿತು. ಒಮ್ಮೆ ಹೀಗೆಯೇ ಬೌದ್ಧಧರ್ಮದ ಬಗ್ಗೆ ಚರ್ಚೆ ನಡೆದಿದ್ದಾಗ ಮಂತ್ರ-ತಂತ್ರಗಳ ಬಗ್ಗೆ ಮಾತು ಹರಿಯಿತು. ಅವನಾಗ ಸಂಸ್ಕೃತದಿಂದ ಚೀನೀ - ನಂತರ ಜಪಾನೀ ಭಾಷೆಗೆ ಬಂದ ಬೌದ್ಧ ಮಂತ್ರವನ್ನು ತೋರಿಸಿದ! ನನಗೆ ಸಂಸ್ಕೃತಭಾಷೆ ಅರ್ಥವಾಗುತ್ತಿದ್ದರೂ, ಅವನು ತೋರಿದ ಮಂತ್ರ ಕೇವಲ ಶಬ್ದಮಾತ್ರದಿಂದ ಅರ್ಥವಾಗುತ್ತಿರಲಿಲ್ಲ!&lt;br /&gt;&lt;br /&gt;"ಹನ್ಯಹರಮಿತ ಶಿಂಗ್ಯೋ????? ಇದು ಸಂಸ್ಕೃತವಲ್ಲ!" ಎಂದೆ.&lt;br /&gt;&lt;br /&gt;"ಗೊತ್ತಯ್ಯಾ! '&lt;strong&gt;ಹನ್ಯ&lt;/strong&gt;' ಎಂಬುದು '&lt;strong&gt;ಜ್ಞಾನ&lt;/strong&gt;' ಎಂಬುದರ ಅಪಭ್ರಂಶ.... ಹೀಗೆಯೇ ಮಿಕ್ಕವು; ನನಗೆ ಸಂಸ್ಕೃತ ಬಾರದು; ನೀನು ಪ್ರಯತ್ನಿಸು" ಎಂದ!&lt;br /&gt;&lt;br /&gt;ನನಗೆ ಅಚ್ಚರಿಯಾಗಿ ಕಣ್ಣರಳಿಸಿ ನೋಡಿದೆ! "ಭಲಾ! ಇವನು ನನಗೆ ಒಳ್ಳೆಯ ಮಿತ್ರ!" ಎಂದುಕೊಂಡೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಆ ಮಂತ್ರದ ಒಳಾರ್ಥ ಇರಲಿ, ತಲೆಬರಹವಾದ 'ಹನ್ಯಹರಮಿತಶಿಂಗ್ಯೋ' ಕೂಡ ಏನೆಂದು ತಿಳಿಯದೆ, ಕೈಚೆಲ್ಲಿದೆ. (ಆದರೆ ಅದರ ಬಗ್ಗೆ ನನಗೆ ಕುತೂಹಲ ಬೆಳೆಯುತ್ತಲೇ ಹೋಗಿ, ಮುಂದೊಮ್ಮೆ ಜಪಾನೀ ಹಾಗೂ ಸಂಸ್ಕೃತವನ್ನು ಬೆಸೆಯುವ ಮಹತ್ತರ ಕೆಲಸಕ್ಕೆ ನನ್ನ ಸಹಾಯವೂ ಬೇಕಾಗುವಂತಾಗುತ್ತದೆಂದು ನನಗೇನು ಗೊತ್ತಿತ್ತು!? '&lt;strong&gt;ಹನ್ಯಹರಮಿತಶಿಂಗ್ಯೋ&lt;/strong&gt;' ವೇ ಬೌದ್ಧಧರ್ಮದ ಮಹಾನ್ ಸೂತ್ರವಾದ '&lt;strong&gt;ಪ್ರಜ್ಞಾಪಾರಮಿತಾಹೃದಯಸೂತ್ರ&lt;/strong&gt;'ವೆಂದು ತಿಳಿಯಲು ಬಹಳ ಸಮಯವೇ ಬೇಕಾಯಿತು; ಇರಲಿ ಅದರ ಬಗ್ಗೆ ಇನ್ನೊಮ್ಮೆ ಬರೆಯುತ್ತೇನೆ.)&lt;br /&gt;&lt;br /&gt;ಜಪಾನೀ ಭಾಷೆಯ ಒಂದು ವೈಶಿಷ್ಟ್ಯವೆಂದರೆ &lt;strong&gt;ಕಾಂಜಿ&lt;/strong&gt;[ಚೀನೀ ಅಕ್ಷರ]ಗಳ ಬಳಕೆ. ಆದರೆ ಗೊತ್ತಿಲ್ಲದವರಿಗೆ ಅದು ಹೇಗೇಗೋ ಗೀಚಿದ ಚಿತ್ರಗಳಂತೆ ಕಾಣುವುದರಲ್ಲಿ ಸಂದೇಹವಿಲ್ಲ; ನಾನು ಕಲಿತಿದ್ದದ್ದು ಸ್ವಲ್ಪ ಮಾತ್ರ. ರಾತ್ರಿಯೂ, ಹಗಲೂ ಅಂಗಡಿಯಲ್ಲಿ ತಿನ್ನಲೇನಾದರೂ ಕೊಳ್ಳುವಾಗ ಅಸಾಮಿಯೇ ಅವುಗಳ ಹಣೆಪಟ್ಟಿಯಲ್ಲಿನ ಕಾಂಜಿಗಳನ್ನು ತೋರಿಸುತ್ತಾ,&lt;br /&gt;&lt;br /&gt;"ನೋಡು, ನೆನಪಿಟ್ಟುಕೋ, ಇದು ಮೊಟ್ಟೆ, ಇದು ಮೀನು, ಇದು ಹಂದಿ, ಇದು ಮೂಲಂಗಿ, ಇದು ಗಜ್ಜರಿಯ ಅಕ್ಷರ.." ಎಂದೆಲ್ಲಾ ಹೇಳಿಕೊಡುತ್ತಿದ್ದ.&lt;br /&gt;&lt;br /&gt;ನಿಜವಾಗಿ ನಾನು ಆ ಮಾರ್ಗದರ್ಶನಕ್ಕೆ ಹೃದಯಪೂರ್ವಕ ಧನ್ಯವಾದ ಹೇಳಿದೆ. ಆದರೆ ಒಂದು ತೊಂದರೆಯಿತ್ತು; ನಾನು ವಿದೇಶೀಯನೆಂಬುದನ್ನು ಮರೆತು, ಚಕ್ಕನೆ ಓಸಾಕಾದ ಭಾಷೆಯಲ್ಲಿ ಬಡಬಡನೆ ಹೇಳಿಬಿಡುತ್ತಿದ್ದ! ನನಗೆ ಸಾಕು-ಸಾಕಾಯಿತು! ರಾತ್ರಿ ಕೊಂಬಿನಿಗೆ ಹೋದಾಗಲೆಲ್ಲ ಆ ಅಂಗಡಿಯವಳು "ಎರಡು ಅನ್ನದ ಡಬ್ಬಿ ತಾನೇ" ಎನ್ನುತ್ತಾ ಸಿದ್ಧವಾಗುತ್ತಿದ್ದಳು; ನಾವು ನಗುತ್ತಿದ್ದೆವು. ರಾತ್ರಿಯೂಟದ ನಂತರ ಪಕ್ಕದ ಕೋಣೆಯಲ್ಲೇ ಇದ್ದ ನನಗೆ ಅವನೇ ಅವನ &lt;strong&gt;ನೋತೊಪಸೊಕೊನ್&lt;/strong&gt;[&lt;em&gt;ನೋಟ್‍ಬುಕ್ ಪರ್ಸೊನಲ್ ಕಂಪ್ಯೂಟರ್&lt;/em&gt; ನ ಸಂಕ್ಷೇಪ] ಅನ್ನು ಕೊಟ್ಟು ಬೇಕಾದರೆ, ಮನೆಯವರ ಜೊತೆಗೆ ಹರಟೆನ್ನುತ್ತಿದ್ದ; ನನಗಾದ ಸಂತಸ ಅಷ್ಟಿಷ್ಟಲ್ಲ!&lt;br /&gt;&lt;br /&gt;ಕೆಲಸದಲ್ಲಿ ಏನಾದರೂ ಆಂಗ್ಲಪದಗಳು ಕಂಡರೆ ಓಡಿ ಬಂದು ಅರ್ಥವನ್ನು ಕೇಳುತ್ತಿದ್ದ! ನಾನವನಿಗೆ ನಿಧಾನವಾಗಿ, ಬರುತ್ತಿದ್ದ ಜಪಾನೀ ಭಾಷೆಯಲ್ಲಿ ವಿವರಿಸುತ್ತಿದ್ದೆ; ಅವನು ಅಷ್ಟಕ್ಕೆ ಬಿಡದೆ ಇನ್ನೂ ಏನೇನೋ ಕೇಳುತ್ತಿದ್ದ! ಏನಾದರೂ ಹಾರಿಕೆಯ ಉತ್ತರ ನೀಡಿದರೆ ಗದರಿಸುತ್ತಿದ್ದ! ಆ ಕಾರ್ಖಾನೆಯಲ್ಲಿನ ನಮ್ಮ ಕೆಲಸ ಬಹಳ ಶ್ರಮದಾಯಕವಾಗಿದ್ದು, ಸ್ವಲ್ಪ ಕಷ್ಟವೇ ಆಗಿತ್ತು. ನಮ್ಮ ಜೊತೆಗೆ ಬಂದವರು ಏಕೋ ತಡವಾಗಿಯೇ ಕೆಲಸ ಮುಗಿಸುತ್ತಿದ್ದರು. ಸಂಜೆ ೬ ಗಂಟೆಯ ನಂತರ &lt;strong&gt;ಜಾಂಗ್ಯೋ&lt;/strong&gt;[ಓವರ್ ಟೈಮ್] ದುಡ್ಡು ಸಿಗುತ್ತದೆ ಎಂದೇನೋ ಎಂದು ನಾನೇ ಗೊಣಗಿಕೊಂಡೆ. ಒಮ್ಮೊಮ್ಮೆ ಅಸಾಮಿ ನಿದ್ದೆ ಹೊಡೆಯುತ್ತಿದ್ದ; ನಾನು ಆಗಾಗ್ಗೆ ತಂತ್ರಾಂಶದ ಸರಿಪಡಿಕೆ ಮಾಡುವುದನ್ನು ಬಿಟ್ಟರೆ, ಮಿಕ್ಕಂತೆ ಕೆಲಸ ಬೇಜಾರಾಗತೊಡಗಿತ್ತು.&lt;br /&gt;&lt;br /&gt;ಶನಿವಾರ ಬಂತು! ಖುಷಿಯಾದೆ ಎರಡು ದಿನ ರಜೆಯೆಂದು! ಮನೆಗೆ ದೂರವಾಣಿ ಕರೆ ಮಾಡಿದೆ. ಅಸಾಮಿ ಬಾಡಿಗೆಗೆ ಬಟ್ಟೆ ಒಗೆಯುವ, ಒಣಗಿಸುವ ಯಂತ್ರವನ್ನು ತೋರಿಸಿದ; ಒಂದು ವಾರದ ಬಟ್ಟೆಗಳನ್ನೆಲ್ಲಾ ಒಗೆಯಹಾಕಿದೆ. ಏಕೋ ಇನ್ನೂ ಬೇಸರ ಕಳೆಯಲಿಲ್ಲ; ವೆಂಕಟನಿಗೊಂದು ಕರೆ ಮಾಡಿದೆ. ಅಲ್ಲಿ ಏಕೋ ವೆಂಕಟನ ದನಿಯಲ್ಲಿ ಕಸುವಿರಲಿಲ್ಲ!&lt;br /&gt;&lt;br /&gt;"ಏನಾಯ್ತೋ!?" ಎಂದೆ.&lt;br /&gt;&lt;br /&gt;"ಯಾಕೋ, ಸ್ವಲ್ಪ ಮೇಲಧಿಕಾರಿಯೊಂದಿಗೆ ಸರಿಬರುತ್ತಿಲ್ಲ; ಕೆಲಸದಲ್ಲೆಲ್ಲಾ ತರಲೆಯಾಗುತ್ತಿದೆ; ನಾನು ವಾಪಸ್ ಹೋಗಬಹುದು" ಎಂದ!&lt;br /&gt;&lt;br /&gt;"ಹ್ಞಾಂ?????" ನಾನು ಅವಾಕ್ಕಾದೆ!&lt;br /&gt;&lt;br /&gt;* * * *&lt;br /&gt;&lt;br /&gt;(ಮುಂದಿನ ಬಾರಿ: ವೆಂಕಟನ ನಿರ್ಗಮನ...?)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/29152559-115729940149853508?l=kannadaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaputa.blogspot.com/feeds/115729940149853508/comments/default' title='Post Comments'/><link rel='replies' type='text/html' href='http://www.blogger.com/comment.g?blogID=29152559&amp;postID=115729940149853508' title='3 Comments'/><link rel='edit' type='application/atom+xml' href='http://www.blogger.com/feeds/29152559/posts/default/115729940149853508'/><link rel='self' type='application/atom+xml' href='http://www.blogger.com/feeds/29152559/posts/default/115729940149853508'/><link rel='alternate' type='text/html' href='http://kannadaputa.blogspot.com/2006/09/blog-post.html' title='೬. ಹೀಗೊಬ್ಬ ಬಾಬಾ ಭಕ್ತ!'/><author><name>Buddha</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>3</thr:total></entry><entry><id>tag:blogger.com,1999:blog-29152559.post-115626382770903994</id><published>2006-08-23T01:17:00.000+09:00</published><updated>2006-08-23T09:45:06.616+09:00</updated><category scheme='http://www.blogger.com/atom/ns#' term='ನನ್ನ ಜಪಾನ್ ಪ್ರವಾಸ'/><title type='text'>೫.ಕ್ಯೂಶೂದ್ವೀಪ</title><content type='html'>&lt;center&gt;&lt;b&gt;&lt;span style="color:#660000;"&gt;ನನ್ನ ಜಪಾನ್ ಪ್ರವಾಸ : ೫. ಕ್ಯೂಶೂದ್ವೀಪ&lt;/span&gt;&lt;/b&gt;&lt;/center&gt;&lt;br /&gt;&lt;br /&gt;"ಅಯ್ಯಯ್ಯಪ್ಪಾ! ದಿನಕ್ಕೆ ೮೦೦೦ ಯೆನ್!..ಅಲ್ಲಲ್ಲ ಒಂದು ರಾತ್ರಿಗೆ ಎಂಟು ಸಾವಿರ ಯೆನ್! ಹೇಗಿರುತ್ತೋ ಈ ಕೋಣೆ!" ಎನ್ನುತ್ತಾ ಬಾಗಿಲ ಕಿಂಡಿಯಲ್ಲಿ ಹಾಳೆಯನ್ನು ಗೀಚಿ ಬಾಗಿಲು ತೆರೆದೆವನೇ ಅವಾಕ್ಕಾದೆ! ನಾನು ತೂರಿಕೊಂಡು ಹೋಗಿ ಮಲಗುವಷ್ಟೇ ಜಾಗ! ಒಂದು ಹಾಸಿಗೆ, ಮೇಜು, ಕುರ್ಚಿ, ಕಪಾಟು, ಬಚ್ಚಲು-ಶೌಚದ ಮನೆ ಅಲ್ಲೇ ಎಲ್ಲಾ! ಅಲ್ಲದೆ, ಒಂದು ನೀರು ಕುದಿಸುವ ಯಂತ್ರ, ಕೇಶಶೋಷಕ - ಕೂದಲೊಣಗಿಸುವ ಯಂತ್ರ, ಮಂಚಕ್ಕೆ ಹೊಂದಿಕೊಂಡ ದೂರವಾಣಿ, ದೀಪ, ಮೊಳಗು ಗಡಿಯಾರ ಎಲ್ಲಾ ಇದ್ದವು! ಮೇಜಿನ ಕೆಳಗೆ ಶೀತಲ ಪೆಟ್ಟಿಗೆಯೂ ಇತ್ತು! ಸ್ವಾಮೀ ಪಂಚತಾರಾ ವೈಭವಕ್ಕೇನೂ ಕಡಿಮೆಯಿರಲಿಲ್ಲ; ಕಡಿಮೆಯಿದ್ದದ್ದು ಜಾಗ ಮಾತ್ರ! ಆಯಾಸವಾಗಿತ್ತು; ಮಲಗಿಬಿಟ್ಟೆ. ಎದ್ದಾಗ ಬೆಳಿಗ್ಗೆ ೭:೦೦ ಗಂಟೆ! ಓಡಿದೆ ಬಚ್ಚಲಿಗೆ - ನಿತ್ಯಕರ್ಮ ಮುಗಿಸಿ ೭:೧೫ ಕ್ಕೆ ದಡಬಡನೆ ಹೊರಬಿದ್ದೆ. ಆಗಲೇ ಅಸಾಮಿ, ಮುರುಗನ್ ತಿಂಡಿ ಮುಗಿಸಿದ್ದರು. ನಾನೊಂದು ಬನ್ ತಿಂದೆ - ಅಲ್ಲ ತುರುಕಿಕೊಂಡೆ; ಕಿತ್ತಲೆರಸ ಕುಡಿದೆ; ಅವರಿಬ್ಬರೂ ಮುಂದೆ ಹೆಜ್ಜೆ ಹಾಕಿಯೇ ಬಿಟ್ಟರು - ನಾನೂ ಓಡಿ ಸೇರಿಕೊಂಡೆ! ೭:೩೦ ರ ಗಂಟೆ ಢಣ್ಣೆಂದಿತು. ನನಗೋ ಹಿಂದಿನ ದಿನ ವೀಸಾಗೆ, ನಗರಕಛೇರಿಗೆ ಓಡಾಡಿದ್ದರಿಂದಲೋ, ನನ್ನ ಹೊಸ ಪಾದರಕ್ಷೆಯ ಮಹಿಮೆಯೋ, ಕಾಲು ನೋಯುತ್ತಿತ್ತು; ಕಾಲ್ಬೆರಳು ಬೊಬ್ಬೆ ಬಂದಿತ್ತು! ಹೊಟೆಲಿನಿಂದ ೧೦ ನಿಮಿಷ ಮತ್ತೆ ನಡಿಗೆ! ಯಾರಿಗೂ ಬೇಡ ನನ್ನ ಅವಸ್ಥೆ ಎನಿಸಿತ್ತು! ಈ ಮಧ್ಯೆ ಮಧ್ಯಾಹ್ನದ ಊಟಕ್ಕೆಂದು ಬನ್ನು, ಹಣ್ಣಿನರಸ ಕೊಂಡೆವು. ೭:೪೫ ಆಗಿತ್ತು; ಅಲ್ಲಿಂದ ೭ ನಿಮಿಷ ರೈಲಿನಲ್ಲಿ ಪ್ರಯಾಣಿಸಿ 'ತೊಬಾತಾ'ಗೆ ಬಂದಿಳಿದಾಗ ಕಾರೊಂದು ಸಿದ್ಧವಾಗಿತ್ತು. ಅಲ್ಲಿ ಇನ್ನು ಮೂವರು ಸಿದ್ಧವಿದ್ದರು - ಎಲ್ಲರ ಪರಿಚಯವಾಯಿತು; ನಂತರ ಕಾರಿನಲ್ಲಿ ಅರ್ಧಗಂಟೆ ಪ್ರಯಾಣ! ಯಾವುದೋ ಕಾರ್ಖಾನೆಗೆ ಬಂದು ನಿಂತೆವು; ನಾನೆಲ್ಲಿದ್ದೇನೆ? ಸುತ್ತಲೂ ಇರುವುದೇನು? ಏನೂ ತಿಳಿಯುತ್ತಿರಲಿಲ್ಲ! ನನ್ನ ಮುಂದಿದ್ದುದು ಒಂದೇ - "ಇಲ್ಲಿ ನನ್ನ ಕೆಲಸವೇನು?" ಎಂಬ ಪ್ರಶ್ನೆ.&lt;br /&gt;&lt;br /&gt;&lt;a href="http://photos1.blogger.com/blogger/550/1446/1600/kyushu.gif"&gt;&lt;img style="FLOAT: left; MARGIN: 0px 10px 10px 0px; CURSOR: hand" alt="" src="http://photos1.blogger.com/blogger/550/1446/320/kyushu.png" border="0" /&gt;&lt;/a&gt;&lt;br /&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br&gt;&lt;br /&gt;ಸರಿ, ಕಾರ್ಖಾನೆಯವರ ಪರಿಚಯ ಮುಗಿಯಿತು. ೯ ರಿಂದ ೧೧ ಗಂಟೆಯವರೆಗೆ ಸುರಕ್ಷಾ ಮಾಹಿತಿಯ ಪಾಠ! ನನಗೋ, ಹಿಂದಿನ ದಿನವೆಲ್ಲ ನಿದ್ದೆಯಿಲ್ಲ; ಬಲವಂತವಾಗಿ ಬೆಳಿಗ್ಗೆ ಎದ್ದುಬಂದಿದ್ದೆ ನೋಡಿ, ಪಾಠದ ಮಧ್ಯೆ ನಿದ್ದೆ ಶುರುವಾಯಿತು! ನನ್ನ ಪ್ರಾರಬ್ಧ ಕರ್ಮಕ್ಕೆ ನಾವು ಮೂವರೂ ಮೊದಲ ಬೆಂಚಿನಲ್ಲೇ ಕೂರಬೇಕೆ? ನನಗೋ ಹಿಂದಿನಿಂದಲೂ ಪಾಠದ ಮಧ್ಯೆ ನಿದ್ದೆ ಮಾಡಿ ಅಭ್ಯಾಸವೇ ಇಲ್ಲ; ಈಗ ನಿದ್ದೆ ಬರುತ್ತಿದೆ! ಥತ್ತೇರಿ ಎಂದು ಬಯ್ದುಕೊಂಡು ಹೇಗೋ ಎದ್ದಿದ್ದಂತೆ, ನಿದ್ದೆಯಿಲ್ಲದಂತೆ ನಟಿಸಿದೆ. ಪಾಠ ಮುಗಿಯಿತೆಂದು ಎದ್ದರೆ, ಈ ಹಾಳು ಅಸಾಮಿ "ಅರ್ಥವಾಯಿತೇನು?" ಎಂದು ಜೋರಾಗಿ ಕೇಳಬೇಕೆ? ನಾನು ಎಚ್ಚರಿಕೆಯಿಂದ "ಸ್ವಲ್ಪ ಮಾತ್ರ" ಎಂದೆ! ಮೂವರೂ ನಕ್ಕು ಹೊರಟೆವು. ಮುರುಗನ್ ನನಗಿಂತ ಮುಂಚೆ ಬಂದವನಾದ್ದರಿಂದ ಅವನಿಗೆ ಅರ್ಥವಾಗಿರಬೇಕು. ಸರಿ, ಇನ್ನು ಪ್ರಾಜೆಕ್ಟಿನ ಕೆಲಸ - ಉಕ್ಕಿನ ಕರ್ಷಕಶಕ್ತಿ[Tensile Strength]ಯನ್ನು ಅಳೆವ ಬೃಹತ್ ಯಂತ್ರಗಳನ್ನು ಸಂಪೂರ್ಣವಾಗಿ ಗಣಕೀಕರಿಸುವ ತಂತ್ರಾಂಶದ ಜವಾಬ್ದಾರಿ ನಮ್ಮದಾಗಿತ್ತು. ಮುರುಗನ್ ಇದ್ದುದಕ್ಕೆ ಅಂದಿನ ಕೆಲಸ ಹೇಗೋ ಅರ್ಥವಾಯಿತು. ಸಾಯಂಕಾಲ ಮುರುಗನ್ ನನ್ನ ಬಳಿ ಬಂದವನೇ,&lt;br /&gt;&lt;br /&gt;"ಸರಿ, ನಾನಿನ್ನು ಬರುತ್ತೇನೆ; ಇನ್ನು ನಿನ್ನ ಜವಾಬ್ದಾರಿ, ನಾನು ರಾತ್ರಿ ಓಸಾಕಾಗೆ ಹೊರಡುತ್ತೇನೆ" ಎಂದ!&lt;br /&gt;&lt;br /&gt;ನಾನು ಹೌಹಾರಿದೆ! ಬೆಚ್ಚಿಬಿದ್ದೆ! ಅವನು ಒಂದು ದಿನದ ಮಟ್ಟಿಗೆ ಬಂದವನಂತೆ! ಅಸಾಮಿ, ನಾನು ಉಳಿಯುವುದೆಂದಾಯಿತು! ನಾನು ತಲೆಯಾಡಿಸದೆ ವಿಧಿಯೇ ಇರಲಿಲ್ಲ! 'ಮುಂದೈತೆ ಮಾರಿಹಬ್ಬ' ಎಂಬ ನಾಣ್ಣುಡಿ ನೆನಪಾಯಿತು. ಮುರುಗನ್ ಹೊರಟೇ ಬಿಟ್ಟ!&lt;br /&gt;&lt;br /&gt;&lt;br /&gt;&lt;br /&gt;ಕಾರ್ಖಾನೆಯ ಗಡಿಯಾರ ಢಣ್ಣೆಂದು ಎಲ್ಲ ಒಬ್ಬೊಬ್ಬರಾಗಿ ಮನೆಗೆ ಹೊರಟರು. ರಾತ್ರಿಯಾಯಿತು; ನಮ್ಮ ಕೆಲಸ ಮುಗಿಯಲಿಲ್ಲ. ಅಥವಾ ಸರಿಯಾಗಿ ಹೇಳಬೇಕೆಂದರೆ ನಮ್ಮ ತಂತ್ರಾಂಶವನ್ನು ಯಂತ್ರಕ್ಕೆ ಊಡಿ, ಪರೀಕ್ಷಿಸುವ ಜವಾಬ್ದಾರಿ ಹೊತ್ತವರು ಕೆಲಸವನ್ನು ಮುಗಿಸಲಿಲ್ಲ ಎಂದರೇ ಚೆನ್ನಾಗಿರುತ್ತದೆ. ಅಸಾಮಿಯೂ ಗೊಣಗಿಕೊಂಡು ಸುಮ್ಮನಾದ. ನಾನು ಕೇಳದಿದ್ದರೂ ಅವನೇ ಆಕಳಿಸುತ್ತಾ,&lt;br /&gt;&lt;br /&gt;"ರಾತ್ರಿ ಹತ್ತಾಯಿತು; ಬಹುಶಃ ಹನ್ನೊಂದಕ್ಕೆ ಮುಗಿಯಬಹುದು" ಎಂದ!&lt;br /&gt;&lt;br /&gt;ನಮ್ಮನ್ನು ಕಾರಿನಲ್ಲಿ ಕರೆತಂದ ಮಂದಿ ಅವರೇ ಆದ್ದರಿಂದ ವಿಧಿಯಿಲ್ಲದೇ ಅವರಿಗೆ ಕಾಯಲೇ ಬೇಕಿತ್ತು. ಅವರಿಲ್ಲದೆ ನಾವು ಹೊರಗೆ ಹೋಗಲು ಟ್ಯಾಕ್ಸಿ ಕರೆಯಬೇಕು; ಹೊಟೆಲಿಗೆ ಹೋಗಲು ೭೦೦೦ ಯೆನ್ ಖರ್ಚಾಗುತ್ತದೆ. ಅವರೇ ಕರೆದೊಯ್ದರೆ ಖರ್ಚಿಲ್ಲ! ಅಸಾಮಿ ಕಾದು ನಿಂತ; ನಾನೂ ನೋಡುತ್ತಿದ್ದೆ. ಅಂತೂ ರಾತ್ರಿ ಹನ್ನೊಂದಕ್ಕೆ ಹೊರಟು ಹೊಟೆಲಿನ ಕೋಣೆಗೆ ಬಂದು ಬಿದ್ದಾಗ ೧೧:೩೦ . ಜಪಾನಿನ ಕೆಲಸದ ಶೈಲಿ ನನಗೆ ಅಂದೇ ಅರಿವಾಗಿತ್ತು! ದಾರಿಯಲ್ಲಿ ಊಟಕ್ಕಾಗಿ ಅನ್ನ, ಮೊಸರು ಕೊಂಡೆ. ಅಸಾಮಿ ಹೇಳಿ ತೋರಿಸಿದ ಪಾಪ!&lt;br /&gt;&lt;br /&gt;"ಇಲ್ಲಿ ಸಸ್ಯಾಹಾರ ಅಂದರೆ ಮೀನು, ಮೊಟ್ಟೆ ಎಲ್ಲಾ ಉಂಟು - ನಿನಗದು ಆಗದು; ನಡೆ ಅನ್ನ ಸಿಗುವ ಜಾಗ ತೋರಿಸುತ್ತೇನೆ" ಎಂದಿದ್ದ!&lt;br /&gt;&lt;br /&gt;ನನಗೆ ಬಹಳ ಸಂತೋಷವಾಯಿತು! ೨೪ ಗಂಟೆಯೂ ವಹಿವಾಟು ನಡೆಸುವ &lt;b&gt;ಕೊಂಬಿನಿ&lt;/b&gt;[ಕೊಂಬಿನಿಯೆಂತೊ = Convenient Store ನ ಅಪಭ್ರಂಶ]ಗೆ ಹೋಗಿ, ಸಿದ್ಧವಾಗಿದ್ದ ಬಿಸಿಬಿಸಿ ಅನ್ನದ ಡಬ್ಬಿ(೨೦೦ ಯೆನ್) ಕೊಂಡಿದ್ದೆವು. ರಾತ್ರಿಯೂಟಕ್ಕೆ ಸಾಕಿತ್ತು - ಸರಿ ಇನ್ನು ಇಲ್ಲಿರುವವರೆಗೂ ಇದೇ ಅಂಗಡಿಯೇ ಗತಿ ಎಂದುಕೊಂಡೆ. ಇದೇನಿದು ಹೊಟೆಲಿನಲ್ಲಿ ಊಟ ಇರುವುದಿಲ್ಲವೇ ಎನ್ನಬೇಡಿ! ಖಂಡಿತ ಇರುವುದಿಲ್ಲ! ಏಕೆಂದರೆ ಅದು ಕೇವಲ ತಂಗುದಾಣ - ಬೆಳಿಗ್ಗೆ ತಿಂಡಿ ಮಾತ್ರ ಉಚಿತ!&lt;br /&gt;&lt;br /&gt;&lt;br /&gt;&lt;br /&gt;ನನಗೆ ಇವೆಲ್ಲ ಮೊದಲೇ ತಿಳಿಸಲ್ಪಟ್ಟಿದ್ದರಿಂದ ಎಂಟಿಆರ್ ಹುಣಿಸೇತೊಕ್ಕು, ಉಪ್ಪಿನಕಾಯಿ, ಚಟ್ನಿಪುಡಿ ತೆಗೆದುಕೊಂಡು ಹೋಗಿದ್ದೆ. ಅನ್ನದೊಡನೆ ಬೆರೆಸಿ ತಿಂದೆ - ಖಾರ ಖಾರವಾಗಿತ್ತು! ಬಲ್ಗೇರಿಯ ದೇಶದ ಮೊಸರು ಅಂದರೆ &lt;b&gt;ಯೊಗುರುತೊ&lt;/b&gt;[Yogurt] ಕಲಸಿ ತಿಂದೆ; ಆಹಾ! ತೇಗು ಬಂತು! ಜೊತೆಗೆ ಇಲ್ಲಿನ ಜೀವನ ಕಂಡು ನಗುವೂ ಬಂತು! ರಾತ್ರಿ ೧೨ ಆದ್ದರಿಂದ ನಿದ್ದೆಯೂ ಬಂತು. ಕನಸಿನಲ್ಲಿ ಹಾಡೊಂದು ಕೇಳಿಬಂತು:&lt;br /&gt;&lt;br /&gt;&lt;br /&gt;ಭಾರತ ಹೋಯ್ತು ಜಪಾನ್ ಬಂತು ಡುಂ ಡುಂ ಡುಂ!&lt;br /&gt;ಅಮ್ಮನ ಕೈಯಡುಗೆ ಹೋಯ್ತು ಡುಂ ಡುಂ ಡುಂ!&lt;br /&gt;ಅಂಟಂಟಾಗಿರೋ ಅನ್ನ ಬಂತು ಡುಂ ಡುಂ ಡುಂ!&lt;br /&gt;ನಿದ್ದೆ ಹೋಯ್ತು, ಶಾಂತಿ ಹೋಯ್ತು ಡುಂ ಡುಂ ಡುಂ!&lt;br /&gt;ದುಡ್ಡೂ ಬಂತು, ಅಳುವೂ ಬಂತು .... ಡುಂ........&lt;br /&gt;&lt;br /&gt;&lt;br /&gt;ಮುಸುಕೆಳೆದು ಸದ್ದಿಲ್ಲದೆ ಮಲಗಿದೆ. ಕಾಲಿನ ಬೊಬ್ಬೆ ನೋಯುತ್ತಿತ್ತು; ಬೆಳಿಗ್ಗೆ ಮತ್ತೆ ಬೇಗ ಏಳಬೇಕಿತ್ತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/29152559-115626382770903994?l=kannadaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaputa.blogspot.com/feeds/115626382770903994/comments/default' title='Post Comments'/><link rel='replies' type='text/html' href='http://www.blogger.com/comment.g?blogID=29152559&amp;postID=115626382770903994' title='0 Comments'/><link rel='edit' type='application/atom+xml' href='http://www.blogger.com/feeds/29152559/posts/default/115626382770903994'/><link rel='self' type='application/atom+xml' href='http://www.blogger.com/feeds/29152559/posts/default/115626382770903994'/><link rel='alternate' type='text/html' href='http://kannadaputa.blogspot.com/2006/08/blog-post.html' title='೫.ಕ್ಯೂಶೂದ್ವೀಪ'/><author><name>Buddha</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-29152559.post-115382511480344069</id><published>2006-07-25T19:54:00.000+09:00</published><updated>2006-07-28T13:28:21.516+09:00</updated><category scheme='http://www.blogger.com/atom/ns#' term='ನನ್ನ ಜಪಾನ್ ಪ್ರವಾಸ'/><title type='text'>೪.ಶರವೇಗದ ಹಳಿಬಂಡಿಯನ್ನೇರಿ......</title><content type='html'>&lt;center&gt;&lt;b&gt;ನನ್ನ ಜಪಾನ್ ಪ್ರವಾಸ: ೪.ಶರವೇಗದ ಹಳಿಬಂಡಿಯನ್ನೇರಿ......&lt;/b&gt;&lt;/center&gt;&lt;p&gt;&lt;br /&gt;ಮಾರನೆಯದಿನ ಬಹಳ ಕೆಲಸವಿತ್ತು; ಬೆಳಿಗ್ಗೆ ನಗರಕಛೇರಿ, ವೀಸಾ ಕಛೇರಿಗಳಿಗೆ ಹೋಗಬೇಕಿತ್ತು. ಹಿಂದಿನ ದಿನ ಆಫೀಸ್‍ಲೇಡಿ(OL) ನಿಶಿಮುರ ಎಂಬುವಳು ನನಗೆ ನಕ್ಷೆಯೊಂದನ್ನು ಕೊಟ್ಟು ಹೋಗಿ ಬಾ ಎಂದಿದ್ದಳು! ಪುಣ್ಯಕ್ಕೆ ವೆಂಕಟನೂ ಜೊತೆಗೆ ಬಂದು ಸಹಾಯ ಮಾಡಿದ. ದಾರಿಯುದ್ದಕ್ಕೂ ಕಛೇರಿಯದೇ ಮಾತು - ಹಾಗಿರು, ಹೀಗೆ ಮಾಡು ಎಂದೆಲ್ಲ ವೆಂಕಟ ಹೇಳುತ್ತಿದ್ದ; ನಾನು ತಲೆಯಾಡಿಸಿದೆ. ಆ ಮಧ್ಯಾಹ್ನವೇ ಕ್ಯೂಶೂಗೆ ಪ್ರಯಾಣ! ಆ ದಿನವೇ ವೀಸಾದ ಮುಂದುವರಿಕೆಗೆ ಅರ್ಜಿಹಾಕಬೇಕಿತ್ತು; ಆಗ ಜೊತೆಗೆ ಬಂದವಳು ನಿಶಿಮುರ. ನಾನು ಅವಳೊಡನೆ ಮಾತನಾಡುತ್ತಾ ಕೇಳಿದೆ:&lt;/p&gt;&lt;p&gt;"ವೀಸಾ ವಿಸ್ತರಣೆಗೆ ಈಗ ಅರ್ಜಿ ಹಾಕಿದರೆ ಎಷ್ಟು ದಿನ ಬೇಕಾಗಬಹುದು?"&lt;/p&gt;&lt;p&gt;"ದಿನ? ಹಹಹಾ" ಆಕೆ ನಕ್ಕಳು "೧೫ ನಿಮಿಷಗಳಲ್ಲಿ ಸಿದ್ಧ"&lt;/p&gt;&lt;p&gt;ನಾನು ಅಚ್ಚರಿಯಿಂದ ಹೌಹಾರಿದೆ! ನಾನು ಪಾಸ್‍ಪೋರ್ಟ್ ಕಛೇರಿಗೆ ಅಲೆದದ್ದು ನೆನಪಾಯಿತು; ನಂತರ ಪೋಲೀಸಪ್ಪ ಹಲ್ಕಿರಿದದ್ದೂ ನೆನಪಾಯಿತು. ನಮ್ಮ ದೇಶದಲ್ಲಿ ಈ ವೇಗದಲ್ಲಿ ಕೆಲಸವಾಗಲು ಇನ್ನೂ ಒಂದು ಜನ್ಮ ಬೇಕೆನಿಸಿತು; ಅಷ್ಟರಲ್ಲಿ ವಿಸ್ತರಿತ ಹೊಸ ವೀಸಾ ಮುದ್ರೆಯ ಪಾಸ್‍ಪೋರ್ಟ್ ಕೈಲಿತ್ತು! ದಾರಿಯುದ್ದಕ್ಕೂ ಚೆನ್ನಾಗಿ ಮಾತನಾಡಿಸಿದಳು ನಿಶಿಮುರ.&lt;/p&gt;&lt;p&gt;"ಲೋ, ಇಲ್ಲಿ ನಿನ್ನ ಜಪಾನೀ ಭಾಷೆಯ ಪರೀಕ್ಷೆ ಎಲ್ಲೆಲ್ಲೂ ನಡೆಯುತ್ತಿರುತ್ತದೆ; ಸ್ವಲ್ಪ ಚೆನ್ನಾಗಿ ಮಾತನಾಡು" ಎಂದ ವೆಂಕಟನ ನೆನಪಾಯಿತು. ತಕ್ಷಣ ಜಪಾನೀ ಭಾಷೆಯ ಒಳ್ಳೊಳ್ಳೆ ಪದಗಳನ್ನು ಹುಡುಕಿ ಹುಡುಕಿ ಅವಳೊಡನೆ ಮಾತನಾಡಿದೆ! ಖುಷಿಯಾಗಿಬಿಟ್ಟಳು ಹುಡುಗಿ(?); ಹಿಂದೆಯೇ ಬಂತು ಪ್ರಶ್ನೆ:&lt;/p&gt;&lt;p&gt;"ಬೆನಕ ಸಾನ್ ವಾ ಕೆಕ್ಕೊನ್ ಶಿತೆ ಇಮಾಸ್ಕಾ?"[ಬೆನಕ ಅವರು(ಅಂದ್ರೆ ನಾನು) ಮದುವೆಯಾಗಿದ್ದಾರೆಯೇ?]&lt;/p&gt;&lt;p&gt;ನಾನು ಕಕ್ಕಾಬಿಕ್ಕಿ! ಎಲಾ ಇವಳ! ಎರಡು ಮಾತಾಡಿದ್ದಕ್ಕೇ ಇಷ್ಟು ಮುಂದುವರೆದಳಲ್ಲಾ ಇವಳು ಎಂದುಕೊಂಡು &lt;/p&gt;&lt;p&gt;"ಈಯೆ(ಇಲ್ಲ)" ಎಂದವನೇ,"ನಿಶಿಮುರ ಸಾನ್ ವಾ ದೊಕುಶಿನ್ ದೇಸ್ಕಾ?"[ನಿಶಿಮುರ ಅವರು(ಅಂದ್ರೆ ನೀನು) ಇನ್ನೂ ಒಂಟಿಯೇನು?] ಎಂದುಬಿಟ್ಟೆ. &lt;/p&gt;&lt;p&gt;ಈಗವಳು ಕಕ್ಕಾಬಿಕ್ಕಿ! ನಾನು ಒಳಗೊಳಗೇ ನಕ್ಕೆ. ಗಾಬರಿಯಾದ ಅವಳು ಸ್ವಲ್ಪ ಜೋರಾಗಿಯೇ "ಮಿತೆಕುದಸಾಯ್"[ನೋಡಿ] ಎನ್ನುತ್ತಾ ಎಡಗಡೆಯ ಬೆರಳಲ್ಲಿದ್ದ ಉಂಗುರ ತೋರಿಸಿದಳು. ಓಹೋ! ಮದುವೆಯುಂಗುರ ಇರಬೇಕೆಂದುಕೊಂಡೆ.&lt;/p&gt;&lt;p&gt;"ಓಹ್! ನಿಮಗೆ ಮದುವೆಯಾಗಿದೆಯೇ? ನಿಮ್ಮನ್ನು ನೋಡಿದರೆ ಹಾಗೆ ಕಾಣುವುದೇ ಇಲ್ಲವಲ್ಲ; ಇನ್ನೂ ಈಗೀಗ ಪದವೀಧರೆಯಾದಂತಿದೆ" ಎಂದೆ! &lt;/p&gt;&lt;p&gt;ಹುಡುಗಿಗೆ - ಅಲ್ಲ - ಆ ಆಂಟಿಗೆ ಸಂತೋಷವುಕ್ಕಿ ಸ್ವರ್ಗ ಮೂರೇ ಗೇಣು! ಅಂದರೆ ಇಲ್ಲಿನ ಯುವತಿಯರ ತುಂಡು ಲಂಗಕ್ಕಿಂತ ಒಂದು ಗೇಣು ಹೆಚ್ಚು ಅಷ್ಟೇ! ಖುಷಿಯಾಗಿಬಿಟ್ಟಳು! ಸರಿ, ಇದು ಬಿತ್ತು ಬುಟ್ಟಿಗೆ ಎಂದುಕೊಂಡೆ! &lt;/p&gt;&lt;p&gt;&lt;/p&gt;&lt;p&gt;&lt;br /&gt;ಸರಿ, ಕಛೇರಿಯಲ್ಲಿ ಆ ಅಸಾಮಿಯೆಂಬ ಆಸಾಮಿ ಕಾಯುತ್ತಿತ್ತು! ನಾನು ಹೋದೊಡನೆ ಎರಡು ಚೀಟಿ ನನ್ನ ಕೈಲಿಟ್ಟು ಜೋಪಾನವಾಗಿಟ್ಟುಕೋ ಎಂದ. ಆ ಚೀಟಿ ನನ್ನ ಇಲ್ಲಿನ ಜೀವನದಲ್ಲೇ ಅತ್ಯಂತ ದುಬಾರಿ ರೈಲಿನ ಟಿಕೆಟ್! ಜಪಾನೀಯರೂ ಕೊಳ್ಳಲು ಹಿಂಜರಿಯುವಷ್ಟು ದುಬಾರಿ ಶರವೇಗದ ರೈಲಿನ ಟಿಕೆಟ್! ಎಷ್ಟೋ ಶಾಲಾಮಕ್ಕಳ ಕನಸು ಈ ಹಳಿಬಂಡಿ! ಅದೇ &lt;b&gt;'ಶಿನ್‍ಕಾನ್‍ಸೆನ್'&lt;/b&gt; - ಗಂಟೆಗೆ ೨೫೦ ಕಿಮೀ ವೇಗದಲ್ಲಿ ಹಾರುವ ವಿದ್ಯುತ್ ಹಳಿಬಂಡಿ ಅಥವಾ ಆಂಗ್ಲದ ಬುಲೆಟ್ ಟ್ರೈನ್! ಈ ರೈಲು ಓಸಾಕಾ ಹಾಗೂ ತೋಕ್ಯೋ ನಡುವಿನ ಸುಮಾರು ೬೦೦ ಕಿಮೀ ದೂರವನ್ನು ಕೇವಲ ೨:೩೦ ರಿಂದ ೩:೦೦ ಗಂಟೆಗಳಲ್ಲಿ ಕ್ರಮಿಸುತ್ತದೆ! ನಾನು ಸಿಕ್ಕಾಪಟ್ಟೆ ಖುಷಿಯಾಗಿಬಿಟ್ಟೆ! ಕೇವಲ ಸುದ್ದಿಯಲ್ಲಿ ಕೇಳಿದ್ದ ರೈಲನ್ನು ಹತ್ತುವುದೆಂದರೆ.... ಯಾರಿಗುಂಟು ಈ ಭಾಗ್ಯ! ...ಅದೂ ಬಂದಿಳಿದ ಮೂರನೇ ದಿನವೇ! ಟಿಕೆಟ್ ಬೆಲೆ ಕೇವಲ ೧೪ ಸಾವಿರ ಯೆನ್ - ಒಂದು ಬಾರಿಗೆ! ನಾನು, ಅಸಾಮಿ, ಮುರುಗನ್ ಹೋಗಿ ಬರುವುದೆಂದು ನಿಶ್ಚಿತವಾದ್ದರಿಂದ, ಒಟ್ಟಿಗೆ ಆರು ಟಿಕೆಟ್ ಕೊಂಡದ್ದಕ್ಕೆ ಟಿಕೆಟ್ಟೊಂದಕ್ಕೆ ೧ ಸಾವಿರ ರಿಯಾಯಿತಿ! ನನಗೀಗ ಭಯವಾಯಿತು; ಟಿಕೆಟ್ಟಿಗೇ ಸುಮಾರು ೮೦ ಸಾವಿರ ಯೆನ್ ಖರ್ಚುಮಾಡಿ ಕಛೇರಿ ನಮ್ಮನ್ನು ಕಳಿಸುತ್ತಿರುವುದು ಇನ್ನೆಂಥ ಜಾಗಕ್ಕೋ! ಮೈ ನಡುಕ ಬಂತು! ನನಗೆ ಜಪಾನೀ ಭಾಷೆ ಸ್ವಲ್ಪ; ಗಣಕದ ತಂತ್ರಾಂಶ ಸ್ವಲ್ಪ ಗೊತ್ತಿತ್ತು ಅಷ್ಟೇ! ಅಲ್ಲಿ ಹೋಗಿ ನಾನಿನ್ನೇನು ಸಂಕಷ್ಟಕ್ಕೆ ಸಿಲುಕುವೆನೋ ಎಂದು ಚಿಂತೆಯಾಯಿತು. ಸಾಯಂಕಾಲ ೪:೩೦ಕ್ಕೆ &lt;b&gt;ಶುಚ್ಚೋ&lt;/b&gt;[ವ್ಯಾವಹಾರಿಕ ಯಾತ್ರೆ] ಶುರುವಾಯಿತು; ಮೂವರೂ ಶಿನ್-ಓಸಾಕಾ ನಿಲ್ದಾಣಕ್ಕೆ ಬಂದು ಶರವೇಗದ ರೈಲಿಗಾಗಿ ಕಾದು ನಿಂತೆವು. ಅಬ್ಬಾ..ಅಬ್ಬಾ..ಅದೇನು ರೈಲು ನಿಲ್ದಾಣವೋ ವಿಮಾನ ನಿಲ್ದಾಣವೋ! ನಿಬ್ಬೆರಗಾದೆ! &lt;/p&gt;&lt;br /&gt;&lt;br /&gt;&lt;a href="http://photos1.blogger.com/blogger/550/1446/1600/Shinkansen.jpg"&gt;&lt;img style="FLOAT: right; MARGIN: 0px 0px 10px 10px; CURSOR: hand" alt="" src="http://photos1.blogger.com/blogger/550/1446/320/Shinkansen.jpg" border="0" /&gt;&lt;/a&gt;&lt;br /&gt;&lt;br /&gt;&lt;span style="color:#3333ff;"&gt;&lt;em&gt;(&lt;b&gt;ಶಿನ್‍ಕಾನ್‍ಸೆನ್&lt;/b&gt; - ಗಂಟೆಗೆ ೨೫೦ ಕಿಮೀ ವೇಗದಲ್ಲಿ ಹಾರುವ ವಿದ್ಯುತ್ ಹಳಿಬಂಡಿ ಅಥವಾ ಆಂಗ್ಲದ ಬುಲೆಟ್ ಟ್ರೈನ್!)&lt;/em&gt;&lt;br /&gt;&lt;/span&gt;&lt;p&gt;&lt;br /&gt;ವೇಗದ ರೈಲುನಿಲ್ದಾಣ ಮೂರನೇ ಮಹಡಿಯಲ್ಲಿ! ಸಾಧಾರಣ ರೈಲಿನ ನಿಲ್ದಾಣ ಎರಡನೇ ಮಹಡಿಯಲ್ಲಿ! ಒಂದನೇ ಮಹಡಿಯಲ್ಲಿ ಬಸ್ಸು ನಿಲ್ದಾಣ ಹಾಗೂ ರೈಲು ಟಿಕೆಟ್ ಮಾರಾಟ ಯಂತ್ರಗಳ ಸಾಲು; ಜೊತೆಗೆ ಮಾಹಿತಿ ಕೇಂದ್ರ, ಯಾನಾಧಿಕ ದರದ ಲೆಕ್ಕಾಚಾರ ಯಂತ್ರ! ಕೆಳ ಅಂತಸ್ತಿನಲ್ಲಿ ಭೂತಲಗಾಮಿ - &lt;b&gt;'ಚಿಕತೆತ್ಸು'&lt;/b&gt; ಸುರಂಗರೈಲು ನಿಲ್ದಾಣ! ಅಷ್ಟೂ ಅಂತಸ್ತುಗಳಲ್ಲಿ ಊಟೋಪಚಾರದ ಆಹಾರ ಕೇಂದ್ರಗಳು, ಬಟ್ಟೆ-ಬರೆ ಮಾರಾಟಕೇಂದ್ರಗಳು, ಭವ್ಯ ಮಾರುಕಟ್ಟೆಯ ಮಳಿಗೆಗಳು (Shopping Complex)! ನಾನು ಕೆಲಸದ ಚಿಂತೆಯಲ್ಲಿ ಎರಡು ದಿನ ಏನನ್ನೂ ಸರಿಯಾಗಿ ನೋಡಿರಲಿಲ್ಲ; ಈಗ ನೋಡಿದೆ! ಅಬ್ಬಾ ಜಪಾನೇ! ಅಷ್ಟರಲ್ಲಿ ಬಂತು ಶರವೇಗದ ಹಳಿಬಂಡಿ - &lt;b&gt;ಹಿಕಾರಿ&lt;/b&gt;[=ಬೆಳಕಿನ ಕಿರಣ] ಎಂಬ ಶಿನ್‍ಕಾನ್‍ಸೆನ್. ಇದು ಎರಡನೇ ದರ್ಜೆಯಂತೆ! ಇದಕ್ಕಿಂತ ವೇಗದ &lt;b&gt;ನೊಜೊಮಿ&lt;/b&gt;[=ಆಶಯ] ಇನ್ನೂ ದುಬಾರಿಯಂತೆ! ಮೂರನೇ ದರ್ಜೆಯ &lt;b&gt;ಕೊದಾಮ&lt;/b&gt;[=ಮಾರ್ದನಿ] ಸ್ವಲ್ಪ ನಿಧಾನ ಅಂದರೆ ಗಂಟೆಗೆ ೨೦೦ ಕಿಮೀ. ಅದೂ ಕೂಡ ಇಲ್ಲಿನ ಎಷ್ಟೋ ಜನರ ಕನಸಂತೆ! ಹೀಗಿರುವಾಗ ನಾನು 'ಹಿಕಾರಿ' ಹತ್ತಿದೆ! &lt;/p&gt;&lt;p&gt;&lt;/p&gt;&lt;p&gt;&lt;br /&gt;ಅಸಾಮಿ ಹೇಳುತ್ತಿದ್ದಂತೆ ನಾನು ತಲೆಯಾಡಿಸುತ್ತಾ ಶಿನ್‍ಕಾನ್‍ಸೆನ್ ಬಗ್ಗೆ ತಿಳಿದುಕೊಳ್ಳಲಾರಂಭಿಸಿದೆ. ಸಂಜೆ ೬:೦೦ ಗಂಟೆಗೆ ಹೊರಟ &lt;b&gt;ಹಿಕಾರಿ&lt;/b&gt; ಸುಮಾರು ೬೦೦ ಕಿಮೀ. ದೂರದಲ್ಲಿರುವ ಕ್ಯೂಶೂ ದ್ವೀಪದ &lt;b&gt;ಕೊಕುರಾ&lt;/b&gt; ನಿಲ್ದಾಣವನ್ನು ರಾತ್ರಿ ೮:೪೫ ಕ್ಕೆ ತಲುಪಿಬಿಡುತ್ತದೆ! ರಾತ್ರಿಯಾದ್ದರಿಂದ ಹೊರಗೆ ಏನೂ ಕಾಣುತ್ತಿರಲಿಲ್ಲ. ಕಣ್ಣು ಬಿಡುವಷ್ಟರಲ್ಲೇ ಸುಯ್ಯೆಂದು ಹಾರುತ್ತಿದ್ದುದರಿಂದ ಕತ್ತಲಲ್ಲಿ ನೋಡಲು ಯಾರೂ ಪ್ರಯತ್ನಿಸುತ್ತಿರಲಿಲ್ಲ! &lt;/p&gt;&lt;p&gt;&lt;br /&gt;ಅಸಾಮಿಯೆಂದ "ಕ್ಯೂಶೂ ಜಪಾನಿನ ದಕ್ಷಿಣದ್ವೀಪ ಭಾಗ; ಮಧ್ಯದಲ್ಲಿ ಸಮುದ್ರವಿದೆ; ಈ ರೈಲು ಸಮುದ್ರದೊಳಗೆ ತೋಡಿದ ಸುರಂಗದೊಳಗೆ ಹೋಗುತ್ತದೆ - ನೋಡುತ್ತಿರು " &lt;/p&gt;&lt;p&gt;&lt;br /&gt;ನಾನು ಕಂಡು ಕೇಳರಿಯದಿದ್ದ ಪ್ರಪಂಚ! ಜಪಾನೀ ತಂತ್ರಜ್ಞಾನಕ್ಕೆ ತಲೆಬಾಗಲೇ ಬೇಕು! ರೈಲಿನಲ್ಲಿ ಸುಮಾರು ೭:೦೦ ಗಂಟೆಗೆ ಎಲ್ಲರೂ &lt;b&gt;ಒಬೆಂತೋ&lt;/b&gt;[=ಬುತ್ತಿ] ತೆರೆದು ತಿನ್ನಲು ಶುರುಮಾಡಿದರು. ನಾನೂ ಆಸನದ ಮುಂದಿದ್ದ ಮಡಚುಮಣೆ ಎಳೆದು ಊಟದ ಸಿದ್ಧತೆ ಮಾಡಿದೆ; ತರಕಾರಿಯ ನಾಲ್ಕೈದು ತುಂಡುಗಳನ್ನು ಒಪ್ಪವಾಗಿ ಜೋಡಿಸಿ ೧೫೦ ಯೆನ್ ಎಂದು ಹಣೆಪಟ್ಟಿ ಹಚ್ಚಿದ್ದ &lt;b&gt;ಒಬೆಂತೊ&lt;/b&gt; ತೆರೆದು ತಿಂದೆ. ಸಮವಸ್ತ್ರದ ತರುಣಿಯೊಬ್ಬಳು ತಳ್ಳುಗಾಡಿಯಲ್ಲಿ ಪಾನೀಯ, ತಿನಿಸುಗಳನ್ನು ಮಾರಲು ಬಂದಳು. ನಾನು ಕಿತ್ತಲೆ ರಸ ಕುಡಿದೆ; ಆಗಲೇ ಮುರುಗನ್ ಮತ್ತು ಅಸಾಮಿ ಬೀರು ಹೀರುತ್ತಿದ್ದರು. ಅಲ್ಲಿಗೆ ರಾತ್ರಿಯ ಊಟ ಮುಗಿಯಿತು! ಕೊಕುರಾದಲ್ಲಿ ಇಳಿದಾಗ ರಾತ್ರಿ ೮:೪೫. ಅಲ್ಲಿಯೇ ಹತ್ತಿರದಲ್ಲಿದ್ದ ಹೊಟೆಲ್[= 'ತಂಗುದಾಣ' ಅಥವಾ ಲಾಡ್ಜ್; ಉಪಾಹಾರಗೃಹವಲ್ಲ] ಒಂದಕ್ಕೆ ನುಗ್ಗಿದೆವು. &lt;/p&gt;&lt;p&gt;&lt;br /&gt;ಅಸಾಮಿ "ಬೆಳಿಗ್ಗೆ ೭:೧೫ ಕ್ಕೆ ತಿಂಡಿ; ೭:೩೦ ಗೆ ಕಾರು ಬರುತ್ತದೆ ಸಿದ್ಧವಾಗಿರು" ಎಂದವನೇ &lt;b&gt;ಒಯಾಸುಮಿ&lt;/b&gt;[ಶುಭವಿಶ್ರಾಂತಿ] ಹೇಳಿ ಅವನ ಕೋಣೆಗೆ ನಡೆದ. &lt;/p&gt;&lt;p&gt;&lt;br /&gt;ಮುರುಗನ್ ಕೂಡ ಬೆಳಿಗ್ಗೆ ಬೇಗ ಏಳಬೇಕೆಂದು ಹೇಳಿ ಹೊರಟ. ನಾನೂ ನಿಟ್ಟುಸಿರಿಟ್ಟು ನನ್ನ ಕೋಣೆಗೆ ಹೋಗಲು ಎದ್ದೆ; '೧೦ ದಿನ ಕೇವಲ ೮೦,೦೦೦ ಯೆನ್' ಎಂದು ಬರೆಯಲ್ಪಟ್ಟ ವಿದ್ಯುನ್ಮಾನ ಕಾರ್ಡ್ ಕೀಲಿ ಕೈಗೆತ್ತಿಕೊಂಡೆ!&lt;br /&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/29152559-115382511480344069?l=kannadaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaputa.blogspot.com/feeds/115382511480344069/comments/default' title='Post Comments'/><link rel='replies' type='text/html' href='http://www.blogger.com/comment.g?blogID=29152559&amp;postID=115382511480344069' title='0 Comments'/><link rel='edit' type='application/atom+xml' href='http://www.blogger.com/feeds/29152559/posts/default/115382511480344069'/><link rel='self' type='application/atom+xml' href='http://www.blogger.com/feeds/29152559/posts/default/115382511480344069'/><link rel='alternate' type='text/html' href='http://kannadaputa.blogspot.com/2006/07/blog-post.html' title='೪.ಶರವೇಗದ ಹಳಿಬಂಡಿಯನ್ನೇರಿ......'/><author><name>Buddha</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-29152559.post-115077003291175244</id><published>2006-06-20T11:17:00.000+09:00</published><updated>2006-06-27T13:07:51.646+09:00</updated><category scheme='http://www.blogger.com/atom/ns#' term='ಕಾವ್ಯ'/><title type='text'>ಓಹ್! ಇವಳೆನಿತು ಚೆಲುವೆ!</title><content type='html'>&lt;strong&gt;ಓಹ್! ಇವಳೆನಿತು ಚೆಲುವೆ!&lt;/strong&gt;&lt;br /&gt;--------------------------&lt;br /&gt;&lt;br /&gt;&lt;span style="color:#3333ff;"&gt;&lt;span style="color:#000099;"&gt;ಕಣ್ಣ ಕಾಡಿಗೆಯಿಲ್ಲ, ತುಟಿಯ ಬಣ್ಣವದಿಲ್ಲ;&lt;br /&gt;ಚಿಗರೆಯಂತತ್ತಿತ್ತ ನೆಗೆವ ನೋಟಗಳಿಲ್ಲ;&lt;br /&gt;ಚಣಕೊಮ್ಮೆ ಹಿಂದೂಡುವ ಮುಂಗುರುಳಿಲ್ಲ;&lt;br /&gt;ಆದರೂ ಓಹ್! ಇವಳೇಕೆ ಇನಿತು ಚೆಲುವೆ?!&lt;br /&gt;&lt;br /&gt;&lt;br /&gt;ಕಿಲಕಿಲಿಸುವುದಿಲ್ಲ; ಬೆರೆತು ಹರಟುವುದಿಲ್ಲ;&lt;br /&gt;ನಡುವು ಬಳುಕುವುದಿಲ್ಲ; ಎದೆಯು ತುಳುಕುವುದಿಲ್ಲ;&lt;br /&gt;ನಿಡಿದಾದ ಹೆರಳಿಲ್ಲ; ಸೀಮಂತ ಹರಳಿಲ್ಲ;&lt;br /&gt;ಓಹ್! ಆದರೂ ಇವಳೆಂತು ಇನಿತು ಚೆಲುವೆ?!&lt;br /&gt;&lt;br /&gt;&lt;br /&gt;ಅಂಚೆಯಾ ನಡೆಯಿಲ್ಲ; ಸಂಚರಿಸೆ ಒನಪಿಲ್ಲ;&lt;br /&gt;ಅರೆಬಿರಿದ ತುಟಿಗಳಲಿ ಮೊಲ್ಲೆ ಕಾಣುವುದಿಲ್ಲ;&lt;br /&gt;ಹಾದಿಬೀದಿಯ ಕಣ್ಣುಗಳಿವಳ ಕಾಡುವುದಿಲ್ಲ;&lt;br /&gt;ಆದರೂ ಓಹ್! ಏಕಿವಳು ಇನಿತು ಚೆಲುವೆ?!&lt;br /&gt;&lt;br /&gt;&lt;br /&gt;ರವಿಗೆ ಬೆವರುವುದಿಲ್ಲ; ಕವಿಗೆ ನಿಲುಕುವುದಿಲ್ಲ!&lt;br /&gt;ಸವಿಯೆ ಸವೆಯುವುದಿಲ್ಲ; ಹಿಡಿಯ ಸಿಗುವುದೂ ಇಲ್ಲ!&lt;br /&gt;ಮನದ ತಿಳಿಗೊಳದಲಿವಳ ಪ್ರತಿಬಿಂಬ ಕದಡುವುದಿಲ್ಲ!&lt;br /&gt;ಒಳಗಣ್ಣ ತೆರೆದಿರಲು ಚೆಲುವು ಕಾಣದಿರುವುದೇ ಇಲ್ಲ!&lt;br /&gt;&lt;/span&gt;&lt;br /&gt;&lt;/span&gt;&lt;br /&gt;- ಬೆನಕ&lt;br /&gt;(೨೦೦೬/೦೬/೧೦ ತೋಕ್ಯೋ, ಜಪಾನ್)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/29152559-115077003291175244?l=kannadaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaputa.blogspot.com/feeds/115077003291175244/comments/default' title='Post Comments'/><link rel='replies' type='text/html' href='http://www.blogger.com/comment.g?blogID=29152559&amp;postID=115077003291175244' title='1 Comments'/><link rel='edit' type='application/atom+xml' href='http://www.blogger.com/feeds/29152559/posts/default/115077003291175244'/><link rel='self' type='application/atom+xml' href='http://www.blogger.com/feeds/29152559/posts/default/115077003291175244'/><link rel='alternate' type='text/html' href='http://kannadaputa.blogspot.com/2006/06/blog-post_20.html' title='ಓಹ್! ಇವಳೆನಿತು ಚೆಲುವೆ!'/><author><name>Buddha</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>1</thr:total></entry><entry><id>tag:blogger.com,1999:blog-29152559.post-114969689911405999</id><published>2006-06-08T01:11:00.000+09:00</published><updated>2006-07-28T13:19:38.696+09:00</updated><category scheme='http://www.blogger.com/atom/ns#' term='ನನ್ನ ಜಪಾನ್ ಪ್ರವಾಸ'/><title type='text'>೩.ನನ್ನ ಪರಿಚಯ</title><content type='html'>&lt;div align="center"&gt;&lt;strong&gt;&lt;u&gt;ನನ್ನ ಜಪಾನ್ ಪ್ರವಾಸ: &lt;span style="color:#000099;"&gt;೩.ನನ್ನ ಪರಿಚಯ&lt;/span&gt;&lt;/u&gt;&lt;/strong&gt;&lt;/div&gt;&lt;p&gt;&lt;br /&gt;ಆಗಲೇ ಇಲ್ಲ; ನನ್ನ ಪರಿಚಯ ಯಾರಿಗೂ ಆಗಲೇ ಇಲ್ಲ! ಕಛೇರಿಯಲ್ಲಿ ಮೊದಲದಿನ ನನ್ನನ್ನು ಜಪಾನೀ &lt;strong&gt;&lt;em&gt;ಬುಚೋ&lt;/em&gt;&lt;/strong&gt; [= ವಿಭಾಗಾಧಿಕಾರಿ] ಒಬ್ಬರಿಗೆ ವೆಂಕಟ, ನರೇಂದ್ರರು ಪರಿಚಯಿಸಿದ್ದೆಷ್ಟೋ ಅಷ್ಟೇ. ಆತ ಅಚ್ಚರಿಯಿಂದ ನನ್ನನ್ನು ನೋಡಿ, "ಓಹ್! ಅನತನೊ ಸೆಕಿ ವಾ...."[ಓಹ್! ನಿನ್ನ ಕುರ್ಚಿ......] ಎಂದು ತಲೆಬಗ್ಗಿಸಿ ಗೊಣಗಿದಂತೆ ಮಾತನಾಡು(ಡಿಕೊಳ್ಳು)ತ್ತಾ ಇಲ್ಲದ ಕುರ್ಚಿಗಾಗಿ ಹುಡುಕಾಡಿ, ಹಳೆಯ ಧೂಳು ಹಿಡಿದ ಕುರ್ಚಿಯೊಂದನ್ನು ಎಳೆದು ನರೇಂದ್ರನ ಮೇಜಿಗೆ ಜೋಡಿಸಿದರು. ಅದು ಮಧ್ಯಾಹ್ನದವರೆಗೆ ಮಾತ್ರ; ಮಧ್ಯಾಹ್ನ ನರೇಂದ್ರ ಬೇರೆ ಊರಿಗೆ (ನಗೋಯಾ) ಹೋದ ನಂತರ, ಅವನ ಕುರ್ಚಿಗೆ ವರ್ಗಾವಣೆ. ಇದೇನಿದು, ನಾನು ಇಂದು ಬರುತ್ತೇನೆಂದು ತಿಳಿದಿದ್ದರೂ ಒಂದು ಹೊಸ ಕುರ್ಚಿ, ಮೇಜು ಸಿದ್ಧವಿಲ್ಲವಲ್ಲಾ ಎಂದುಕೊಂಡೆ. ಆದರೆ ನಾನೂ ಇಷ್ಟರಲ್ಲೇ ಬೇರೆ ಕಡೆಗೆ ಹೋಗುವುದೆಂದು ಮೊದಲೇ ನಿರ್ಧಾರವಾಗಿದ್ದರಿಂದ, ಈ ವ್ಯವಸ್ಥೆಯೇನೋ! ಸರಿ, ಇರಲಿ ಎಂದುಕೊಂಡೆ. &lt;strong&gt;&lt;em&gt;ಬುಚೋ&lt;/em&gt;&lt;/strong&gt; ನನಗೆ ಈ ವಿಚಾರ ಹೇಳಲು ನನ್ನ ಹತ್ತಿರ ಬಂದರು; ನಾನು ಗೌರವ ಸೂಚಿಸಲು ಎದ್ದೆ; "ಸುವತ್ತೆ ಸುವತ್ತೆ"[ಕೂತ್ಕೊಳಿ ಕೂತ್ಕೊಳಿ] ಎಂದು ಕೈಯಾಡಿಸಿದರು. ನಾನು ಕುಳಿತೊಡನೆ, ಅವರೇ ನೆಲದ ಮೇಲೆ ಮಂಡಿಯೂರಿ ನನ್ನ ಪಕ್ಕ ಕುಳಿತರು! ನಾನು ಅಚ್ಚರಿಯಿಂದ ಮತ್ತೆ ಎದ್ದೆ! ಮತ್ತೆ ಕೂರಲು ಕೈತೋರಿದರು. ಈ ರಾಮಾಂಜನೇಯ ಭಂಗಿಯಲ್ಲಿ ಮೆಲ್ಲನೆ ಇದು ಮಧ್ಯಾಹ್ನದವರೆಗೆ ಮಾತ್ರ ಎಂದು ವಿನಯವಾಗಿ ನಿವೇದಿಸಿಕೊಂಡರು! ನಾನು ತಲೆಯಲ್ಲಾಡಿಸಿದೆ. ಆತ ಎದ್ದು ಹೋದ ಮೇಲೆ ನರೇಂದ್ರನೆಂದ:&lt;/p&gt;&lt;p&gt;"ಇದು ಇಲ್ಲಿನ ಪದ್ಧತಿ; ನಾವು ನಿಂತು ಯಾರೊಡನೆಯಾದರೂ ಮಾತನಾಡಿದರೆ ಅಕ್ಕಪಕ್ಕದಲ್ಲಿ ಕೆಲಸ ಮಾಡುವ ಬೇರೆಯವರಿಗೆ ಯಾರೋ ತಮ್ಮೆದುರು ನಿಂತತೆ ತೋರಿ, ತೊಂದರೆಯಾಗುತ್ತದೆ. ಆದ್ದರಿಂದ ಮಾತನಾಡುವವರು ಮಂಡಿಯೂರಿ ಕುಳಿತು, ದೇಹ ಕುಗ್ಗಿಸಿ ಮಾತನಾಡುತ್ತಾರೆ."&lt;/p&gt;&lt;p&gt;"ಅದು ಸರಿ, ಆದರೆ ಅವರು ನನಗಿಂತ ಹಿರಿಯರು, ಮೇಲಧಿಕಾರಿಯಲ್ಲವೇ?""ಯಾರಾದರೇನು? ಇಲ್ಲಿ ನಿಯಮ ನಿಯಮವೇ; ಅದಕ್ಕೆ ಎಲ್ಲರೂ ಬೆಲೆ ಕೊಡುತ್ತಾರೆ."&lt;/p&gt;&lt;p&gt;ನನಗೆ ಒಂದು ನಿಮಿಷ ರೋಮಾಂಚನವಾಯಿತು! ನನ್ನ ಮೇಲಧಿಕಾರಿ ನನ್ನ ಕಾಲಬಳಿ ಕುಳಿತು ಪಿಸುದನಿಯಲ್ಲಿ ಮಾತನಾಡುವುದೇ? ಭಾರತದಲ್ಲಿ ಇದು ಸಾಧ್ಯವೇ? ಖಂಡಿತಾ ಇಲ್ಲವೆಂದುಕೊಂಡೆ. ಜಪಾನಿನಲ್ಲಿ ಇನ್ನೇನೇನು ನಿಯಮಗಳಿವೆಯೋ ಎಂದು ಹೆದರಿಕೆ ಶುರುವಾಗಿತ್ತು! ಮೊದಲೇ ಇದು ಜಪಾನೀ ಕಛೇರಿ!&lt;br /&gt;&lt;br /&gt;&lt;a href="http://photos1.blogger.com/blogger/550/1446/1600/shanai.jpg"&gt;&lt;img style="FLOAT: right; MARGIN: 0px 0px 10px 10px; CURSOR: hand" alt="" src="http://photos1.blogger.com/blogger/550/1446/320/shanai.jpg" border="0" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;span style="color:#3333ff;"&gt;(&lt;em&gt;ಜಪಾನೀ ಕಛೇರಿ&lt;/em&gt; →)&lt;br /&gt;&lt;/span&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;ನರೇಂದ್ರ ಹೊರಡುವ ಮುನ್ನ ನನ್ನ ಪ್ರಾಜೆಕ್ಟಿನಲ್ಲಿದ್ದ ಹಿರಿಯರೊಬ್ಬರನ್ನು ಪರಿಚಯಿಸಿದ. ನಾನು ಅವರೊಂದಿಗೇ ಕೆಲಸಮಾಡಬೇಕಿತ್ತು. ನಾನು &lt;/p&gt;&lt;p&gt;"ಬೆನಕ ತೊ ಮೋಶಿಮಾಸ್; ಯೊರೊಶಿಕು ಒನೆಗಾಯ್ ಶಿಮಾಸ್"[ನಾನು ಬೆನಕ; ತಮ್ಮ ಒಳ್ಳೆಯತನವನ್ನು ಪ್ರಾರ್ಥಿಸುತ್ತೇನೆ] ಎಂದು ಜಪಾನೀ ಶೈಲಿಯಲ್ಲಿ ಸ್ವ-ಪರಿಚಯ ಮಾಡಿಕೊಂಡೆ. ಆತನೂ ಹಾಗೆಯೇ ಪರಿಚಯಿಸಿಕೊಂಡರು. ಅವರ ಹೆಸರು ಅಸಾಮಿ; ಒಳ್ಳೆ ಆಸಾಮಿಯೆಂದುಕೊಂಡೆ! ಅಷ್ಟೇ, ಅಲ್ಲಿಗೆ ನಾನು ಯಾರೆಂದು ಅಲ್ಲಿದ್ದ ಇಬ್ಬರಿಗೇ ತಿಳಿದದ್ದು. ಆ ವಿಭಾಗದಲ್ಲಿದ್ದ ಮಿಕ್ಕ ಸುಮಾರು ೩೦ ಜನ ಅವರ ಪಾಡಿಗೆ ಅವರ ಕೆಲಸದಲ್ಲಿ ಮಗ್ನರಾಗಿದ್ದರು; ನಾನಾರೆಂದು ತಿರುಗಿಯೂ ನೋಡಲಿಲ್ಲ! ಪಾಠ-೧ ಮತ್ತೆ ನೆನಪಿಗೆ ಬಂತು. ಅದೇ ದಿನ ಅದೇ ಕಛೇರಿಗೆ ಮೂವರು ಹೊಸ ಜಪಾನೀಯರು ಕೆಲಸಕ್ಕೆ ಸೇರುವುದಕ್ಕೆ ಬಂದು &lt;strong&gt;&lt;em&gt;ಶಚೋ&lt;/em&gt;&lt;/strong&gt;[= ಮುಖ್ಯ ನಿರ್ವಹಣಾಧಿಕಾರಿ, Managing Director] ಜೊತೆಗೆ ಮಾತನಾಡುತ್ತಿದ್ದರು. ನಂತರ ಅವರನ್ನು ಮಧ್ಯಕಛೇರಿಗೆ ಕರೆದುಕೊಂಡುಬಂದ &lt;strong&gt;&lt;em&gt;ಶಚೋ&lt;/em&gt;&lt;/strong&gt;, ಆ ಮೂವರನ್ನು ಎಲ್ಲರಿಗೆ ಪರಿಚಯಿಸಿದರು. ಎಲ್ಲರೂ ಆಗ ಯಥಾ ಪ್ರಕಾರ ಸ್ವ-ಪರಿಚಯ ಮಾಡಿಕೊಂಡರು; ನಾನೂ ಮಾಡಿಕೊಂಡೆ! ಆಗಲೂ ನಾನಾರೆಂದು ಯಾರೂ ಕೇಳಲಿಲ್ಲ; &lt;strong&gt;&lt;em&gt;ಶಚೋ&lt;/em&gt;&lt;/strong&gt; ಕೂಡ ಪರಿಚಯಿಸಲಿಲ್ಲ! ಸ್ವಲ್ಪ ಬೇಜಾರಾಯಿತು; ಕಚೇರಿಯ ಪಂಕ್ತಿಭೇದ ನನಗೆ ಮೊದಲದಿನವೇ ಅರ್ಥವಾಗಿಬಿಟ್ಟಿತು! ಅದರಿಂದ ಸಿಡಿಮಿಡಿಗೊಂಡಂತಿದ್ದ ಹಿರಿಯ ಭಾರತೀಯನೊಬ್ಬ ನನ್ನ ಪಕ್ಕದಲ್ಲಿದ್ದವನಿಗೆ "ನೀನು ಸ್ವಲ್ಪ ಜೋರಾಗಿ ಪರಿಚಯಿಸಿಕೊಂಡರೆ ಚೆನ್ನಿತ್ತು" ಎಂದದ್ದು ಕೇಳಿಸಿತು! ನನಗೆ ಅಂಥ ಬಲವಂತದ ಮಾಘಸ್ನಾನ ಬೇಡವಾಗಿತ್ತು. ಇಲ್ಲೇನೋ ಪರಿಸ್ಥಿತಿ ವಿಚಿತ್ರವಾಗಿದೆ ಎಂದುಕೊಂಡೆ.&lt;br /&gt;&lt;br /&gt;&lt;a href="http://photos1.blogger.com/blogger/550/1446/1600/officelayout.gif"&gt;&lt;img style="FLOAT: right; MARGIN: 0px 0px 10px 10px; CURSOR: hand" alt="" src="http://photos1.blogger.com/blogger/550/1446/320/officelayout.png" border="0" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;span style="color:#3333ff;"&gt;(&lt;em&gt;ಜಪಾನೀ ಕಛೇರಿ ಕುರ್ಚಿ ವ್ಯವಸ್ಥೆ &lt;/em&gt;→)&lt;br /&gt;&lt;/span&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;ಯಾರೂ ಮಾತನಾಡುತ್ತಿರಲಿಲ್ಲ; ಅವರಪಾಡಿಗೆ ಪಸೊಕೊನ್[ಪರ್ಸನಲ್ ಕಂಪ್ಯೂಟರ್ ನ ಅಪಭ್ರಂಶ]ನಲ್ಲಿ ತಲೆತೂರಿಸಿ ಮಗ್ನವಾಗಿದ್ದರು. ನಾನೂ ಗಟ್ಟಿಮನಸ್ಸಿನಿಂದ ನರೇಂದ್ರನ ಪಸೊಕೊನ್ ಒಳಗೆ ತಲೆತೂರಿಸಿ ಓದತೊಡಗಿದೆ. ಮಧ್ಯಾಹ್ನ ೧೨ ಗಂಟೆಗೆ ಎಲ್ಲಿಂದಲೋ ವಿಚಿತ್ರವಾದ ಸಂಗೀತ ಕೇಳಿಬಂತು. ವೆಂಕಟ ಮೆಲ್ಲನೆ "ಊಟ ಮಾಡಬಹುದು, ೪೫ ನಿಮಿಷ ಸಮಯವಿದೆ" ಎಂದು ಪಿಸುಗುಡುತ್ತಾ ಜಾಗ ತೋರಿಸಿದ. ನಾನು ಬೆಳಿಗ್ಗೆಯೇ ತಯಾರಿಸಿ ತಂದ ಬುತ್ತಿಯ ಡಬ್ಬಿ ತೆರೆದು ತಿಂದೆ. ಆಗಲೂ ಓಡಾಡುತ್ತಿದ್ದ ಕೆಲ ಜಪಾನೀಯರು ನನ್ನನ್ನು ನೋಡಿಯೂ, ಮಾತನಾಡಿಸದೆ ಓಡಾಡುತ್ತಿದ್ದರು. ವೆಂಕಟನೂ ಬಂದು ಕುಳಿತ; ಇನ್ನೂ ಕೆಲ ಭಾರತೀಯ ಗೆಳೆಯರು ಬಂದರು. ಎಲ್ಲ ಕರ್ನಾಟಕದವರೇ ಆದ್ದರಿಂದ ನಾನು ಕನ್ನಡದಲ್ಲಿ ಮಾತನಾಡಿಸಿದೆ. ನನಗಿಂತ ಮೊದಲೇ ಅಲ್ಲಿ ತಳವೂರಿ ಮದಿಸಿದ್ದ ಹಿರಿಯನೊಬ್ಬ ಏನೋ ಒಂದು ರೀತಿಯ ಕುಹಕವಾಡುತ್ತಾ "ಇಲ್ಲಿ ಕನ್ನಡ ಮಾತನಾಡಬಾರದು" ಎಂದ. ಎಲ್ಲ ಸುಮ್ಮನಾದರು! ನನಗೆ ಅಚ್ಚರಿಯಾಯಿತು! ಕನ್ನಡವಿರಲಿ, ಎಲ್ಲಾ ಮಾತನಾಡುವುದನ್ನೇ ಬಿಟ್ಟರು! ಮತ್ತೆ ೧೨:೪೫ ಕ್ಕೆ ವಿಚಿತ್ರ ಸಂಗೀತ ಕೇಳಿಬಂತು. ನಾನಾಗಲೇ ಕೆಲಸದ ಜಾಗದಲ್ಲಿದ್ದೆ. ಅಸಾಮಿ ಪ್ರಾಜೆಕ್ಟಿನ ಬಗ್ಗೆ ಚರ್ಚಿಸಲು ಕರೆದರು; ಚರ್ಚೆಯ ಮೇಜಿಗೆ ಹೋದೆ.&lt;br /&gt;&lt;br /&gt;ಅಸಾಮಿ ಎಂಬ ಆಸಾಮಿ ಬಾಯ್ತೆರೆದರೆ ಸಾಕು ಜಪಾನೀಪದಗಳ ಮಳೆ ಸುರಿಯುತ್ತದೆ! ನಾನು ತತ್ತರಿಸಿದೆ! ಆ ಭಾಷೆ ನಾನು ಇದುವರೆಗೆ ಕಂಡು ಕೇಳರಿಯದ ಜಪಾನೀಭಾಷೆ - ಸಂಪೂರ್ಣ '&lt;strong&gt;&lt;em&gt;ಓಸಾಕಾಬೆನ್&lt;/em&gt;&lt;/strong&gt;'[ಓಸಾಕಾದ ಜಪಾನೀಭಾಷೆ]! ನಾನು ಕಲಿತದ್ದು ಸರ್ವೇಸಾಮಾನ್ಯ ತೋಕಿಯೋದ ಶುದ್ಧ ಜಪಾನೀ ಭಾಷೆ, ಆತ ಮಾತನಾಡಿದ್ದು ಏನೆಂದೇ ತಿಳಿಯದಂತಾಗಿ ಮಿಕಿಮಿಕಿ ನೋಡಿದೆ! ನಮ್ಮ ಕರ್ನಾಟಕದ ಮೈಸೂರಿನ ಕನ್ನಡ, ಹುಬ್ಬಳ್ಳಿಯ ಮರಾಠ ಕನ್ನಡದಷ್ಟೇ ವ್ಯತ್ಯಾಸ! ವಿದೇಶಿಯನೊಬ್ಬ ಪ್ರಾಥಮಿಕ ಕನ್ನಡ ಪುಸ್ತಕದಿಂದ ಕನ್ನಡ ಕಲಿತು ಕರಾವಳಿಗೋ, ಗುಲಬರ್ಗಾಕ್ಕೋ ಹೋದ ತಕ್ಷಣ ಹೇಗಾಗಬಹುದು? ನನಗಾಗಿದ್ದೂ ಅದೇ! ನನ್ನ ಪ್ರಾರಬ್ಧಕರ್ಮಕ್ಕೆ, ಅಸಾಮಿಯೆಂಬ ಆ ಶುದ್ಧ ಓಸಾಕಾದವನಿಗೆ ಉಗ್ಗು! ಸಾಲದ್ದಕ್ಕೆ ಕ್ಲಿಷ್ಟ ಪದಗಳ ಪ್ರಯೋಗ! ನನಗೆ ಚರ್ಚೆಯಲ್ಲಿ ಏನಾಗುತ್ತಿದೆಯೆಂದೇ ತಿಳಿಯಲಿಲ್ಲ. ಚರ್ಚೆಯ ಕೊನೆಯಲ್ಲಿ ಪಕ್ಕದಲ್ಲಿದ್ದ ತಮಿಳಿಗನೊಬ್ಬನನ್ನು ಇಂಗ್ಲಿಷಿನಲ್ಲಿ ಕೇಳಿ ತಿಳಿದುಕೊಂಡೆ!&lt;br /&gt;&lt;br /&gt;&lt;a href="http://photos1.blogger.com/blogger/550/1446/1600/meetingroom.gif"&gt;&lt;img style="FLOAT: right; MARGIN: 0px 0px 10px 10px; CURSOR: hand" alt="" src="http://photos1.blogger.com/blogger/550/1446/320/meetingroom.png" border="0" /&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;span style="color:#3333ff;"&gt;(&lt;em&gt;ಚರ್ಚೆಯ ಮೇಜು&lt;/em&gt; →)&lt;/span&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;br /&gt;ಅಸಾಮಿಗೆ ಏನೆನ್ನಿಸಿತೋ ಗೊತ್ತಿಲ್ಲ; ನನಗೆ ಅರ್ಥವಾಗದಿದ್ದರೂ ತಲೆಯಾಡಿಸಿದೆ ಎಂದು &lt;strong&gt;&lt;em&gt;ಬುಚೋ&lt;/em&gt;&lt;/strong&gt;ಗೆ ಚಾಡಿ ಹೇಳುತ್ತಿದ್ದುದು ನನಗೆ ಅರ್ಧಮರ್ಧ ಅರ್ಥವಾಯಿತು! ನನಗಾಗ ಬಂದದ್ದು ಅಳುವಲ್ಲ; ಕೋಪ! ಆದರೆ &lt;strong&gt;&lt;em&gt;ಬುಚೋ&lt;/em&gt;&lt;/strong&gt;ಗೆ ನನ್ನ ಕಷ್ಟ ಅರ್ಥವಾಯಿತೋ ಏನೋ, ಅಸಾಮಿಯನ್ನೇ ಗದರಿದ! ನಾನಿನ್ನೂ ಭಾಷೆಗೆ ಹೊಂದಿಕೊಂಡಿಲ್ಲ ಎಂದೆಲ್ಲ ಏನೋ ಹೇಳಿದ್ದೂ ಕೇಳಿಸಿತು. ಅಸಾಮಿ ಗೊಣಗಿ ತಣ್ಣಗಾದ! ಅಷ್ಟರಲ್ಲಿ ನನ್ನ ಸಹಾಯಕ್ಕೆ ಬಂದವನು ಹಿರಿಯವ ಕುಮಾರ್! ಸ್ವಲ್ಪ ಕೋಪದ ದನಿಯಲ್ಲೇ ಇಂಗ್ಲಿಷಿನಲ್ಲಿ ನನ್ನನ್ನು ಕರೆದ. "If you don't understand, say that frankly without any hesitation; Let them struggle to make you understand. Don't leave them until you understand; let them write it down on paper if they can not explain by speech" ಎಂದ! ಪಾಠ-೨: "ಗೊತ್ತಿಲ್ಲದಿದ್ದರೆ ಗೊತ್ತಿಲ್ಲವೆಂದು ಹೇಳಿಬಿಡು; ಅರ್ಥವಾದಂತೆ ನಟಿಸಬೇಡ; ಅರ್ಥವಾಗುವವರೆಗೆ ಬಿಡಬೇಡ!" ನನಗೆ ಆ ಮಾತುಗಳು ಮಂತ್ರದಂತೆ ಕಂಡವು. ಆ ಮಾತುಗಳಿಗೆ ಅವನಿಗೆ ಧನ್ಯವಾದ ಹೇಳಿದೆ; ಅವನ ಕೋಪ ನನ್ನ ಮೇಲಿರಲಿಲ್ಲ! ಮೊದಲ ದಿನವೇ ನನಗೆ ಎಲ್ಲ ಅರ್ಥವಾದಂತೆ ಭಾಸವಾಗಿ, ಭಂಡಧೈರ್ಯ ಬಂದುಬಿಟ್ಟಿತ್ತು!&lt;br /&gt;&lt;br /&gt;ಪ್ರಾಜೆಕ್ಟಿನ ಬಗ್ಗೆ ಚರ್ಚಿಸುವಾಗೆಲ್ಲ ಚರ್ಚೆಯುದ್ದಕ್ಕೂ ಅಸಾಮಿಗೆ ನಾನು ಹೇಳಲು ಶುರುಮಾಡಿದ್ದು ಒಂದೇ ಮಾತು - "ವಕಾರಿಮಾಸೆನ್"[= ಅರ್ಥವಾಗುತ್ತಿಲ್ಲ]. ಈಗ ಸುಸ್ತಾದವ ಅಸಾಮಿ! ತಣ್ಣಗಾಗಿ ತೋಕ್ಯೋ ಭಾಷೆಗೆ ಬಂದು ಸರಳಪದಗಳನ್ನು ಬಳಸತೊಡಗಿದ; ನಾನೂ ತಲೆಯಾಡಿಸತೊಡಗಿದೆ. ಅದಾದ ನಂತರ ಯಾವನೂ ಯಾವ ಚಾಡಿ ಹೇಳಲೂ ಬಾಯ್ತೆರೆಯಲಿಲ್ಲ. ರಾತ್ರಿ ಮನೆಗೆ ಹೋಗುವಷ್ಟರಲ್ಲಿ ಅಸಾಮಿ ನನಗೆ ಆಪ್ತಮಿತ್ರನಾಗಿದ್ದ; ಅಥವಾ ನಾನು ಹಾಗೆಂದುಕೊಂಡಿದ್ದೆ. ದಿನ-೧ ಹೀಗೆ ಮುಗಿಯಿತು. ನನಗಲ್ಲಿ ಬದುಕುವ ಮಾರ್ಗವೊಂದು ಕಂಡಿತ್ತು! ನಾನು ಅಸಾಮಿಯೊಡನೆ ಹೊಂದಿಕೊಳ್ಳದೇ ವಿಧಿಯಿರಲಿಲ್ಲ; ಏಕೆಂದರೆ ಇನ್ನೆರಡು ದಿನಗಳಲ್ಲಿ ನಾವಿಬ್ಬರೇ ಕ್ಯೂಶೂದ್ವೀಪದ ಪ್ರಾಜೆಕ್ಟಿನ ಸ್ಥಳಕ್ಕೆ ಹೋಗಬೇಕಿತ್ತು. ಕೊನೆಗೂ ಕಚೇರಿಯಲ್ಲಿ ನನ್ನ ಪರಿಚಯ ಬೇರೆಯವರಿಗೆ ಆಗಲೇ ಇಲ್ಲ! ವೆಂಕಟನಿಂದ ಕೀಲಿಕೈ ಪಡೆದು ನಾನು ರಾತ್ರಿ ೭:೩೦ಕ್ಕೆ ಮನೆಗೆ ಹೊರಟೆ. ವೆಂಕಟನೆಂದ&lt;/p&gt;&lt;p&gt;"ಇಲ್ಲಿ ಕೆಲಸ ೯ ರಿಂದ ೬ ಗಂಟೆವರೆಗಾದರೂ ಯಾರೂ ಮನೆಗೆ ಹೋಗುವುದಿಲ್ಲ; ರಾತ್ರಿ ೯-೧೦ಕ್ಕೆ ಹೋಗುತ್ತಾರೆ. ನಾನು ಇನ್ನೂ ಇರುತ್ತೇನೆ; ನೀನು ಹೊರಡು."&lt;/p&gt;&lt;p&gt;ನನಗೆ ಮನೆಯ ದಾರಿ ಇನ್ನೂ ಹೊಸದಾದ್ದರಿಂದ ವೆಂಕಟನಿಗೆ ಕಾಯೋಣವೇ ಎಂದುಕೊಂಡೆ; ಅಷ್ಟರಲ್ಲಿ ಗೋವರ್ಧನ ಜೊತೆಯಾದ. ಜಪಾನೀ ಪದ್ಧತಿಯಂತಿ "ಒಸಾಕಿನಿ ಶಿತ್ಸುರೈ ಶಿಮಾಸು"[ತಮಗಿಂತ ಮೊದಲೇ ನಿರ್ಗಮಿಸುತ್ತೇನೆ] ಎಂದು ಎಲ್ಲರಿಗೆದುರಾಗಿ ಹೇಳಿ ಹೊರಬಿದ್ದೆ. ಕಾರಾಗೃಹದಿಂದ ಈಚೆ ಬಂದಂತಾಗಿತ್ತು. ಗೋವರ್ಧನ "ಗುರುವೇ, ಏನ್ಸಮಾಚಾರ....." ಎಂದು ಕನ್ನಡದಲ್ಲಿ ಶುರುಮಾಡಿದ. ನಾನೂ ಹರಟುತ್ತಾ ಹೊರಟೆ.&lt;br /&gt;(ಸಶೇಷ) &lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/29152559-114969689911405999?l=kannadaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaputa.blogspot.com/feeds/114969689911405999/comments/default' title='Post Comments'/><link rel='replies' type='text/html' href='http://www.blogger.com/comment.g?blogID=29152559&amp;postID=114969689911405999' title='0 Comments'/><link rel='edit' type='application/atom+xml' href='http://www.blogger.com/feeds/29152559/posts/default/114969689911405999'/><link rel='self' type='application/atom+xml' href='http://www.blogger.com/feeds/29152559/posts/default/114969689911405999'/><link rel='alternate' type='text/html' href='http://kannadaputa.blogspot.com/2006/06/blog-post_08.html' title='೩.ನನ್ನ ಪರಿಚಯ'/><author><name>Buddha</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-29152559.post-114950998919768247</id><published>2006-06-05T21:08:00.000+09:00</published><updated>2006-06-08T10:08:36.423+09:00</updated><category scheme='http://www.blogger.com/atom/ns#' term='ನನ್ನ ಜಪಾನ್ ಪ್ರವಾಸ'/><title type='text'>೨.೩. ಜಪಾನಿನಲ್ಲಿ ಮೊದಲದಿನ - ಸ್ನಾನ</title><content type='html'>&lt;div align="center"&gt;&lt;u&gt;&lt;strong&gt;ನನ್ನ ಜಪಾನ್ ಪ್ರವಾಸ : &lt;span style="color:#000099;"&gt;೨.೩. ಜಪಾನಿನಲ್ಲಿ ಮೊದಲದಿನ - ಸ್ನಾನ&lt;/span&gt;&lt;/strong&gt;&lt;/u&gt;&lt;/div&gt;&lt;u&gt;&lt;span style="color:#000099;"&gt;&lt;/span&gt;&lt;p&gt;&lt;br /&gt;&lt;/u&gt;&lt;/p&gt;ಬಚ್ಚಲಿಗೆ ಕಾಲಿಟ್ಟವನೇ ಅಚ್ಚರಿಗೊಂಡೆ! ನಾನು ನಿಲ್ಲುವಷ್ಟೇ ಜಾಗ! ಪಕ್ಕದಲ್ಲಿ ಪಾಶ್ಚಾತ್ಯ ಶೈಲಿಯ ಶೌಚಕೂಪ; ಅದರ ಪಕ್ಕಕ್ಕೇ ಕೈತೊಳೆವ ಶೌಚಪಾತ್ರೆ! ಆ ಕಡೆ ಗೋಡೆಗೆ ಹೊಂದಿಕೊಂಡಂತೆ ಸ್ನಾನದತೊಟ್ಟಿ! ಆ ತೊಟ್ಟಿಯೊಳಗೇ ಬೀಳುವಂತೆ ಜಲಸಿಂಚಕ - ಷವರ್! ತೊಟ್ಟಿಗೂ ಬಚ್ಚಲಿಗೂ ಮಧ್ಯೆ ತೆಳ್ಳನೆಯ ಪ್ಲಾಸ್ಟಿಕ್ ತೆರೆ! ಶೌಚಪಾತ್ರೆ(ಸಿಂಕ್)ಯ ಮೇಲ್ಗಡೆಗೊಂದು ಕನ್ನಡಿ! ಅದರ ಮೇಲೆ ವಿದ್ಯುದ್ದೀಪ; ಅದರ ಪಕ್ಕದಲ್ಲೊಂದು ಛಾವಣಿ ಬೀಸಣಿಗೆ(ಫ್ಯಾನು)! ಇಷ್ಟೆಲ್ಲದರ ಮಧ್ಯೆ ಸ್ನಾನಮಾಡುವ ನಾನು! &lt;p&gt;ಅಷ್ಟರಲ್ಲಿ ಎದ್ದು ಬಂದವನೇ ನರೇಂದ್ರ "ಕೆಂಪು ನಲ್ಲಿ ಬಿಸಿನೀರು, ಆ ಕಡೆ ನೀಲಿಯದು ತಣ್ಣೀರು; ಎರಡನ್ನೂ ಸರಿಯಾಗಿ ಬೆರೆಸಿಕೊಂಡಮೇಲೆ ಷವರ್ ಬಿಟ್ಕೊಳೋ" ಎಂದು ಹೇಳಿ ಅವನ ಮನೆಗೆ ಅಂದರೆ ಪಕ್ಕದ ಕೋಣೆಗೆ ಹೊರಟ.&lt;br /&gt;&lt;br /&gt;&lt;em&gt;&lt;span style="color:#000099;"&gt;(ವಿಕಿಪೀಡಿಯ ಚಿತ್ರ: ಜಪಾನಿನ ಬಚ್ಚಲುಮನೆ-ಸ್ನಾನಘಟಕ)&lt;/span&gt;&lt;/em&gt;&lt;a href="http://photos1.blogger.com/blogger/550/1446/1600/Unitbath.jpg"&gt;&lt;em&gt;&lt;span style="color:#000099;"&gt;&lt;img style="FLOAT: right; MARGIN: 0px 0px 10px 10px; CURSOR: hand" alt="" src="http://photos1.blogger.com/blogger/550/1446/320/Unitbath.jpg" border="0" /&gt;&lt;/span&gt;&lt;/em&gt;&lt;/a&gt;&lt;br /&gt;&lt;br /&gt;ಇನ್ನೀಗ ಸ್ನಾನ! ಪಾಶ್ಚಿಮಾತ್ಯ ಶೈಲಿಯಲ್ಲೇ ಎಲ್ಲ ಮುಗಿಸಿ, ಭಾರತೀಯ ಶೈಲಿಯಲ್ಲಿ ಶುಚಿಯಾಗಿ ಹೊರಬಂದೆ.&lt;/p&gt;&lt;p&gt;ವೆಂಕಟ "ಏನಯ್ಯಾ, ಎಲ್ಲ ಅಡ್ಜಸ್ಟ್ ಆಯ್ತಾ?" ಎಂದ.&lt;/p&gt;&lt;p&gt;ನಾನು "ಹ್ಞೂಂ, ಚೆಂಬು ಇತ್ತಲ್ಲ" ಎಂದೆ. &lt;/p&gt;&lt;p&gt;ಇಬ್ಬರೂ ಬಿದ್ದು ಬಿದ್ದು ನಕ್ಕೆವು. ಸ್ನಾನವಾಯಿತು; ಇನ್ನು ಸಂಧ್ಯಾವಂದನೆ - ತಂದಿದ್ದ ವಿಭೂತಿ, ಕುಂಕುಮ, ದೇವರಪಟ ಎಲ್ಲ ಹೊರತೆಗೆದು ಸಂಧ್ಯಾವಂದನೆ, ಪೂಜೆ-ಪುರಸ್ಕಾರ ಎಲ್ಲ ಮುಗಿಸಿದೆ. ವೆಂಕಟ ಅಡಿಗೆ ಸಿದ್ಧಮಾಡುತ್ತಿದ್ದ. ನನ್ನ ಪೂಜೆಯ ಸಂಕಲ್ಪ ಕೇಳಿ ಬಿದ್ದು ಬಿದ್ದು ನಕ್ಕಿದ್ದ ಕಚೇರಿಯ ಮಿತ್ರರ ನೆನಪಾಯಿತು. (ಪೂಜಾದಿ ಕಾರ್ಯಗಳಿಗೆ ಮುನ್ನ ದೇಶ, ಕಾಲ, ವರ್ತಮಾನ, ಧ್ಯೇಯ ಹೇಳಿಕೊಂಡು ಪಂಚಾಂಗದ ತಿಥಿ-ವಾರ ಇತ್ಯಾದಿಗಳನ್ನು ಹೇಳಿ, ಆ ದಿನದ ಪೂಜಾದಿಗಳನ್ನು ಮಾಡಬೇಕು. ಈ ವಿಧಾನಕ್ಕೆ 'ಸಂಕಲ್ಪ' ಎನ್ನುತ್ತಾರೆ.) ಸಂಸ್ಕೃತಭಾಷೆಯಲ್ಲಿ ಸಂಕಲ್ಪ ಹೇಳುವುದೇ ರೂಢಿಯಾದ್ದರಿಂದ, ನಾನು"&lt;span style="color:#000099;"&gt;ಶುಭೇ ಶೋಭನೇ ಮುಹೂರ್ತೇ....... ಜಂಬೂದ್ವೀಪೇ, ಭರತವರ್ಷಸ್ಯ ಈಶಾನ್ಯದಿಗ್ಭಾಗೇ, ಸಾಗರೋತ್ತರದೇಶೇ, ಜಪಾನ್ ರಾಷ್ಟ್ರೇ, ಮುಖ್ಯದ್ವೀಪೇ, ಓಸಾಕಾ ನಗರ್ಯಾಂ ಯೋದೋ ನದೀತಟೇ[ತೋಕ್ಯೋ ಆಗಿದ್ದಲ್ಲಿ ಸುಮಿದಾ ನದ್ಯಾಃ ತೀರೇ, ಫುಜಿ ಪರ್ವತಸ್ಯ ಪೂರ್ವಭಾಗೇ ಎಂದು ಸೇರಿಸಲು ಸಿದ್ಧವಿದ್ದೆ ಬಿಡಿ].. ಶಾಲಿವಾಹನಶಕೇ, ಬೌದ್ಧಾವತಾರೇ, ಬುದ್ಧಕ್ಷೇತ್ರೇ&lt;/span&gt;...." ಇತ್ಯಾದಿ ಮುಂದುವರೆಸಿದ್ದಾಗ ನಾರಾಯಣ ಹೊಳ್ಳ, ಗುರುರಾಜಾಚಾರಿ ಬಿದ್ದು ಬಿದ್ದು ನಕ್ಕು ಕುಡಿಯುತ್ತಿದ್ದ ಕಾಫಿ ಕಕ್ಕಿ ಗೊಳ್ಳೆಂದು ಎಲ್ಲ ನಕ್ಕಿದ್ದು ನೆನಪಾಯಿತು. ಈಗದೇ ಸಂಕಲ್ಪ ಹೇಳಿಕೊಂಡು ನಾನೇ ನಕ್ಕೆ. &lt;/p&gt;&lt;p&gt;ನಂತರ ಅಮ್ಮ ಮಾಡಿಕೊಟ್ಟಿದ್ದ ಚಪಾತಿ ತಿಂದೆ. ವೆಂಕಟನ ಅಡಿಗೆ ಇನ್ನೂ ಸಿದ್ಧವಿರಲಿಲ್ಲ. ನಂತರ ಸ್ವಲ್ಪ ನಿದ್ದೆ ಮಾಡೋಣವೆನ್ನುವಷ್ಟರಲ್ಲಿ ನರೇಂದ್ರ ಬಂದವನೇ, "ನಾಳೆ ನಾನು ನಗೋಯಾ ಗೆ ಹೊರಡುತ್ತೇನೆ; ಅಷ್ಟರಲ್ಲಿ ಪ್ರಾಜೆಕ್ಟಿನ ವಿಚಾರ ಎಲ್ಲ ಹೇಳುತ್ತೇನೆ ಬಾ" ಎಂದು ಅವನ ಮನೆಗೆ ಕರೆದುಕೊಂಡು ಹೋದ. ನಂತರ ಕುಮಾರ್ ಸಿಕ್ಕಿದ. ರಾತ್ರಿಯಾಯಿತು; ಬೆಳಗ್ಗೆ ಧಿಮಾಕಿನಿಂದ ಓಡಿಹೋದ ಮಿತ್ರರೆಲ್ಲರೂ ಸಿಕ್ಕರು. ಸದ್ಯ, ಯಾರೂ ನನ್ನನ್ನು ಮರೆತಿರಲಿಲ್ಲ. ಆದರೂ ನಾ ಕಲಿತ ಪಾಠ-೧ ಸುಳ್ಳಾಗಿರಲಿಲ್ಲ. ಅಷ್ಟರಲ್ಲಿ ಒಳಗೆ ಬಂದ ಗೋವರ್ಧನ "ಗುರುವೇ, ಎಲ್ಲಿ ಮನೆ ತಿಂಡಿ?" ಎನ್ನುತ್ತಾ ಕೈಚಾಚಿದ. ಒಬ್ಬೊಬ್ಬರೇ ಒಳಬಂದು ನಗುನಗುತ್ತಾ ಮಾತನಾಡಿಸಿದರು! ನನಗೆ ಹೋದ ಜೀವ ಬಂದಂತಾಯ್ತು. ರಾತ್ರಿ ೧೨ ಆದರೂ ಮಾತು-ಹರಟೆ ಮುಗಿಯಲಿಲ್ಲ. ನಾನು ಅಟ್ಟ ಹತ್ತಿ ಮಲಗಿದರೂ ಕೆಳಗೆ ವೆಂಕಟನನ್ನು ಗೇಲಿ ಮಾಡುತ್ತಾ ಕಾಡು ಹರಟೆ ಸಾಗಿತ್ತು. ನಾನು ದೀಪ ಆರಿಸಿ ಮಲಗಿದೆ; ಬೆಳಿಗ್ಗೆ ಬೇಗ ಏಳಬೇಕಿತ್ತು. ಪಾಠ-೧: ನನ್ನ ಕೆಲಸ ನನಗೆ; ಬೇರೆಯವರ ಸುದ್ದಿ ನನಗೇಕೆ? ಮನೆಯ ತಿಂಡಿ ತಿಂದ ನಂತರ ಎಲ್ಲ ಮೆಲ್ಲನೆದ್ದು ಹೊರಟರು. ವೆಂಕಟನೂ ನಕ್ಕು ಮಲಗಿದ. ನಾಳೆ ಕಚೇರಿಯ ಎಲ್ಲರಿಗೆ ನನ್ನ ಪರಿಚಯ ಆಗಬೇಕಿತ್ತು!&lt;br /&gt;&lt;/p&gt;&lt;p&gt;(ಸಶೇಷ)&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/29152559-114950998919768247?l=kannadaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaputa.blogspot.com/feeds/114950998919768247/comments/default' title='Post Comments'/><link rel='replies' type='text/html' href='http://www.blogger.com/comment.g?blogID=29152559&amp;postID=114950998919768247' title='0 Comments'/><link rel='edit' type='application/atom+xml' href='http://www.blogger.com/feeds/29152559/posts/default/114950998919768247'/><link rel='self' type='application/atom+xml' href='http://www.blogger.com/feeds/29152559/posts/default/114950998919768247'/><link rel='alternate' type='text/html' href='http://kannadaputa.blogspot.com/2006/06/blog-post_114950998919768247.html' title='೨.೩. ಜಪಾನಿನಲ್ಲಿ ಮೊದಲದಿನ - ಸ್ನಾನ'/><author><name>Buddha</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-29152559.post-114950919004543132</id><published>2006-06-05T20:43:00.000+09:00</published><updated>2006-06-08T10:03:03.623+09:00</updated><category scheme='http://www.blogger.com/atom/ns#' term='ನನ್ನ ಜಪಾನ್ ಪ್ರವಾಸ'/><title type='text'>೨.೨. ಜಪಾನಿನಲ್ಲಿ ಮೊದಲ ದಿನ : ಮನೆ</title><content type='html'>&lt;div align="center"&gt;&lt;strong&gt;&lt;u&gt;ನನ್ನ ಜಪಾನ್ ಪ್ರವಾಸ : &lt;span style="color:#000099;"&gt;೨.೨. ಜಪಾನಿನಲ್ಲಿ ಮೊದಲ ದಿನ : ಮನೆ&lt;/span&gt;&lt;/u&gt;&lt;/strong&gt;&lt;/div&gt;&lt;br /&gt;&lt;br /&gt;"ತಡಿಯೋ, ನೋಡೀಗ" ಎಂದವನೇ "&lt;em&gt;ದೊಚಿರಮೋ ನಿಕುನಾಶಿದೆ ಒನೆಗಾಯ್ ಶಿಮಾಸ್&lt;/em&gt;"[ಎರಡನ್ನೂ ಮಾಂಸರಹಿತವಾಗಿ ದಯಪಾಲಿಸಿ] ಎಂದ!&lt;br /&gt;ಅಲ್ಲಿದ್ದ ಕೌಂಟರಿನ ಹುಡುಗಿ ಆಶ್ಚರ್ಯದಿಂದ ಕಣ್ಣರಳಿಸಿ ನಮ್ಮನ್ನು ನೋಡಿ ಒಂದು ಕ್ಷಣ ಏನೂ ತೋಚದೆ "&lt;em&gt;ಶೋ ಶೋ ಒಮಾಚಿಕುದಸಾಯ್&lt;/em&gt;"[ದಯವಿಟ್ಟು ಸ್ವಲ್ಪ ಕಾದಿರಿ] ಎಂದವಳೇ ಒಳಗೆ ಓಡಿ, ಹಿರಿಯನೊಬ್ಬನನ್ನು ಕೇಳಿದಳು. ನಾನು ವೆಂಕಟನ ಮುಖ ನೋಡಿದೆ! ಅವನು ನಿರ್ಲಿಪ್ತನಾಗಿದ್ದ! ಒಳಗಿನಿಂದ ಗಂಡು ದನಿಯೊಂದು&lt;br /&gt;"&lt;em&gt;ಹಾಂಬಾಗಾ ಫುತಾತ್ಸು ಮೀತೊ ಕತ್ತೊ&lt;/em&gt;..."[ಹ್ಯಾಂಬರ್ಗರ್ ಎರಡು ಮೀಟ್ ಕಟ್] ಎಂದದ್ದೂ, ಅದಕ್ಕೆ ಅಲ್ಲಿದ್ದ ಹುಡುಗಿಯರು ಪುಸಕ್ಕನೆ ನಕ್ಕಿದ್ದೂ, ಮುಸಿಮುಸಿ ನಗುತ್ತಾ ನಮ್ಮೆಡೆ ಕಿರುನೋಟ ಬೀರಿದ್ದೂ ಆಯಿತು. ವೆಂಕಟ ಮುಗುಳ್ನಗುತ್ತಾ, "ಇವೆಲ್ಲಾ ಇದ್ದದ್ದೇ" ಎನ್ನುತ್ತಾ, ಬಳಿ ಬಂದ ತಿನಿಸನ್ನೆತ್ತಿಕೊಂಡು ಮೇಜಿಗೆ ನಡೆದ! ಆದರೂ ತಿನ್ನಲು ಅನುಮಾನ; ತೆರೆದು ನೋಡಿದೆ. ಒಳಗಿದ್ದುದು ಎರಡು ಬರ್ಗರ್ ಬನ್ನುಗಳ ಮಧ್ಯೆ ಸೌತೆಕಾಯಿ, ಟೊಮೆಟೊ ಸಾಸ್ ಹಾಕಿ ಮಾಡಿದ ಸ್ಯಾಂಡ್ವಿಚ್ಚು! ಗಬಗಬನೆ ತಿಂದು ತಂಪು ಕೋಲಾ ಕುಡಿದೆ. ಜೀವಸಂಚಾರವಾಯಿತು. ಮನೆಗೆ ಹೊರಟೆವು.&lt;br /&gt;&lt;br /&gt;ದಾರಿಯುದ್ದಕ್ಕೂ, ರೈಲಿನಲ್ಲೂ ಅದೂ ಇದೂ ಮಾತಾಡುತ್ತಾ, ಪ್ರಯಾಣದ ವಿವರವನ್ನೆಲ್ಲ ಹೇಳಿದೆ. ಅವರಿಬ್ಬರೂ ಕೆಲಸದ ವಿಚಾರ ಮಾತನಾಡುತ್ತಿದ್ದರು; ನಾನು ಹ್ಞೂಂಗುಟ್ಟಿದೆ. ಪಾಪ, ವೆಂಕಟ ನನ್ನ ಲಗೇಜನ್ನು ರೈಲು ನಿಲ್ದಾಣದಿಂದ ಅವನೇ ಹೊತ್ತು ಅಲ್ಲ ಎಳೆದು ತಂದ. ನಾನು ಕೈಚೀಲ ಹಿಡಿದು ಬಂದೆ. ನಿಲ್ದಾಣದಿಂದ ಮನೆಗೆ ಸುಮಾರು ೧೦ ನಿಮಿಷ; ಈಗಲೇ ನಾನು ಜಪಾನಿನ ಹವೆ ಸವಿದದ್ದು. ಏಕೆಂದರೆ ಅಲ್ಲಿಯವರೆಗೂ ವಿಮಾನ ನಿಲ್ದಾಣ - ರೈಲುನಿಲ್ದಾಣ - ರೈಲು ಎಲ್ಲವೂ ಹವಾನಿಯಂತ್ರಿತ! ಮಾರ್ಚ್ ತಿಂಗಳು ಮುಗಿಯುತ್ತಿದ್ದರೂ ಬಿಸಿಲು ಅಷ್ಟೇನೂ ಬಿಸಿಯೆನಿಸಲಿಲ್ಲ.&lt;br /&gt;ಎಲ್ಲೋ ತಿರುಗಿದೆವು; ಎಲ್ಲೋ ನಡೆದೆವು; ಎಡಬಲ ಏ.......ನೂ ಗೊತ್ತಾಗಲಿಲ್ಲ. ನಮ್ಮ ಸೌಧದ ಬಳಿ ಬರುತ್ತಿದ್ದಾಗಲೇ ೪-೫ ಜನ ಭಾರತೀಯರು ಕಂಡರು. ಎಲ್ಲಾ ಪರಿಚಯದವರೇ! "ಹಲೋ! ಯಾವಾಗ ಬಂದೆಯೋ" ಎಂದೇನೂ ಕೇಳದೆ, ಅವರ ಪಾಡಿಗೆ "ಬನ್ರೋ, ಬನ್ರೋ" ಎಂದುಕೊಂಡು ಎಲ್ಲೋ ಹೊರಟಿದ್ದರು. ಎಲ್ಲಾ ನನ್ನ ಕಚೇರಿಯವರೇ, ಬೆಂಗಳೂರಿನಲ್ಲಿ ಆರು ತಿಂಗಳು ನನ್ನ ಜೊತೆಯಿದ್ದವರೇ, ಕರ್ನಾಟಕದ ಶುದ್ಧ ಕನ್ನಡಿಗರೇ! ಪಾಠ-೧: "&lt;em&gt;ಜಪಾನಿನಲ್ಲಿ ನನ್ನ ಕೆಲಸ ನನಗೆ; ಬೇರೆಯವರ ಸುದ್ದಿ ನನಗೇಕೆ&lt;/em&gt;?" ನನಗೆ ನಂಬಲಾಗಲಿಲ್ಲ! ಸ್ವಾಗತಮಾಡಿ ಆರತಿಯೆತ್ತುವುದೇನೂ ಬೇಕಿಲ್ಲ; ಕೇವಲ ತುಟಿಬಿರಿದು ಮುಗುಳ್ನಕ್ಕಿದ್ದರೂ ಸಾಕಿತ್ತು. ವೆಂಕಟ ನನ್ನೆಡೆ ನೋಡಿ ನಕ್ಕ; ನನಗರ್ಥವಾಯಿತು! ಸ್ವಲ್ಪ ದುರಹಂಕಾರಿಗಳಾಗಿದ್ದರೆಂಬುದು ಸತ್ಯ; ಏಕೋ ನಾನರಿಯೆ. ಅದಕ್ಕೆ ನಾನಿಟ್ಟ ಹೆಸರು - 'ವಿದೇಶೀ ಮದ' - ಏಕೆಂದು ನನಗೂ ಅರ್ಥವಾಗಿಲ್ಲ ಬಿಡಿ.&lt;br /&gt;&lt;br /&gt;&lt;a href="http://photos1.blogger.com/blogger/550/1446/1600/Apaato.jpg"&gt;&lt;img style="FLOAT: right; MARGIN: 0px 0px 10px 10px; CURSOR: hand" alt="" src="http://photos1.blogger.com/blogger/550/1446/320/Apaato.jpg" border="0" /&gt;&lt;/a&gt;&lt;br /&gt;&lt;em&gt;&lt;span style="color:#000099;"&gt;(ವಿಕಿಪೀಡಿಯ ಚಿತ್ರ: ಜಪಾನಿನ ಮನೆಗಟ್ಟಡ - ಅಪಾತೊ)&lt;/span&gt;&lt;/em&gt;&lt;br /&gt;ಅಷ್ಟರಲ್ಲಿ ವೆಂಕಟ LeoPalace(ಸಿಂಹದರಮನೆ!)ಸೌಧದ ಮಹಡಿಗೆ ಕರೆದೊಯ್ದ; ನನಗಾಗಿ ಮಹಡಿಯ ಅಟ್ಟದ ಕೋಣೆ .. ಅಲ್ಲಲ್ಲ .. ಕೋಣೆಯ ಅಟ್ಟ ಸಿದ್ಧವಿತ್ತು! ನನಗೆ ಆಶ್ಚರ್ಯ ಕಾದಿತ್ತು! ಮನೆಯ ವಿಸ್ತೀರ್ಣ ಕೇವಲ ೪ ಮೀ ಅಗಲ, ಉದ್ದ ೫ ಮೀ. ಅಷ್ಟರಲ್ಲೇ ಅಡಿಗೆಮನೆ, ಬಚ್ಚಲು, ಶೌಚಾಲಯ, ಕಪಾಟು(ವಾರ್ಡ್ರೋಬು), ಅಟ್ಟ, ಏಣಿ, ಹವಾನಿಯಂತ್ರಕ, ತಂಗಳುಪೆಟ್ಟಿಗೆ-ಶೀತಪೆಟ್ಟಿಗೆ, ಉಷ್ಣವಿಕಿರಣದ ಬಿಸಿಪೆಟ್ಟಿಗೆ(ಮೈಕ್ರೋವೇವ್ ಓವನ್), ದೂರದರ್ಶನ - ಸಕಲವೂ ಇತ್ತು! ಹೊರಗೆ ಸ್ವಲ್ಪ ಓಣಿಯಿದ್ದು, ಬಟ್ಟೆ ಹರವಲು ಜಾಗವೂ, ಒಗೆತಯಂತ್ರ(ವಾಷಿಂಗ್ ಮಷೀನ್)ವೂ ಇತ್ತು! ನಾವಿರುವುದೂ ಅಲ್ಲಿಯೇ ಎಂಬುದು ಗೊತ್ತಿರುವುದೇ ಬಿಡಿ!&lt;br /&gt;"ಏನೋ ಇಷ್ಟು ಚಿಕ್ಕದಾಗಿದೆ!" ಎಂದೆ.&lt;br /&gt;ವೆಂಕಟ "ಲೋ! ಇದು ಓಸಾಕಾ; ಬೆಂಗಳೂರಲ್ಲ! ಇದಕ್ಕೇ ಬಾಡಿಗೆ ೭೦,೦೦೦ ಯೆನ್" ಎಂದ.&lt;br /&gt;ತಪ್ಪಿಲ್ಲ ಸ್ವಾಮೀ! ಖಂಡಿತವಾಗಿ ನೀವು ಓದಿದ್ದೆಲ್ಲಾ ಹದಿನಾರಾಣೆ ಸತ್ಯ! ಎಪ್ಪತ್ತು ಸಾವಿರ ಯೆನ್! ವರ್ಷಕ್ಕಲ್ಲ; ತಿಂಗಳಿಗೆ! ನಾನು ಬೆವೆತುಬಿಟ್ಟೆ. ತಲೆಯೊಳಗೆ ಲೆಕ್ಕಾಚಾರ ಶುರುವಾಯಿತು. Mc Donald'sನ ತಿಂಡಿಯ ದುಡ್ಡನ್ನೂ ಅವನೇ ಕೊಟ್ಟಿದ್ದ. ರೈಲಿನ ಟಿಕೆಟನ್ನೂ ಅವನೇ ಕೊಂಡಿದ್ದ.&lt;br /&gt;&lt;br /&gt;ಕೇಳಿಯೇ ಬಿಟ್ಟೆ:"ಬೆಳಿಗ್ಗೆ ತಿಂಡಿಯದು ಎಷ್ಟಾಯಿತು?"&lt;br /&gt;"ಅದಾ, ೩೫೦ ಯೆನ್"&lt;br /&gt;"ರೈಲಿನ ಟಿಕೆಟ್?"&lt;br /&gt;"ಅದು ೨೯೦ ಯೆನ್; ಇರಲಿ ಕೊಡುವೆಯಂತೆ"&lt;br /&gt;ಒಂದು ಸ್ಯಾಂಡ್ವಿಚ್, ಆಲೂ ಚಿಪ್ಸ್, ಕೋಲಾಗೆ ಮು...ಮುನ್ನೂರೈವತ್ತು!? ತಲೆ ಗಿರ್ರೆ‍ಂದಿತು! ಭಯ ಶುರುವಾಯಿತು; ಕೇಳಿಯೇ ಬಿಟ್ಟೆ - "ಇಲ್ಲಿ ದುಡ್ಡು ಉಳಿಸಬಹುದಾ?" ವೆಂಕಟ ನಕ್ಕ.&lt;br /&gt;"ನಿನ್ನ ಸಂಬಳದಲ್ಲಿ ಕನಿಷ್ಠ ಒಂದೂವರೆ ಲಕ್ಷ ಕೈಸೇರುತ್ತದೆ; ಸ್ವಲ್ಪ ನೋಡಿಕೊಂಡರೆ ಉಳಿಸಬಹುದು" ಎಂದ.&lt;br /&gt;ಹಲ್ಲುಕಿರಿದು "ಹೆಹ್ಹೆಹ್ಹೆ" ಎಂದೆ. ಒಂದೂವರೆ ಲಕ್ಷದಲ್ಲಿ ಅರ್ಧ ಬಾಡಿಗೆಗೇ ಹೋದರೆ ಎಂದು ಬೆವರೊರೆಸಿಕೊಳ್ಳುತ್ತಿದ್ದ ನನ್ನನ್ನು ಕಂಡ ವೆಂಕಟ "ಸ್ನಾನಮಾಡಿ ಬಾ ಹೋಗೋ" ಎಂದ. ಅಲ್ಲಿವರೆಗೆ ನನ್ನ ಮಾತುಗಳಿಗೆ ಮುಸಿಮುಸಿ ನಗುತ್ತಿದ್ದ ನರೇಂದ್ರ ತರಲೆ ದನಿಯಲ್ಲಿ "ಈ ಬಚ್ಚಲಿಗೆ ಚಿಲಕವೇನೋ ಇದೆ; ಆದರೆ ಹೊರಗಿಂದಲೂ ತೆರೆಯಬಹುದು; ಜೋಪಾನವಾಗಿ ಹೋಗಪ್ಪಾ" ಎಂದು ಕೀಟಲೆ ಮಾಡಿದ. ನಾನು ನಗುತ್ತಾ ಬಚ್ಚಲುಮನೆಯ ಪ್ಲಾಸ್ಟಿಕ್ ಬಾಗಿಲು ಸರಿಸಿದೆ... ಅಲ್ಲ ಮಡಿಸಿದೆ. ಒಳಗೆ ಅಡಿಯಿಟ್ಟವನೇ "ಹ್ಞಾಂ! ಇದೇನೋ..." ಎಂದೆ!&lt;br /&gt;&lt;br /&gt;(ಸಶೇಷ)&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/29152559-114950919004543132?l=kannadaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaputa.blogspot.com/feeds/114950919004543132/comments/default' title='Post Comments'/><link rel='replies' type='text/html' href='http://www.blogger.com/comment.g?blogID=29152559&amp;postID=114950919004543132' title='0 Comments'/><link rel='edit' type='application/atom+xml' href='http://www.blogger.com/feeds/29152559/posts/default/114950919004543132'/><link rel='self' type='application/atom+xml' href='http://www.blogger.com/feeds/29152559/posts/default/114950919004543132'/><link rel='alternate' type='text/html' href='http://kannadaputa.blogspot.com/2006/06/blog-post_114950919004543132.html' title='೨.೨. ಜಪಾನಿನಲ್ಲಿ ಮೊದಲ ದಿನ : ಮನೆ'/><author><name>Buddha</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-29152559.post-114950772718347291</id><published>2006-06-05T20:33:00.000+09:00</published><updated>2006-06-08T10:04:49.483+09:00</updated><category scheme='http://www.blogger.com/atom/ns#' term='ನನ್ನ ಜಪಾನ್ ಪ್ರವಾಸ'/><title type='text'>೨.೧.ಜಪಾನಿನಲ್ಲಿ ಮೊದಲದಿನ : ತಿಂಡಿ!</title><content type='html'>&lt;div align="center"&gt;&lt;strong&gt;ನನ್ನ ಜಪಾನ್ ಪ್ರವಾಸ: &lt;span style="color:#000099;"&gt;೨.೧.ಜಪಾನಿನಲ್ಲಿ ಮೊದಲದಿನ : ತಿಂಡಿ!&lt;/span&gt;&lt;/strong&gt;&lt;/div&gt;&lt;p&gt;&lt;br /&gt;ಸರಿಯಾಗಿ ಬೆಳಿಗ್ಗೆ ೮:೦೦ ಗಂಟೆ: ಬಸ್ಸು ನಿಂತಿತು; ನಿದ್ದೆ ಬಿಟ್ಟೆದ್ದೆ. ಪ್ರಯಾಣಪೂರ್ತಿ ನಿದ್ದೆಯಿಲ್ಲ; ಸಾಲದ್ದಕ್ಕೆ ಜಪಾನ್ ಸಮಯ ಬೇರೆ ಮೂರೂವರೆ ಗಂಟೆ ಮುಂದೆ! OCATನಲ್ಲಿ ಬಂದಿಳಿದು ಸರಂಜಾಮು ಪೆಟ್ಟಿಗೆ ಇಳಿಸಿದ್ದನ್ನು ತೆಗೆದುಕೊಂಡೆ, ಅಲ್ಲೇ ಸ್ವಲ್ಪ ಕುಳಿತೆ; ಮುಂದಕ್ಕೆ ದಾರಿ ಗೊತ್ತಿರಲಿಲ್ಲ. ೧೫ ನಿಮಿಷ ಅಲ್ಲೇ ಶತಪಥ ಹಾಕಿದೆ. ಅಂತೂ ಕಂಡರು ನರೇಂದ್ರ - ವೆಂಕಟರು!&lt;br /&gt;"ಸ್ವಾಗತ ಜಪಾನಿಗೆ" ಎಂದು ಕೈ ಕುಲುಕುತ್ತಾ ಇಬ್ಬರೂ ಎಲ್ಲೋ ಕರೆದೊಯ್ದರು. ಎಲ್ಲೋ ಹತ್ತಿದೆವು; ಎಲ್ಲೋ ಇಳಿದೆವು; ಅಂತೂ ತಲುಪಿದ್ದು ಅದೇ ಸಂಕೀರ್ಣದ ಎರಡನೇ ಅಂತಸ್ತಿನ ಕೆಳಮಾಳಿಗೆಯ ರೈಲುನಿಲ್ದಾಣಕ್ಕೆ! ಪಕ್ಕದಲ್ಲೇ ಇದ್ದ Mc Donald's ಉಪಾಹಾರಗೃಹ ಕಂಡ ತಕ್ಷಣವೇ ವೆಂಕಟನಿಗೆ ನನ್ನ ಹೊಟ್ಟೆಯ ನೆನಪಾಯಿತು.&lt;br /&gt;&lt;span style="color:#000099;"&gt;&lt;em&gt;(ವಿಕಿಪೀಡಿಯ ಚಿತ್ರ: ಜಪಾನಿನ ಹ್ಯಾಂಬರ್ಗರ್)&lt;br /&gt;&lt;/em&gt;&lt;/span&gt;&lt;a href="http://photos1.blogger.com/blogger/550/1446/1600/Hamburger.jpg"&gt;&lt;img style="FLOAT: right; MARGIN: 0px 0px 10px 10px; CURSOR: hand" alt="" src="http://photos1.blogger.com/blogger/550/1446/320/Hamburger.jpg" border="0" /&gt;&lt;/a&gt;&lt;br /&gt;&lt;br /&gt;"ಲೇಯ್ ಹಸಿವು ಆಗಿದೆಯೇನೋ? ನಡಿ ಏನಾದರೂ ತಿನ್ನೋಣ" ಎಂದ. &lt;/p&gt;&lt;p&gt;ನಾನು ರಾತ್ರಿ ಮಾಡಿದ ವಿಮಾನದೂಟ ಅರಗಿಹೋಗಿತ್ತು. "ನಡೀ.." ಎಂದವನೇ ತಡೆದು ನಿಂತೆ. "ಲೇಯ್, ನಾನು ಸಸ್ಯಾಹಾರಿ ಕಣೋ; ಇಲ್ಲೇನು ಸಿಗತ್ತೋ?" ಎಂದೆ.&lt;br /&gt;ವೆಂಕಟ "ಲೋ, ನಾನೂ Vegಏ ಕಣೋ, ನಡಿ ಎಲ್ಲ ಹೇಳ್ಕೊಡ್ತೀನಿ" ಎಂದ.&lt;br /&gt;ನರೇಂದ್ರ ನಗುತ್ತಾ "ಓಹೋ! ನೀನು ವೆಜ್ಜಾ! ಬಾ! ಬಾ! ಈಗ್ತಾನೆ ಬರ್ತಿದೀಯಾ, ಎಲ್ಲಾ ಗೊತ್ತಾಗತ್ತೆ" ಎಂದು ಸ್ವಲ್ಪ ಒಗಟೊಗಟಾಗಿ ಏನೋ ಹೇಳಿದ.&lt;/p&gt;&lt;p&gt;ನನಗೋ ಮೊದಲೇ ಭಯ; ಅಪ್ಪಟ ಸಸ್ಯಾಹಾರಿ ನಾನು; ಮೊಟ್ಟೆ-ಗಿಟ್ಟೆ ಕೂಡ ದೂರವೇ ಸರಿ. ಹಾಗಿದ್ದೂ ಮೂವರೂ Mc Donald's ಅಂಗಡಿಯೊಳನುಗ್ಗಿದೆವು! ವೆಂಕಟ ನನಗೆ, ಅವನಿಗೆ ಎರಡು ಹ್ಯಾಂಬರ್ಗರ್ ಸೆಟ್ಟು ಹೇಳಿದ!&lt;br /&gt;"ಲೋ! ಅದ್ರಲ್ಲಿ ದನದ ಮಾಂಸ ಇರತ್ತೆ ಕಣೋ...." ಎಂದು ನಾನು ಹೌಹಾರುತ್ತಾ ಹೇಳಿದೆ.&lt;br /&gt;"ತಡಿಯೋ, ನೋಡೀಗ" ಎಂದವನೇ "ದೊಚಿರಮೋ ನಿಕುನಾಶಿದೆ ಒನೆಗಾಯ್ ಶಿಮಾಸ್" ಎಂದ!&lt;br /&gt;&lt;/p&gt;&lt;p&gt;(ಸಶೇಷ)&lt;br /&gt;&lt;br /&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/29152559-114950772718347291?l=kannadaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaputa.blogspot.com/feeds/114950772718347291/comments/default' title='Post Comments'/><link rel='replies' type='text/html' href='http://www.blogger.com/comment.g?blogID=29152559&amp;postID=114950772718347291' title='0 Comments'/><link rel='edit' type='application/atom+xml' href='http://www.blogger.com/feeds/29152559/posts/default/114950772718347291'/><link rel='self' type='application/atom+xml' href='http://www.blogger.com/feeds/29152559/posts/default/114950772718347291'/><link rel='alternate' type='text/html' href='http://kannadaputa.blogspot.com/2006/06/blog-post_114950772718347291.html' title='೨.೧.ಜಪಾನಿನಲ್ಲಿ ಮೊದಲದಿನ : ತಿಂಡಿ!'/><author><name>Buddha</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-29152559.post-114950667435342300</id><published>2006-06-05T19:50:00.000+09:00</published><updated>2006-06-07T11:16:33.810+09:00</updated><category scheme='http://www.blogger.com/atom/ns#' term='ನನ್ನ ಜಪಾನ್ ಪ್ರವಾಸ'/><title type='text'>ನನ್ನ ಜಪಾನ್ ಪ್ರವಾಸ : ೧. ಬಂದಿಳಿದೆ!</title><content type='html'>&lt;div align="center"&gt;&lt;strong&gt;&lt;span style="color:#000099;"&gt;&lt;u&gt;೧. ಬಂದಿಳಿದೆ!&lt;br /&gt;&lt;/u&gt;&lt;/span&gt;&lt;/strong&gt;&lt;/div&gt;&lt;br /&gt;&lt;div align="left"&gt;&lt;br /&gt;ಮಾರ್ಚ್ ೩೧, ಬೆಳಗಿನ ಜಾವ - ಸುಮಾರು ಮಸುಕು ಮಬ್ಬಿನ ನಸುಕು - ವಿಮಾನದಿಂದ ಕಂಡದ್ದು ಇಷ್ಟೇ! ಕೆಳಗೆ ನನ್ನನ್ನು ಸ್ವಾಗತಿಸಲು ಸಿದ್ಧವಾಗಿದ್ದ ದ್ವೀಪರಾಷ್ಟ್ರ ಜಪಾನ್ - ಉದಯರವಿಯ ನಾಡು! ಅತಿಕುತೂಹಲದ ನನ್ನ ವಿಹಂಗಮ ನೋಟಕ್ಕೊಂದು ಮುಗಿಲು ಮಂಪರುಗಳ ತೆರೆ! ಬೆಳಿಗ್ಗೆ ೫:೩೦ಕ್ಕೆ ಜಪಾನಿನ ಪಡುವಣ ವಿಮಾನ ನಿಲ್ದಾಣ - ಕಾನ್ಸಾಯ್ ನಲ್ಲಿ ಬಂದಿಳಿದಾಗ - ನಿಬ್ಬೆರಗಾದೆ! ವಿಶಾ............ಲ ನಿಲ್ದಾಣ, ಸಮುದ್ರದ ಮಧ್ಯದಲ್ಲಿ ಮಾನವನಿರ್ಮಿತ ಅತ್ಯಾಶ್ಚರ್ಯಕರವಾದ ಏರ್ಪೋರ್ಟ್! ಇದೇನು ವಿಮಾನನಿಲ್ದಾಣವೋ, ಭವ್ಯ ಬಂಗಲೆಯ ಮುಂ-ಕಚೇರಿಯೋ, ಮಹಾಸೌಧವೋ ತಿಳಿಯದೆ ಎಲ್ಲರಂತೆ ನಡೆದು ನಾನೂ ಒಳಹೋದೆ; ಸರಂಜಾಮಿನ ಪೆಟ್ಟಿಗೆಗಾಗಿ ಸರತಿಯಲ್ಲಿ ಕಾದು ನಿಂತೆ; ಎರಡೂವರೆ ತಾಸಿನ ಶ್ರೀಲಂಕಾ ಮಿತ್ರನೂ ಬಂದು ನಿಂತ. ಕಸ್ಟಮ್ಸ್ ಇತ್ಯಾದಿ ಪರೀಕ್ಷಾವಿಧಿಗಳನ್ನು ಮುಗಿಸಲು ಅರ್ಜಿ ತುಂಬಹೊರಟೆವು. ಪಾಪ! ಶ್ರೀಲಂಕಾದವನಿಗೂ ನನ್ನಂತೆಯೇ ಹೊಸತು! ಮುಖ-ಮುಖ ನೋಡಿಕೊಂಡೆವು!&lt;br /&gt;&lt;br /&gt;ನಮ್ಮ ಕಷ್ಟ ಅರ್ಥವಾದ ಅಲ್ಲಿನ ಜಪಾನೀ ಅಧಿಕಾರಿಯೊಬ್ಬ ಅಭ್ಯಾಸವಿಲ್ಲದ ಇಂಗ್ಲಿಷಿನಲ್ಲಿ ಕಷ್ಟಪಟ್ಟು ಅರ್ಜಿತುಂಬುವ ವಿಧಾನವನ್ನು ಹೇಳಿದ. ನಾನು ಅರ್ಥವಾಯಿತೆಂದು "&lt;em&gt;ಹಯ್, ಹಯ್&lt;/em&gt;" ಎಂದೆ. ಈಗ ಅಧಿಕಾರಿಗೆ ಅಚ್ಚರಿ!&lt;br /&gt;"&lt;em&gt;ನಿಹೋಂಗೋ ದೇಕಿಮಾಸ್ಕಾ&lt;/em&gt;?"[ಜಪಾನೀಭಾಷೆ ಬರುತ್ತದೆಯೇ?] ಎಂದ.&lt;br /&gt;ನಾನೂ ತಲೆಯಾಡಿಸಿ ಅವನಂತೆಯೇ ಬಗ್ಗಿ "&lt;em&gt;ಹಯ್‍ ದೇಕಿಮಾಸು&lt;/em&gt;"[ಹೌದು, ಬರುತ್ತದೆ]ಎಂದೆ.&lt;br /&gt;ಈಗವನು ಜಪಾನೀ ಭಾಷೆಯಲ್ಲಿಯೇ ಎಲ್ಲವನ್ನೂ ಹೇಳಿದ; ನಾನು ಜಪಾನೀಭಾಷೆಯಲ್ಲಿ ಮಾತನಾಡಿದ್ದು ಕಂಡು ಲಂಕೆಯ ಮಿತ್ರನಿಗೆ ಎಲ್ಲಿಲ್ಲದ ಖುಷಿ! ಅಲ್ಲಿದ್ದವರಂತೂ ಎಲ್ಲಾ ನಮ್ಮನ್ನೇ ನೋಡುತ್ತಿದ್ದುದು ನನಗೇಕೋ ಸ್ವಲ್ಪ ಮುಜುಗರವಾಯಿತು. ನಾವಿಬ್ಬರೂ ಅರ್ಜಿಯನ್ನು ತುಂಬಿ, ಪಾಸ್‍ಪೋರ್ಟಿನಲ್ಲಿ ಜಪಾನ್ ವಿದೇಶಾಂಗ ಸಚಿವಾಲಯದ ಮುದ್ರೆ ಬಿದ್ದಾಗ ಅಬ್ಬಾ! ಗೆದ್ದೆವೆಂಬ ಖುಷಿ; ಪೆಟ್ಟಿಗೆ ಸಿದ್ಧವಾಗಿತ್ತು! ತರಲೆಯೇ ಇರಲಿಲ್ಲ; ಇದ್ದದ್ದೇ ಎರಡು ಪೆಟ್ಟಿಗೆಗಳು (ನನ್ನದು - ಶ್ರೀಲಂಕಾದವನದು) - ಮಿಕ್ಕವರೆಲ್ಲಾ ಆಗಲೇ ಹೊರಟುಹೋಗಿದ್ದರು. ಶ್ರೀಲಂಕಾದವನು ಇಲ್ಲಿಗೆ ಓದಲು ಬಂದವನಂತೆ; ತನ್ನ ಸಂಬಂಧಿಕರು ಇಲ್ಲಿಗೇ ಬರುತ್ತಾರೆಂದು ಕಾದು ನಿಂತ. ನಾನು ನನ್ನ 'ಸಂಬಂಧಿಕರಿಗೆ' ಫೋನಾಯಿಸಿ, ನಾನೇ ಬರುತ್ತೇನೆಂದು ಹೇಳಬೇಕಿತ್ತು. ಆಗ ಕಂಡಳು - &lt;strong&gt;&lt;em&gt;ಉಕೆತ್ಸುಕೆ &lt;/em&gt;&lt;/strong&gt;[ಸ್ವಾಗತಕಚೇರಿ]ಯ ಹುಡುಗಿ(?)......&lt;br /&gt;&lt;br /&gt;"&lt;em&gt;ಅನೋ, ಸುಮಿಮಸೆನ್; ಕೊಕೊಕರ ದೆನ್ವಾಶಿತಾಯಿನ್‍ದೇಸುಗಾ&lt;/em&gt;....." [ಕ್ಷಮಿಸಿ, ಇಲ್ಲಿಂದ ದೂರವಾಣಿ ಮಾಡಬೇಕಿತ್ತಲ್ಲಾ...] ಎಂದು ಅವಳನ್ನು ಕೇಳಿದೆ. ಫೋನ್‍ಕಾರ್ಡ್ ಕೊಳ್ಳಲು ಹೇಳಿದಳು. ನನಗೆ ಅದೇನೆಂದೇ ಗೊತ್ತಿರಲಿಲ್ಲ; ಮತ್ತೆ ಕೇಳಿದೆ. ಆಕೆಗೇನೋ ಖುಷಿ! ವಿದೇಶೀಯನೊಬ್ಬ ಅವಳ ಭಾಷೆಯಲ್ಲಿ ಮಾತಾಡಿದನಲ್ಲಾ ಎಂದಿರಬಹುದು - ಬಹಳ ಸಹಾಯ ಮಾಡಿದಳು. ಅಲ್ಲಿಂದ ದೂರವಾಣಿ ಕರೆಮಾಡಿ ಮಿತ್ರರಿಗೆ ಬೆಳಗಿನ ಗಂಟೆ ಮೊಳಗಿಸಿದೆ. ಆಕಳಿಸುತ್ತಾ ಫೋನೆತ್ತಿದ ಅವರು 'OCAT ಗೆ ಬಾ; ಅಲ್ಲಿಗೆ ನಾವೂ ಬರುತ್ತೇವೆ' ಎಂದು ಫೋನಿಟ್ಟರು. ಈಗ ಶುರು ನನ್ನ ಭೂಪ್ರವಾಸ! ನಿಲ್ದಾಣ ೧೧ರಲ್ಲಿ ಬೆಳಿಗ್ಗೆ &lt;strong&gt;ನಾಂಬ-OCAT&lt;/strong&gt;[Osaka City Air Terminal]ಗೆ ಬಸ್ಸು ಸಿದ್ಧವಿತ್ತು; ಟಿಕೆಟ್ ಕೊಡುವವರಾರೂ ಇರಲಿಲ್ಲ. ತಕ್ಷಣ ಹೊಳೆಯಿತು - ಇಲ್ಲಿ ಅದಕ್ಕೂ ಯಂತ್ರವಿದೆಯೆಂದು! ಓಡಿದೆ - ನನ್ನ ಮುಂದೆ ನಿಂತು ಟಿಕೆಟ್ ಕೊಂಡವನನ್ನು ವಿಚಾರಿಸಿ ನಾನೂ ಕೊಂಡೆ! ಅಯ್ಯಯ್ಯಪ್ಪ! ಆಗ ಅರ್ಥವಾಯಿತು ನನ್ನ ಜಪಾನೀಭಾಷಾಜ್ಞಾನ ಏನೇನೂ ಸಾಲದೆಂದು. ಟಿಕೆಟ್ ಯಂತ್ರದ ಮೇಲೆ ಬರೆದಿದ್ದ &lt;strong&gt;ಕಾಂಜಿ&lt;/strong&gt;(ಚೀನೀ ಅಕ್ಷರಗಳು)ಯ ಮುಕ್ಕಾಲುಭಾಗ ನಾನು ನೋಡಿಯೇ ಇರಲಿಲ್ಲ; ಕಲಿತ ೧೦೦೦ ಕಾಂಜಿ ಯಾವುದಕ್ಕೂ ಸಾಲದೆಂದು ಭಯವಾಯಿತು. ಬಸ್ಸಿನಲ್ಲಿ ವಿಶೇಷ ಕೆಳಡಬ್ಬಿಯಲ್ಲಿ ಪೆಟ್ಟಿಗೆಯಿರಿಸಿ, ನಾನು ಮೇಲೆ ಹತ್ತಿದೆ. ೭:೧೦ರ ಬಸ್ಸು ಭರದಿಂದ ಮುಂದೋಡಿತು. ಬಸ್ಸಿಗೇ ೮೮೦ ಯೆನ್ ಆದರೆ ಎಂದು ಲೆಕ್ಕ ಹಾಕುತ್ತಿದ್ದ ಮನಸ್ಸು ಹಿಂದೋಡಿತು.&lt;br /&gt;&lt;br /&gt;ಒಂದೊಂದೇ ಮುಖಗಳು ನೆನಪಿಗೆ ಬಂದವು.....&lt;br /&gt;"ವಾಟಪ್ಪಾ!ಯು ಆರ್ ಗೋಯಿಂಗ್ ದೇರ್ ಫಾರ್ ಟೂ ಇಯರ್ಸ್; ಡೋಂಟ್ ಥಿಂಕ್ ದಟ್ ಯು ವಿಲ್ ಬಿ ಬ್ಯಾಕ್ ಇನ್ ತ್ರೀ ಮಂಥ್ಸ್...ಯು ಗಿವ್ ದಿಸ್ ವಿಭೂತಿ ಅಂಡ್ ದಿಸ್ ಸಿಡಿ ಟು ಮೈ ಬಾಯ್ ದೇರ್" ಎನ್ನುತ್ತಾ ೭೦೦೦ ಯೆನ್ ಕೈಲಿರಿಸಿ "ದಿಸ್ ಈಸ್ ಫಾರ್ ಯು" ಎಂದ ಕನ್ನಡ ಬಾರದ ಎಸ್‍ಜಿಎಂ....&lt;br /&gt;&lt;br /&gt;"ಲೋ ಭಟ್ಟಾ! ನಮ್ಮ ಬ್ಯಾಚ್ ಹುಡುಗರು ಬೇಗ ಜಪಾನಿಗೆ ಬರಲಿ ಅಂತ ಯಾವ್ದಾದ್ರೂ ಹೋಮ-ಗೀಮ ಮಾಡೋ ಅಲ್ಲಿ!" ಎನ್ನುತ್ತಿದ್ದ ಆಫೀಸಿನ ಗೆಳೆಯರು......&lt;br /&gt;&lt;br /&gt;"ಆನ್ ಫ್ಲೈಟ್ ಯು ಹಾವ್ ಮಚ್ ಟೈಮ್; ಡೋಂಟ್ ವೇಸ್ಟ್ ಟೈಮ್, ಯು ಆರ್ ಗೋಯಿಂಗ್ ಟು ಡು &lt;em&gt;ಗೆಂಚಿ ಚೋಸೈ&lt;/em&gt;[on site debugging]ಐ ಸೇ - ಗೋ ಥ್ರೂ &lt;em&gt;ಶಿಯೋಶೊ&lt;/em&gt;[Specification document]" ಎಂದು (ಅವರಿಗೂ?) ಸರಿಯಾಗಿ ಅರ್ಥವಾಗದಿದ್ದ ಪ್ರಾಜೆಕ್ಟಿನ ಏನೋ ಒಂದಿಷ್ಟು ಹಸ್ತಪ್ರತಿಯನ್ನು ಕೈಲಿಟ್ಟ ಜಿಎಂ.......&lt;br /&gt;&lt;br /&gt;"ರೀ, ನೀವೀಗ ಹೋಗುತ್ತಿರೋದು ಕ್ಲೈಂಟ್ ಜಾಗಕ್ಕೆ... ಮೀಸೆ ಬೋಳಿಸಿಬಿಡ್ರೀ.." ಎಂದ ಎಂಡಿ! ಹದವಾಗಿ ಬೆಳೆದಿದ್ದ ಮೀಸೆ ಬೋಳಿಸುವ ಹಾಗಾಯ್ತಲ್ಲಾ ಎಂದೀಗ ಇಲ್ಲದ ಮೀಸೆಯ ಮೇಲೆ ಕೈಯಾಡಿಸಿಕೊಂಡೆ! ನನ್ನ ಸ್ವಂತವಿಚಾರಕ್ಕೂ ಸ್ವಾತಂತ್ರ್ಯ ಕೊಡುವುದಿಲ್ಲ - ದರಿದ್ರದವು! ಎಂದು ಬೈದುಕೊಂಡೆ....&lt;br /&gt;&lt;br /&gt;"ಹೇಗೋ ಸ್ವಲ್ಪ ಕಷ್ಟಪಡು ಪುಟ್ಟಾ, ಆಮೇಲೆ ಹೇಗಾದರೂ ಗೆದ್ದು ಬರಬಹುದು" ಎನ್ನುತ್ತಿದ್ದ ಅಪ್ಪ....&lt;br /&gt;&lt;br /&gt;"ನಿನ್ನ ಆರೋಗ್ಯ ನೋಡಿಕೊಳ್ಳೋ... ತೀರಾ ದುಡ್ಡು ಉಳಿಸಿ ಕಳಿಸಬೇಕಾಗಿಲ್ಲ, ನಿನ್ನ ಊಟ-ತಿಂಡಿ ಖರ್ಚು ಚೆನ್ನಾಗಿ ನೋಡಿಕೋ.. ಎರಡು ವರ್ಷವೇನು, ಬೇಗ ಬಂದುಬಿಡುತ್ತದೆ" ಎನ್ನುತ್ತಿದ್ದ ಅಮ್ಮ....&lt;br /&gt;&lt;br /&gt;"ಅಣ್ಣಾ! ನನಗೆ ನಿನ್ನ ಸಹಾಯ ಈಗ ಬೇಕಾಗಿತ್ತು ಕಣೋ... ಪರೀಕ್ಷೆ ಹತ್ತಿರದಲ್ಲೇ ಇದೆ... ಆಗಾಗ ಇ-ಮೇಲ್ ಮಾಡುತ್ತಿರೋ" ಎನ್ನುತ್ತಿದ್ದ ತಮ್ಮ.....&lt;br /&gt;&lt;br /&gt;ನನ್ನ ಮನಸ್ಸು ಎಲ್ಲೋ ಹೊರಟುಹೋಗಿತ್ತು! ನಿಟ್ಟುಸಿರಿಟ್ಟು ಹೊರಗೆ ನೋಡಿದೆ - ವಿಶಾಲವಾದ ಸಮುದ್ರ; ಆಗ ತಾನೆ ಹುಟ್ಟಿದ್ದ ಸೂರ್ಯ; ಆ ಶರಧಿಯ ಮೇಲೆ ಎತ್ತರದ ದೊಡ್ಡ ಸೇತುಬಂಧ! ಅದರ ಮೇಲೆ ಶರವೇಗದಲ್ಲಿ ಸಾಗಿದ್ದ ನಾನಿದ್ದ ಬಸ್ಸು! ಎತ್ತಣಿಂದೆತ್ತಣ ಸಂಬಂಧವಯ್ಯಾ.... ಎಂದುಕೊಳ್ಳುತ್ತಿದ್ದಂತೆ ನಾನೇ ಬರೆದ ಕವಿತೆಯ ನೆನಪಾಯಿತು.&lt;br /&gt;&lt;a href="http://photos1.blogger.com/blogger/550/1446/1600/kansai_closeup.jpg"&gt;&lt;img style="FLOAT: right; MARGIN: 0px 0px 10px 10px; CURSOR: hand" alt="" src="http://photos1.blogger.com/blogger/550/1446/320/kansai_closeup.jpg" border="0" /&gt;&lt;/a&gt;&lt;br /&gt;&lt;/div&gt;&lt;div align="left"&gt;&lt;br /&gt;&lt;strong&gt;&lt;em&gt;&lt;u&gt;ಕಾಲವೆಂಬುದು ಶರಧಿ!&lt;/u&gt;&lt;/em&gt;&lt;/strong&gt;&lt;/div&gt;&lt;strong&gt;&lt;em&gt;&lt;u&gt;&lt;div align="left"&gt;&lt;br /&gt;&lt;/u&gt;&lt;/em&gt;&lt;/strong&gt;&lt;/div&gt;ಜೀವಿಜೀವಿಗೂ ಜೀವವನೆರೆದು &lt;div align="left"&gt;ಜಾಲದಿ ಕೆಡವುತ ಸರ್ವರ ಸಕಲವ&lt;/div&gt;&lt;div align="left"&gt;ಸುಳಿಯಿಂದೆತ್ತಿ ಬುಗುರಿಯಾಡಿಸಿ ಮತ್ತೆ&lt;/div&gt;&lt;div align="left"&gt;ನೀರವದ ನೀರೆರಚಿ ಜೃಂಭಿಸುವ ಕಾಲವೆಂಬುದು ಶರಧಿ !&lt;/div&gt;&lt;div align="left"&gt;&lt;/div&gt;&lt;div align="left"&gt;&lt;br /&gt;ಏರುತ ಜಾರುತ ಕರ್ಷಕ ಭರತಕೆ&lt;/div&gt;&lt;div align="left"&gt;ತಿಂಗಳ ಮುಟ್ಟುವ ಹರ್ಷದ ಮೊರೆತದಿ&lt;/div&gt;&lt;div align="left"&gt;ಬೆದರದೆ ಬೆಚ್ಚದೆ ಉಲ್ಕಾಪಾತಕೆ&lt;/div&gt;&lt;div align="left"&gt;ಮಾರ್ದನಿಪ ಮೊಗವನಾಕಳಿಸಿ ನುಂಗುವ ಕಾಲವೆಂಬುದು ಶರಧಿ !&lt;/div&gt;&lt;div align="left"&gt;&lt;/div&gt;&lt;div align="left"&gt;&lt;br /&gt;ಬಿಸಿಯಾಗದೆ ಬಡಬಾನಲದುಷ್ಣಕೆ&lt;/div&gt;&lt;div align="left"&gt;ಆಸ್ಪದವೀಯದೆ ತಟದಲಿ ತೃಣಕೆ&lt;/div&gt;&lt;div align="left"&gt;ಸುತ್ತೆದ್ದ ಮಳಲರಾಶಿಯ ಸ್ವಪ್ನಸೌಧಗಳ&lt;/div&gt;&lt;div align="left"&gt;ಮತ್ತೆಳೆದು ಒಳಗೆ ನಿಡುಸುಯ್ಯುವ ಕಾಲವೆಂಬುದು ಶರಧಿ !&lt;/div&gt;&lt;div align="left"&gt;&lt;/div&gt;&lt;div align="left"&gt;&lt;br /&gt;ಮೆಲ್ಲುತ ಮುತ್ತನು ಚೆಲ್ಲುತ ಮರಳನು&lt;/div&gt;&lt;div align="left"&gt;ಮಿದಿಯುತ ಕದಿಯುತ ಹರಣಾಭರಣವ&lt;/div&gt;&lt;div align="left"&gt;ತಿರೆಗೇ ತಿರುಗಿಸಿ ಸುರಿಯುತ ಹುಯ್ಯುವ&lt;/div&gt;&lt;div align="left"&gt;ಕಾಲವೆಂಬುದು ಶರಧಿ ! ಮಲಿನ ಮನುಜಗೆ ವಿಧಿಯ ಪರಿಧಿ !&lt;/div&gt;&lt;div align="left"&gt;&lt;br /&gt;&lt;/div&gt;&lt;div align="left"&gt;(- &lt;em&gt;ನನ್ನ ಕವನಸಂಕಲನದಿಂದ &lt;/em&gt;)&lt;/div&gt;&lt;div align="left"&gt;&lt;br /&gt;ಕಾಲವೇ ಸಮುದ್ರ ಎಂದು ಊಹಿಸಿ, ಸಮುದ್ರವನ್ನೇ ಕಾಲವನ್ನಾಗಿಸಿ ಪರಿಧಿಯೊಳಗೆ ನಿಂತ ಮಾನವಕುಲ! ಅಂಥಾ ಸಮುದ್ರಕ್ಕೇ ಸೇತುವೆಯೇ?! ದ್ವೀಪದ ವಿಮಾನನಿಲ್ದಾಣದಿಂದ ಓಸಾಕಾ ತಲುಪಲು ಇನ್ನೂ ೪೫ ನಿಮಿಷ ಬೇಕಿತ್ತು... ಹಗುರವಾಗಿ ನಕ್ಕೆ; ನಂತರ ನಿದ್ದೆಯ ತೆಕ್ಕೆ!&lt;/div&gt;&lt;div align="left"&gt;&lt;br /&gt;(&lt;em&gt;&lt;span style="color:#000099;"&gt;ವಿಕಿಪೀಡಿಯ ಚಿತ್ರ: ಮಾನವನಿರ್ಮಿತ ದ್ವೀಪದ ಕಾನ್ಸಾಯ್ ವಿಮಾನ ನಿಲ್ದಾಣ ಹಾಗೂ ಸೇತುವೆಯ ವಿಹಂಗಮ ನೋಟ&lt;/span&gt;&lt;/em&gt; ) &lt;/div&gt;&lt;div align="left"&gt;&lt;br /&gt;(&lt;em&gt;ಸಶೇಷ&lt;/em&gt;)&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/29152559-114950667435342300?l=kannadaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaputa.blogspot.com/feeds/114950667435342300/comments/default' title='Post Comments'/><link rel='replies' type='text/html' href='http://www.blogger.com/comment.g?blogID=29152559&amp;postID=114950667435342300' title='0 Comments'/><link rel='edit' type='application/atom+xml' href='http://www.blogger.com/feeds/29152559/posts/default/114950667435342300'/><link rel='self' type='application/atom+xml' href='http://www.blogger.com/feeds/29152559/posts/default/114950667435342300'/><link rel='alternate' type='text/html' href='http://kannadaputa.blogspot.com/2006/06/blog-post_114950667435342300.html' title='ನನ್ನ ಜಪಾನ್ ಪ್ರವಾಸ : ೧. ಬಂದಿಳಿದೆ!'/><author><name>Buddha</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-29152559.post-114949471927930053</id><published>2006-06-05T17:04:00.000+09:00</published><updated>2006-06-07T10:36:53.193+09:00</updated><category scheme='http://www.blogger.com/atom/ns#' term='ನನ್ನ ಜಪಾನ್ ಪ್ರವಾಸ'/><title type='text'>ನನ್ನ ಜಪಾನ್ ಪ್ರವಾಸ</title><content type='html'>&lt;strong&gt;ಜಪಾನಿನಲ್ಲಿ ಬೆನಕ&lt;/strong&gt;&lt;br /&gt;&lt;br /&gt;ಇದನ್ನು 'ಪ್ರವಾಸಕಥನ'ಕ್ಕಿಂತ 'ಸ್ವಚರಿತ'ಎಂದರೆ ಚೆನ್ನಾದೀತು! ನಿಮ್ಮೆಲ್ಲರ ಪ್ರೋತ್ಸಾಹ ಸಿಗುವುದಾದರೆ, ನನ್ನ ಜಪಾನ್ ಪ್ರ-ವಾಸದ ಕಥೆಯನ್ನು ನನ್ನದೇ ರೀತಿಯಲ್ಲಿ ಹೇಳಬಯಸುತ್ತೇನೆ. ಕುತೂಹಲಿ ಕನ್ನಡ ಚಾತಕಪಕ್ಷಿಗಳಿಗೆ ನನ್ನ ಅನುಭವದ ಹನಿ ಹರಿಸಹೊರಟ ಪ್ರಯತ್ನಕ್ಕೆ ನಿಮ್ಮ ಮೆಚ್ಚುಗೆಯೇ ಸನ್ಮಾನ. ನನ್ನ ಪ್ರವಾಸದ ಎಳೆಗಳನ್ನು ನಿಮ್ಮೆದುರು ಕಂತುಗಳಲ್ಲಿ ಬಿಡಿಸಿಡುತ್ತೇನೆ. ಹೊರನಾಡಿನ ನಾ ಹಳೆಯ ಕವಿ - ನೀಡಿರೆನಗೆ ನಿಮ್ಮ ಕಿವಿ !&lt;br /&gt;ನಿಮ್ಮವ&lt;br /&gt;&lt;br /&gt;ಬೆನಕ&lt;br /&gt;&lt;br /&gt;ಜಪಾನ್&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/29152559-114949471927930053?l=kannadaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaputa.blogspot.com/feeds/114949471927930053/comments/default' title='Post Comments'/><link rel='replies' type='text/html' href='http://www.blogger.com/comment.g?blogID=29152559&amp;postID=114949471927930053' title='0 Comments'/><link rel='edit' type='application/atom+xml' href='http://www.blogger.com/feeds/29152559/posts/default/114949471927930053'/><link rel='self' type='application/atom+xml' href='http://www.blogger.com/feeds/29152559/posts/default/114949471927930053'/><link rel='alternate' type='text/html' href='http://kannadaputa.blogspot.com/2006/06/blog-post_05.html' title='ನನ್ನ ಜಪಾನ್ ಪ್ರವಾಸ'/><author><name>Buddha</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry><entry><id>tag:blogger.com,1999:blog-29152559.post-114923947288398606</id><published>2006-06-02T18:10:00.000+09:00</published><updated>2006-06-07T10:37:20.320+09:00</updated><title type='text'>ಸ್ವಾಗತ!</title><content type='html'>ಕರುನಾಡ ಕರಿಮೊಗವ ಹೊತ್ತ ಬೆನಕ! ಇದೋ ನಿನಗೆ ನಮನ!&lt;br /&gt;ನಮಿಸಿ ನಾರಾಯಣನ ನರನ ವಾಗ್ದೇವಿಯರ ಬಳಿಕ ಪೇಳ್ವುದು ಜಯವ!&lt;br /&gt;&lt;br /&gt;ಎಲ್ಲ ಕನ್ನಡಿಗರಿಗೂ ನಮಸ್ಕಾರ. ಸ್ವಾಗತ! ಕನ್ನಡವನ್ನು ಬೆಳೆಸುವ ನನ್ನ ಸಣ್ಣ ಪ್ರಯತ್ನರೂಪವಾಗಿ ಎಲ್ಲ ಕನ್ನಡಿಗರಿಗೂ ಈ ಹೊಸ ಕನ್ನಡಪುಟವನ್ನು ಸಮರ್ಪಿಸುತ್ತಿದ್ದೇನೆ.ನಿಮ್ಮೆಲ್ಲರ ಆಶೀರ್ವಾದ, ಬೆಂಬಲ, ಪ್ರೋತ್ಸಾಹ ಈ ಮೂಲಕ ಕನ್ನಡಕ್ಕೆ ಸಿಗಲೆಂದು ಹಾರೈಸುತ್ತೇನೆ.&lt;br /&gt;&lt;br /&gt;ಪುಟವಿಡಲು ನುಡಿಯೇನು, ನೆಲವೇನು ಹೊಳೆವುದೀ ನಾಡಿನಲಿ ಚಿನ್ನವಾಗಿ.......&lt;br /&gt;ಸಿರಿಗನ್ನಡಂ ಗೆಲ್ಗೆ ! ಸಿರಿಗನ್ನಡಂ ಬಾಳ್ಗೆ !&lt;br /&gt;ಕನ್ನಡಿಗ&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/29152559-114923947288398606?l=kannadaputa.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kannadaputa.blogspot.com/feeds/114923947288398606/comments/default' title='Post Comments'/><link rel='replies' type='text/html' href='http://www.blogger.com/comment.g?blogID=29152559&amp;postID=114923947288398606' title='0 Comments'/><link rel='edit' type='application/atom+xml' href='http://www.blogger.com/feeds/29152559/posts/default/114923947288398606'/><link rel='self' type='application/atom+xml' href='http://www.blogger.com/feeds/29152559/posts/default/114923947288398606'/><link rel='alternate' type='text/html' href='http://kannadaputa.blogspot.com/2006/06/blog-post.html' title='ಸ್ವಾಗತ!'/><author><name>Buddha</name><email>noreply@blogger.com</email><gd:image rel='http://schemas.google.com/g/2005#thumbnail' width='16' height='16' src='http://img2.blogblog.com/img/b16-rounded.gif'/></author><thr:total>0</thr:total></entry></feed>
